ನೆರೆ ಸಂತ್ರಸ್ತರಿಗೆ ಪರಿಹಾರ- ರಾಜ್ಯವು ಎದುರಿಸುತ್ತಿರುವ ಈ ಕ್ಷಣದ ಜ್ವಲಂತ ಸಮಸ್ಯೆ. ಒಂದೆಡೆ, ನೆರೆ ಪರಿಹಾರಕ್ಕೆ ಕೇಂದ್ರದ ನೆರವು ಕೊಡಿಸುವಲ್ಲಿ ವಿಫಲರಾಗಿರುವ ಸಂಸದರು, ಇನ್ನೊಂದು ಕಡೆ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುವ ಸಿಎಂ... ಹೀಗೆ ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಾಗಿದೆ. ಇವೆಲ್ಲದರ ನಡುವೆ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಇಲ್ಲಿದೆ ಡೀಟೆಲ್ಸ್...
News Oct 4, 2019, 1:32 PM IST
ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ಡಿವಿ ಸದಾನಂದಗೌಡ ನಡುವೆ ನಡೆದಿದ್ದ ಟ್ವೀಟ್ ಸಮರ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ಬಂದಿದೆ.
News Oct 4, 2019, 1:20 PM IST
ರಾಜ್ಯದಲ್ಲಿ ಯಾವುದೇ ರೀತಿಯಾದ ಹಣಕಾಸಿನ ಕೊರೆತ ಇಲ್ಲ. ನೆರೆ ಪರಿಹಾರಕ್ಕೆ ಶೀಘ್ರ ಹಣ ಬಿಡುಗಡೆಯಾಗಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
News Oct 4, 2019, 1:05 PM IST
ಒಂದೆಡೆ ರಾಜ್ಯ ಬೊಕ್ಕಸ ಖಾಲಿ ಖಾಲಿ, ಇನ್ನೊಂದೆಡೆ ಸಿಎಂ ಕರೆದ ಸಭೆಯಲ್ಲೂ ಕುರ್ಚಿಗಳು ಖಾಲಿ ಖಾಲಿ. ಹೌದು, ಬೆಳಗಾವಿಯಲ್ಲಿಂದು ಇಂತಹ ಘಟನೆ ನಡೆದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ನಡೆಯಬೇಕಾಗಿದ್ದ ಅಹವಾಲು ಸಭೆಗೆ ನೆರೆ ಸಂತ್ರಸ್ತರೇ ಬಂದಿಲ್ಲ! ಇಲ್ಲಿದೆ ವಿವರ...
News Oct 4, 2019, 12:35 PM IST
ರಾಜ್ಯ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರಿಗಾಗಿ 230 ಕೋಟಿ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
Karnataka Districts Oct 4, 2019, 12:04 PM IST
ರಾಜ್ಯ ಬೊಕ್ಕಸ ಖಾಲಿಯಾಗಿದೆ, ನೆರೆ ಪರಿಹಾರ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಗುರುವಾರ ನೆರೆಹಾನಿ ಪರಿಶೀಲನೆಗೆ ಬೆಳಗಾವಿಗೆ ಸಿಎಂ ತೆರಳಿದ್ದರು. ನೆರೆ ಹಾನಿ ಬಗ್ಗೆ ಬೆಳಗಾವಿಯ ಜಿಪಂ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಖಜಾನೆ ಖಾಲಿ ವಿಚಾರವನ್ನು ಬಹಿರಂಗಪಡಿಸಿದ್ದರು.
News Oct 4, 2019, 12:01 PM IST
ನೆರೆ ಪರಿಹಾರದ ವಿಚಾರದಲ್ಲಿ ತಾಕತ್ತು ತೋರಲು ಇದು ಕುಸ್ತಿ ಅಖಾಡವಲ್ಲ ಎಂದು ಸಚಿವ ಸಿಸಿ ಪಾಟೀಲ್ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
News Oct 4, 2019, 11:49 AM IST
ನಿರಂತರವಾಗಿ ಸುರಿದ ಮಳೆ, ನೆರೆ ಹಾವಳಿಗೆ ಮಲಪ್ರಭಾ ಅಣೆಕಟ್ಟೆಯ ಕೆಳಭಾಗದ ಸವದತ್ತಿ ತಾಲೂಕಿನ ಗ್ರಾಮಗಳ ಜನರು ಭಾರಿ ಸಂಕಷ್ಟ ಅನುಭವಿಸಿದ್ದು, ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಅಣೆಕಟ್ಟೆಗೆ ಸಂಗ್ರಹಗೊಂಡ ಹೆಚ್ಚಿನ ಪ್ರಮಾಣದ ನೀರನ್ನು ಪದೆ ಪದೇ ಹೊರ ಬಿಟ್ಟಿರುವುದರಿಂದ ಒಮ್ಮೆ ಮುಳಗಡೆಯಾದ ನದಿ ಪಾತ್ರದ ಜನರು ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಮುಳುಗಡೆಯ ಸಂಕಷ್ಟ ಅನುಭವಿಸಿದ್ದರು. ಮುನವಳ್ಳಿಯ ಭಾಗವೆಲ್ಲ ಮಲಪ್ರಭಾ ನೀರಲ್ಲಿ ಮುಳುಗಿ ಹೋಗಿದ್ದು ಅಂಗಡಿ ಮತ್ತು ಮನೆಗಳಲ್ಲಿನ ಎಲ್ಲ ವಸ್ತುಗಳು ಸಂಪೂರ್ಣ ನಾಶವಾಗಿ ಸಂಕಷ್ಟಕ್ಕೆ ದೂಡಿತ್ತು.
Karnataka Districts Oct 4, 2019, 11:31 AM IST
ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿದ್ದ ಹೊಳೆ ಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಸಾಂಕ್ರಾಮಿಕ ರೋಗದ ಬಾಧೆ ಕಾಣಿಸಿಕೊಂಡಿದೆ.
Karnataka Districts Oct 4, 2019, 10:22 AM IST
ಪ್ರವಾಹ ಪೀಡಿತ ಜನರಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
News Oct 4, 2019, 9:36 AM IST
ಬೆಂಗಳೂರು (ಅ. 03) ಉತ್ತರ ಕರ್ನಾಟಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ತಾರತಮ್ಯ ಧೋರಣೆ ವಿರೋಧಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು. ರಾಜ್ಯ ಪೊಲೀಸ್ ನಿವೃತ್ತ ಮಹಾನಿರ್ದೇಶಕ ಶಂಕರ್ ಬಿದರಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
Karnataka Districts Oct 3, 2019, 10:23 PM IST
ರಾಜ್ಯದಲ್ಲಿ ಉಂಟಾಗಿರುವ ನೆರೆ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಹೇಳಿಕೊಂಡು ಸುತ್ತಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಸಲಿ ಮಾತು ಬಯಲಾಗಿದೆ.
News Oct 3, 2019, 10:03 PM IST
ಪರಿಹಾರ ನೀಡುವಂತೆ ಮೋದಿ ಅವರನ್ನು ಕೇಳಿ ಎಂದು ಹೇಳಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧವೇ ಮೈಸೂರು ಸಂಸದ ಪ್ರತಾಪ್ ಸಿಂಹ ಕೊಂಕು ಮಾತುಗಳನ್ನಾಡಿದ್ದಾರೆ.
News Oct 3, 2019, 6:10 PM IST
ಪ್ರವಾಹದ ಸಂದರ್ಬದಲ್ಲಿ ಸಂತ್ರಸ್ತರನ್ನು ಕಾಪಾಡಿದ ಜೀಪ್ಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಹಾಕಲಾಗಿದೆ. ಕಷ್ಟದಲ್ಲಿರುವಾಗ ಇಲ್ಲದ ನಿಯಮ ಈಗೇಕೆ ಎಂದು ಜೀಪ್ ಮಾಲೀಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.
Automobile Oct 3, 2019, 5:51 PM IST
ಪ್ರವಾಹ ವೀಕ್ಷಣೆಗೆ ತೆರಳಿದ್ದ ಸಂಸದ ಫೋಟೋಗೆ ಫೋಸ್ ನೀಡಲು ಹೋಗಿ ಕೊಚ್ಚೆಗೆ ಬಿದ್ದ| ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತೀವ್ರ ಮುಜುಗರಕ್ಕೀಡಾದ ನಾಯಕ|
News Oct 3, 2019, 5:17 PM IST