ಬುಧವಾರ ರಾತ್ರಿ ಕೇಂದ್ರ ಸರ್ಕಾರ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದರೆ ಗುರುವಾರ ಸಂಜೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಹಾಗಾದರೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಯಾವ ರಿಯಾಯಿತಿ ನೀಡಿದೆ?
Karnataka Districts Jul 30, 2020, 6:45 PM IST
ಈ ಭಾನುವಾರದಿಂದ ದಿನಪೂರ್ತಿ ಲಾಕ್ ಡೌನ್ ಇರುವುದಿಲ್ಲ. ಹೌದು ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ಗೆ ಅಂತ್ಯ ಹಾಡುವ ಚಿಂತನೆ ನಡೆಸಿದೆ.
Karnataka Districts Jul 30, 2020, 5:59 PM IST
ಕೊರೋನಾ ಮತ್ತು ಲಾಕ್ಡೌನ್ ನಡುವೆ, ಬಡವರ ಪಾಲಿಗೆ ನೆರವಾದ ನಟ ಸೋನು ಸೂದ್ ಜುಲೈ 30 ರಂದು 47 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜುಲೈ 30, 1973 ರಂದು ಮೊಗಾದಲ್ಲಿ ಜನಿಸಿದರು. ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲು ತುಂಬಾ ಶ್ರಮವಹಿಸಿದ್ದಾರೆನಟ. ಸೋನು ಸೂದ್ ಮುಂಬೈಗೆ ಬಂದಾಗ, ಕೇವಲ ಐದುವರೆ ಸಾವಿರ ರೂಪಾಯಿಗಳನ್ನು ಹೊಂದಿದ್ದರಂತೆ. ಇಲ್ಲಿದೆ ನೋಡಿ ಲಾಕ್ಡೌನ್ ಹೀರೋ ಸೋನುವಿನ ಲೈಫ್ನ ಹೋರಾಟದ ವಿವರಗಳು.
Cine World Jul 30, 2020, 4:53 PM IST
17 ವರ್ಷದಲ್ಲೇ ಮೊದಲ ಸಲ ಮಾರುತಿ ಸುಜುಕಿಗೆ ನಷ್ಟ!| 4 ಲಕ್ಷ ಬದಲಿಗೆ ಕೇವಲ 76000 ಕಾರು ಮಾರಾಟ
Automobile Jul 30, 2020, 8:03 AM IST
ಸುಧಾರಾಣಿಯವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ಮುಂದೆ ನಿಂತು ಅಲ್ಲಿನ ಚಿಕಿತ್ಸೆಯ ವಿಧಾನದ ಬಗ್ಗೆ ಸಿಡಿದಿದ್ದನ್ನು ಎಲ್ಲರೂ ನೋಡಿರುತ್ತೀರ. ಅನ್ಯಾಯ ಕಂಡಾಗ ಅದರ ವಿರುದ್ಧ ಗಟ್ಟಿ ಧ್ವನಿಯಾಗುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಆಕ್ಷನ್ ಪಾತ್ರಗಳನ್ನು ನಿಭಾಯಿಸದಿದ್ದರೂ ಅವರ ಪಾತ್ರಗಳಲ್ಲಿನ ಗಂಡುಬೀರಿ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅಂಥವರು ಲಾಕ್ಡೌನ್ ದಿನ ಮತ್ತು ನಟನಾರಂಗ ಮೌನವಾದ ಘಳಿಗೆಗಳನ್ನು ಹೇಗೆ ಕಾಣುತ್ತಿದ್ದಾರೆ ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರೊಂದಿಗೆ ಮಾತನಾಡಿದಾಗ ಸಿಕ್ಕ ಒಂದಷ್ಟು ಆಕರ್ಷಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.
Interviews Jul 29, 2020, 5:51 PM IST
ಮುಂದಿನ 60 ದಿನಗಳಲ್ಲಿ ಕೊರೊನಾ ಮಹಾಸ್ಫೋಟವಾಗಲಿದೆ. ಮುಂದಿನ ಎರಡು ತಿಂಗಳು ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಲಿದೆ. ಆಗಸ್ಟ್- ಸೆಪ್ಟೆಂಬರ್ನಲ್ಲಿ ಕೊರೊನಾ ತಾರಕಕ್ಕೇರಲಿದೆ. ಸೆಪ್ಟೆಂಬರ್ ನಂತರ ಇಳಿಮುಖವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
state Jul 29, 2020, 12:49 PM IST
ಸಚಿವ ಡಾ. ಸುಧಾಕರ್ ಆಪ್ತ ಸಹಾಯಕನಿಗೆ ಕೊರೊನಾ ದೃಢಪಟ್ಟಿದ್ದು ಸುಧಾಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ನಾನು ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
state Jul 28, 2020, 5:53 PM IST
ಸಚಿವ ಎಸ್ ಟಿ ಸೋಮಶೇಖರ್ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದೀಗ ಸೋಮಶೇಖರ್ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು 7 ದಿನ ಸಾರ್ವಜನಿಕರಿಗೆ ಕಚೇರಿಗೆ ಪ್ರವೇಶವಿಲ್ಲ. ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಈ ಮಾಹಿತಿಯನ್ನು ತಿಳಿಸಿದ್ದಾರೆ.
state Jul 28, 2020, 3:11 PM IST
ಲಾಕ್ಡೌನ್ ದಿನವೇ ಮನಮಿಡಿಯುವ ಘಟನೆಯೊಂದು ನಡೆದಿದೆ. ಕೊಂಚ ಏರುಪೇರಾಗಿದ್ದರೂ ಎರಡು ಜೀವಗಳಿಗೆ ಕಂಟಕವಾಗುತ್ತಿತ್ತು. ತಾಯಿ ಮಗು ಉಳಿಸಿದೆ ಒಂದು ವಿಡಿಯೋ ಕಾಲ್..! ವಿಡಿಯೋ ಕಾಲ್ ಮೂಲಕ ವೈದ್ಯೆಯೊಬ್ಬರು ಡೆಲಿವರಿ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ. ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಹಾಯವಿಲ್ಲದೇ ಅಕ್ಕಪಕ್ಕದ ಮಹಿಳೆಯರು ಪರದಾಡುತ್ತಿದ್ದರು. ಆಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಗೆ ಕರೆ ಮಾಡಿ ಸಹಾಯಯಾಚಿಸಿದರು. ಡಾ. ಪ್ರಿಯಾಂಕ ಅವರಿಗೆ ಸ್ಪಂದಿಸಿದ್ದಾರೆ.
state Jul 28, 2020, 2:39 PM IST
ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಬಯಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ವಿಚಾರದಲ್ಲಿ ಅಧಿಕಾರಿಗಳು ಇಬ್ಬಗೆಯ ನಿಲುವು ಹೊಂದಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ! ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಗಣ್ಯರಿಗೆ ಸಿಕ್ಷೆಯೇ ಇಲ್ಲ. ಅವರ ನಡೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಬಣ್ಣ ಬಯಲಾಗಿದೆ. ವರದಿ ಕಂಡು ಹೈಕೋರ್ಟ್ ಸಿಜೆ ಎಎಸ್ ಓಕಾ ಕೆಂಡಾಮಂಡಲರಾಗಿದ್ದಾರೆ.
state Jul 28, 2020, 12:37 PM IST
ಕೊರೋನಾ ನಡುವೆಯೇ ಇನ್ನು ಅಭಿವೃದ್ಧಿಯತ್ತ ಗಮನ: ಸಿಎಂ| ಕೊರೋನಾದಿಂದ ಅಭಿವೃದ್ಧಿ ಕುಂಠಿತ, ಇನ್ನುಮುಂದೆ ಲಾಕ್ಡೌನ್ ಇಲ್ಲ| ರಾಜ್ಯ ಸರ್ಕಾರದ 1 ವರ್ಷದ ಪ್ರಗತಿ ವರದಿ ಬಿಡುಗಡೆ ಮಾಡಿದ ಬಿಎಸ್ವೈ| ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ| ‘ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ’ ‘ಪುಟಕ್ಕಿಟ್ಟ ಚಿನ್ನ’ ಬಿಡುಗಡೆ
state Jul 28, 2020, 7:07 AM IST
ಲಾಕ್ಡೌನ್ ಬಗ್ಗೆ ನಾವು ಚರ್ಚೆಗೆ ಹೋಗುವುದಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಇದೇ ಸೂಚನೆಯನ್ನು ನೀಡಿದ್ದೇನೆ ಎಂದು ಬಿಎಸ್ವೈ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jul 27, 2020, 6:23 PM IST
ಅನ್ಲಾಕ್ 2. 0 ಜುಲೈ 31 ಕ್ಕೆ ಅಂತ್ಯವಾಗಲಿದ್ದು ಆಗಸ್ಟ್ 1 ರಿಂದ ಹೊಸ ಲೈಫ್ ಶುರುವಾಗಲಿದೆ. ಅನ್ ಲಾಕ್ 3.0 ಮಾರ್ಗಸೂಚಿಗೆ ಕೇಂದ್ರದಿಂದ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
state Jul 27, 2020, 12:07 PM IST
ಲಾಕ್ಡೌನ್ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್ಗಳ ಸಂಚಾರವನ್ನು ವಾಯವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗವು ಇಂದಿನಿಂದ (ಸೋಮವಾರ) ಪುನರಾರಂಭಿಸಲಿದೆ.
Karnataka Districts Jul 27, 2020, 10:08 AM IST
ಬೆಳಗ್ಗೆ ಕೆಲ ಸಮಯ ವಾಹನ ಸಂಚಾರ ವಿರಳವಾಗಿ ಕಂಡುಬಂದಿದ್ದರೂ ನಂತರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು. ಲಾಕ್ಡೌನ್ ಹಿನ್ನಲೆಯಲ್ಲಿ ಶಿವಮೊಗ್ಗದ ಗಾಂಧಿ ಬಜಾರ್, ಬಿಹೆಚ್ ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಜೈಲ್ ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತ, ಪೊಲೀಸ್ ಚೌಕಿ, ವಿದ್ಯಾನಗರ ಸೇರಿದಂತೆ ವಿವಿಧೆಡೆ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದ್ದರು.
Karnataka Districts Jul 27, 2020, 9:01 AM IST