ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಈ ಸ್ಟೋರಿ ನೋಡಲೇಬೇಕು. ಕೊರೊನಾದಿಂದ ಸಾವನ್ನಪ್ಪಿದ್ರೆ ಎಂಥಾ ಪರಿಸ್ಥಿತಿ ಬರುತ್ತೆ? ಈ ದೃಶ್ಯ ನೋಡಿದರೆ ದಂಗಾಗಿ ಹೋಗುತ್ತೀರಿ. ಒಂದೇ ಗುಂಡಿಯಲ್ಲಿ 3 ಶವಗಳನ್ನು ಎಸೆದು ಮಣ್ಣು ಮುಚ್ಚಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ. ಅಂತ್ಯಸಂಸ್ಕಾರವನ್ನು ಈ ರೀತಿಯೂ ಮಾಡಲಾಗುತ್ತಾ? ಎಂದು ದಂಗಾಗುವುದು ಗ್ಯಾರಂಟಿ. ಈ ವಿಡಿಯೋ ಬಳ್ಳಾರಿಯದ್ದು ಎನ್ನಲಾಗಿದ್ದು, ಜಿಲ್ಲಾಡಳಿತ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 30, 2020, 10:39 AM IST
ಸೋಮವಾರ ನಡೆದ ಎಸ್ಎಸ್ಎಲ್ಸಿಯ ವಿಜ್ಞಾನ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 109 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಾಪು ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಗೆ ಈ ಪರೀಕ್ಷೆ ಬರೆಯುವುದಕ್ಕೆ ಅನಿವಾರ್ಯವಾಗಿ ಅವಕಾಶ ಸಿಗಲಿಲ್ಲ.
Karnataka Districts Jun 30, 2020, 8:27 AM IST
ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಎಸ್ಕೇಪ್ ಆಗುತ್ತಿರುವುದು ಮೊದಲೇನಲ್ಲ. ಹಲವರು ಐಸೋಲೇಶನ್ ವಾರ್ಡ್, ಕ್ವಾರಂಟೈನ್ ಸೆಂಟರ್, ಆಸ್ಪತ್ರೆಗಳಿಂದ ಪಲಾಯನ ಮಾಡಿದ್ದಾರೆ. ಹೀಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಿಂದ ಎಸ್ಕೇಪ್ ಆದ ಕೊರೋನಾ ಸೋಂಕಿತನನ್ನು ಕುಟುಂಬ ಸದಸ್ಯರೇ ಮತ್ತೆ ಆಸ್ಪತ್ರೆ ಸೇರಿಸಿದ್ದಾರೆ.
Bengaluru-Urban Jun 29, 2020, 7:30 PM IST
ಕೊರೋನಾ ವಿರುದ್ಧದ ಹೋರಾಟ ಮುಂದುವರಿದೆ ಇದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿತ್ತು.
Karnataka Districts Jun 29, 2020, 6:20 PM IST
ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ| ಸಾಯುವ ಮುನ್ನ ಕೊರೋನಾ ರೋಗಿ ಮಾಡಿದ ವಿಡಿಯೋ ವೈರಲ್| ಆಸ್ಪತ್ರೆ ಆಸಳಿತ ಮಂಡಿ ಕೊಟ್ಟಿದೆ ಸ್ಪಷ್ಟನೆ
India Jun 29, 2020, 4:38 PM IST
ರಾಮನಗರ(ಜೂ.29): ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಧೈರ್ಯ ತುಂಬಿದ್ದಾರೆ. ಅಡ್ಮಿನ್ ಬ್ಲಾಕಿನಲ್ಲಿ ಕೂತು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಜತೆ ಮಾತನಾಡಿದ ಅವರು, ರೋಗಕ್ಕೆ ಹೆದರಬೇಡಿ. ನಿಮಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ.
Karnataka Districts Jun 29, 2020, 11:15 AM IST
ಕೊರೊನಾ ಹೊಡೆತಕ್ಕೆ ಸಿಲಿಕಾನ್ ಸಿಟಿ ಕಂಗಾಲಾಗಿ ಹೋಗಿದೆ. ಜನರ ಆತಂಕ ಇನ್ನಷ್ಟು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಬೆಡ್ಗಳು ಫುಲ್ ಆಗಿವೆ. ಇದಕ್ಕೆ ಕಾರಣ ಆಸ್ಪತ್ರಯಿಂದ ಡಿಸ್ಚಾರ್ಜ್ ಆಗುವವರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ.
state Jun 29, 2020, 10:30 AM IST
ಮಂಗಳೂರು(ಜೂ. 28) ಕೊರೋನಾದಿಂದ ಮೃತಪಟ್ಟ ಯುವಕನ ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ಬೋಳಾರ ಬಳಿ ಪರಿಸ್ಥಿತಿ ಬಿಗಾಡಯಿಸಿತ್ತು.
Karnataka Districts Jun 28, 2020, 7:43 PM IST
ಹಲವು ದೂರುಗಳು ಬಂದ ಹಿನ್ನೆಲೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿ ನೀಡಿ ಆದೇಶ ಹೊರಡಿಸಿದೆ.
state Jun 28, 2020, 2:56 PM IST
ಕೊರೋನಾ ರೋಗಿಗಳಿಗೆ ಅಗ್ಗದ ಸ್ಟೆರಾಯ್ಡ್ ನೀಡಲು ಒಪ್ಪಿಗೆ| ಚಿಕಿತ್ಸೆಯ ವಿಧಾನದಲ್ಲಿ ಡೆಕ್ಸಾಮೆಥಸೋನ್ ಸೇರಿಸಿದ ಆರೋಗ್ಯ ಇಲಾಖೆ
India Jun 28, 2020, 11:59 AM IST
ಜಿಗಣಿ ಪರೀಕ್ಷಾ ಕೇಂದ್ರದ ಪಕ್ಕದಲ್ಲಿರೋ ಪಟ್ಟಾಲಮ್ಮ ಬಡಾವಣೆ ಗರ್ಭಿಣಿಗೆ ಕೊರೊನಾ ಪಾಸಿಟೀವ್ ಬಂದಿದ್ದು ವಿದ್ಯಾರ್ಥಿಗಳಿಗೆ ಟೆನ್ಷನ್ ಶುರುವಾಗಿದೆ. ನಿತ್ಯಾನಂದ ಶಾಲೆಗೆ ತೆರಳುವ ಮಕ್ಕಳಿಗೆ ಭಯ ಶುರುವಾಗಿದೆ. ಮಹಿಳೆ ವಾಸವಿದ್ದ ಕಟ್ಟಡದ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಉಳಿದ ಮಕ್ಕಳಿಗೆ ಭಯ ಶುರುವಾಗಿದೆ. ಶಿಕ್ಷಣಾಧಿಕಾರಿಗಳು, ಪೊಲೀಸರು, ಆಡಳಿತ ಮಂಡಳಿಯವರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಂದು ಗಣಿತ ಪರೀಕ್ಷೆ ಬೇರೆ, ಮಕ್ಕಳಿಗೆ ಇದೊಂದು ಟೆನ್ಷನ್ ಜೊತೆಗೆ ಈ ಭಯವೂ ಸೇರಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 27, 2020, 1:26 PM IST
99 ವರ್ಷದ ಮಹಿಳಾ ಕೊರೋನಾ ರೋಗಿ ಚೇತರಿಕೆ!| ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಗುಣಮುಖರಾಗಿ ಬಿಡುಗಡೆ| ಇದು ರಾಜ್ಯದಲ್ಲೇ ಅತಿ ಹಿರಿಯ ರೋಗಿಯೊಬ್ಬರ ಚೇತರಿಕೆ ಪ್ರಕರಣ?
state Jun 27, 2020, 10:59 AM IST
ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 9ನೇ ಸಾವು ಸಂಭವಿಸಿದೆ. ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ನಗರದ ರೇಡಿಯೋಪಾರ್ಕ್ ಪ್ರದೇಶದ 65 ವರ್ಷದ ಮಹಿಳೆಯನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಬಳಿಕ ಗಂಟಲುದ್ರವ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಪಾಸಿಟೀವ್ ಇರುವುದು ದೃಢಗೊಂಡಿದೆ.
Karnataka Districts Jun 27, 2020, 10:11 AM IST
ಜಿಲ್ಲೆಯಲ್ಲಿ ಈವರೆಗೆ ಒಟ್ಟು 283 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 7 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ 237 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 39 ಸಕ್ರಿಯ ಕೇಸ್ಗಳಿದ್ದು, ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka Districts Jun 27, 2020, 9:50 AM IST
30 ವರ್ಷದ ಬಳಿಕ ಗೊತ್ತಾಯ್ತು ‘ಅವಳು’ ಅವಳಲ್ಲ ‘ಅವನು’!| ಹೆಣ್ಣಿನ ದೇಹ ರಚನೆ, ಅನುವಂಶೀಯವಾಗಿ ಗಂಡು| 22 ಸಾವಿರ ಮಂದಿಯಲ್ಲಿ ಒಬ್ಬರಿಗೆ ಈ ರೋಗ
India Jun 27, 2020, 8:14 AM IST