ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ವೇಗ ಮತ್ತಷ್ಟುಹೆಚ್ಚಾಗಿದ್ದು ಗುರುವಾರ 12 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ಒಂದರಲ್ಲೇ 8 ಮಂದಿ ಮೃತಪಟ್ಟಿದ್ದು, ಈ ಮೂಲಕ ಬೆಂಗಳೂರು ಹಾಗೂ ರಾಜ್ಯ ಎರಡರಲ್ಲೂ ಈವರೆಗೆ ದಿನವೊಂದರಲ್ಲಿ ಅತ್ಯಧಿಕ ಸಂಖ್ಯೆಯ ಸಾವು ವರದಿಯಾದಂತಾಗಿದೆ.
State Govt Jobs Jun 19, 2020, 7:16 AM IST
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಕೊನೆಗೂ ನಡೆಸಲಾಗಿದೆ. ಕೊರೋನಾ ಕಾರಣ ಬೈಕ್ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಿಂತಿರುಗುವಾಗ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
Vijayapura Jun 18, 2020, 7:40 PM IST
125 ದಿನಗಳಲ್ಲಿ 25 ಸ್ಕೀಮ್| ಜೂನ್ 20ರಂದು ಪಿಎಂ ಮೋದಿ ಗರೀಬ್ ಕಲ್ಯಾಣ್ ಯೋಜನೆಗೆ ಚಾಲನೆ| 116 ಜಿಲ್ಲೆಗಳ 25 ಸಾವಿರ ವಲಸೆ ಕಾರ್ಮಿಕರು ಕೇಂದ್ರ ಸರ್ಕಾರದ ಈ ಅಭಿಯಾನದ ಭಾಗವಾಗಿರಲಿದ್ದಾರೆ
BUSINESS Jun 18, 2020, 5:40 PM IST
ಮಲ್ಲೇಶ್ವರಂ ಪಿಯು ಬಾಲಕಿಯ ಪಿಯು ಕಾಲೇಜಿನಲ್ಲಿ ಹಾಗೂ MES ಕಾಲೇಜಿನಲ್ಲಿ ನಡೆದ ಇಂಗ್ಲಿಷ್ ಪಿಯುಸಿ ಪರೀಕ್ಷೆ ಹೀಗಿತ್ತು. ಇಲ್ಲಿವೆ ಎಂ. ವೀರಮಣಿ ಅವರು ಕ್ಲಿಕ್ಕಿಸಿದ ಫೋಟೋಸ್
Karnataka Districts Jun 18, 2020, 2:51 PM IST
ಕೊಪ್ಪಳದಲ್ಲಿ ನಾಲ್ಕು ದಿನದ ಹಿಂದೆ ವಿವಾಹಿತಳಾದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದಿದ್ದಾಳೆ. ಮೆಹಂದಿ ಹಚ್ಚಿರುವ ಕೈಗಳಲ್ಲೇ ಪೆನ್ ಹಿಡಿದ ಯುವತಿ ಲಾಕ್ಡೌನ್ ಮಧ್ಯೆ ಶಿಕ್ಷಣದ ಮಹತ್ವ ಅರಿತು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬರೆದು ನವ ವಧುವಿನ ಮಾತುಗಳು ಇಲ್ಲಿವೆ.
Karnataka Districts Jun 18, 2020, 2:00 PM IST
ಸಾರಿಗೆ ನಿಗಮಗಳಿಗೆ ಡೀಸೆಲ್ ದರ ಏರಿಕೆ ಬರೆ| 4 ಸಾರಿಗೆ ನಿಗಮಗಳಿಗೆ ಪ್ರತಿ ದಿನ 70 ಲಕ್ಷ ರು. ಹೆಚ್ಚುವರಿ ಹೊರೆ| ಲಾಕ್ಡೌನ್ ಎಫೆಕ್ಟ್ನಿಂದ ತತ್ತರಿಸಿದ ಸಂಸ್ಥೆಗೆ ಮತ್ತೊಂದು ಹೊಡೆತ
state Jun 18, 2020, 1:54 PM IST
ಮಗನ ಮದುವೆಗೆ ಸಾವಿರಾರು ಜನರನ್ನು ಸೇರಿಸಿ ಕೊರೋನಾ ನಿಯಂತ್ರಣದ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹಡಗಲಿ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಎಫ್ಐಆರ್ ದಾಖಲಾಗಿದೆ.
Karnataka Districts Jun 18, 2020, 10:33 AM IST
ಹುಬ್ಬಳ್ಳಿ ಮೂಲದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ 7 ದಿನಗಳ ಹಿಂದೆ ತಾಲೂಕಿನ ಕುರಹಟ್ಟಿಮತ್ತು ಕೊತಬಾಳ ಗ್ರಾಮಗಳಲ್ಲಿ ಸಂಚರಿಸಿ, ಅಲ್ಲಿನ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾನೆ ಎಂಬ ಸುದ್ದಿ ಗ್ರಾಮದಾದ್ಯಂತ ಹರಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಕೊತಬಾಳ ಗ್ರಾಮಸ್ಥರು ಬುಧವಾರ ಸ್ವಯಂ ಲಾಕ್ಡೌನ್ ಘೋಷಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗಡಿ, ಮುಂಗಟ್ಟುಗಳು ಸ್ವಪ್ರೇರಣೆಯಿಂದ ಬಂದ್ ಮಾಡಲಾಗಿದೆ.
Karnataka Districts Jun 18, 2020, 9:44 AM IST
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ಗೆ ಬೊಜ್ಜು ಬಂದಿದ್ಯಾ..? ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಕೂತು ಬೊಜ್ಜು ಬೆಳೆಸ್ಕೊಂಡ್ರಾ ವಾಟಾಳ್ ನಾಗರಾಜ್..? ಏನ್ ಹೇಳ್ತಾರೆ ನೋಡಿ
Karnataka Districts Jun 17, 2020, 3:59 PM IST
ಕೊರೋನಾ ವೈರಸ್ ಬರೀ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿಲ್ಲ. ದೊಡ್ಡ ದೊಡ್ಡ ಉದ್ಯಮ, ವ್ಯಾಪಾರ-ವ್ಯವಹಾರಗಳಿಗೆ ಭಾರೀ ನಷ್ಟವಾಗಿದೆ. ಮಹಾಮಾರಿ ರಣಕೇಕೆಗೆ ರೈತರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳೇ ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಕೊರೋನಾ ವೈರಸ್ನ ಆರ್ಭಟಕ್ಕೆ ಭಾರತೀಯ ಪ್ರವಾಸೋದ್ಯಮ ಕ್ಷೇತ್ರ ನೆಲಕಚ್ಚಿದೆ. ಇದೀಗ ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
state Jun 17, 2020, 3:43 PM IST
ದೇಶಾದ್ಯಂತ ಕೊರೋನಾ ಲಾಕ್ಡೌನ್ನಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಲವು ತಿಂಗಳಿನಿಂದ ಮನೆಯಲ್ಲೇ ಇರುವಂತಾಗಿದೆ. ಹೀಗಿರುವಾಗ ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಸಮಯವನ್ನು ಕಳೆಯುವ ಹೊಸ ದಾರಿಯನ್ನು ಹುಡುಕುತ್ತಾರೆ. ಹಾಗೆಯೇ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುರಕ್ಷಾ ತನ್ನ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.
Karnataka Districts Jun 17, 2020, 8:23 AM IST
ಜಿಲ್ಲೆಯಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ರೋಗ ತಡೆಯುವ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ನರೇಂದ್ರ ಗ್ರಾಮದಲ್ಲಿ ಲಾಕ್ಡೌನ್ ಘೋಷಿಸಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಿದೆ.
Karnataka Districts Jun 17, 2020, 7:23 AM IST
ಸುವರ್ಣ ನ್ಯೂಸ್ನ 'ಈ ವರ್ಷ ಅರ್ಧ ಫೀಸ್' ಅಭಿಯಾನಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ. ಬಿಷಪ್ ಕಾಟನ್ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಶೇ. 30 ರಷ್ಟು ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲಾ ಆಡಳಿತ ಸಮ್ಮತಿ ಸೂಚಿಸಿದೆ. ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಸುವರ್ಣ ನ್ಯೂಸ್ ಅಭಿಯಾನ ನಿಜಕ್ಕೂ ಸಾರ್ಥಕವಾಗಿದೆ. ಮಕ್ಕಳ ಫೀಸ್ ಹೊಂದಿಸುವುದು ಹೇಗಪ್ಪಾ ಎಂಬ ಚಿಂತೆಯಲ್ಲಿದ್ದ ಪೋಷಕರಿಗೆ ನಿರಾಳವಾಗಿದೆ.
Education Jobs Jun 16, 2020, 5:00 PM IST
ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಹೇರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಜತೆಗೆ ಹಾಲಿ ಇರುವ ಲಾಕ್ಡೌನ್ ನಿಯಮಗಳನ್ನು ಸಡಿಲಿಸಬೇಕಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.
state Jun 16, 2020, 2:54 PM IST
ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು, ಸಚಿವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
Karnataka Districts Jun 16, 2020, 1:32 PM IST