ಮನಸೂರ ಗ್ರಾಮಸ್ಥರು ಊರಿಗೆ ಬಸ್‌ ಬಿಡದಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ| ನರೇಂದ್ರ ಗ್ರಾಮದ ಜನರು ಇದೀಗ ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ ಘೋಷಣೆ| ಗ್ರಾಮದಲ್ಲಿನ ಚಹಾ ಅಂಗಡಿ, ಪ್ರಾರ್ಥನಾ ಮಂದಿರಗಳು ಸೇರಿದಂತೆ ಸಾರ್ವಜನಿಕರು ಗುಂಪುಗೂಡುವ ಇನ್ನಿತರ ಸ್ಥಳಗಳನ್ನು ಸಂ​ಪೂರ್ಣ ಬಂದ್‌| 

ಧಾರವಾಡ(ಜೂ.17): ಜಿಲ್ಲೆಯಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ರೋಗ ತಡೆಯುವ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ನರೇಂದ್ರ ಗ್ರಾಮದಲ್ಲಿ ಲಾಕ್‌ಡೌನ್‌ ಘೋಷಿಸಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಮನಸೂರ ಗ್ರಾಮಸ್ಥರು ಊರಿಗೆ ಬಸ್‌ ಬಿಡದಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಮುಂಜಾಗ್ರ​ತಾ ಕ್ರಮ ವಹಿಸಿದ್ದ ಬೆನ್ನಲ್ಲೆ ತಾಲೂಕಿನ ನರೇಂದ್ರ ಗ್ರಾಮದ ಜನರು ಇದೀಗ ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ ಘೋಷಿಸಿಕೊಂಡಿದೆ. ಗ್ರಾಮದಲ್ಲಿನ ಚಹಾ ಅಂಗಡಿ, ಪ್ರಾರ್ಥನಾ ಮಂದಿರಗಳು ಸೇರಿದಂತೆ ಸಾರ್ವಜನಿಕರು ಗುಂಪುಗೂಡುವ ಇನ್ನಿತರ ಸ್ಥಳಗಳನ್ನು ಸಂ​ಪೂರ್ಣ ಬಂದ್‌ ಮಾಡಿಕೊಂಡಿದ್ದಾರೆ. ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿಸದಿರುವ ಗ್ರಾಮ ಪಂಚಾಯಿತಿ, ನಮ್ಮೂರಿಗೆ ಸದ್ಯಕ್ಕೆ ಬಸ್‌ಗಳನ್ನು ಬಿಡಬೇಡಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಕೂಡ ಬರೆದಿದೆ. ಈ ಮಧ್ಯೆ ಊರಿನಿಂದ ಯಾರೂ ​ಆಚೆ ಹೋಗ​ಬೇ​ಡಿ ಗ್ರಾಪಂ ಡಂಗೂ​ರ ಸಾರಿ​ದೆ.

ಧಾರವಾಡ: ನಾಲ್ಕು ಮಂದಿಗೆ ಕೊರೋನಾ ಸೋಂಕು ತಗುಲಿಸಿದ ಶಿಕ್ಷಕಿ, 163ಕ್ಕೇರಿದ ಪಾಸಿಟಿವ್‌ ಕೇಸ್‌

ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ಬಸ್‌ ಸೇವೆ ನಿಲ್ಲಿಸಲು ಪತ್ರ ಬರೆದಿರುವ ಗ್ರಾಪಂಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಈ ಗ್ರಾಮಗಳ ಜನರ ತೀರ್ಮಾನ ಸಮಯೋಚಿತವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಇನ್ನೂ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡರೂ ಅಚ್ಚರಿಪಡಬೇಕಿಲ್ಲ. ತಾಲೂಕಿನ ಈ ಎರಡು ಗ್ರಾಮಗಳು ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ ಘೋಷಿಸಿಕೊಳ್ಳುವ ಮೂಲಕ ಅನ್ಯಗ್ರಾಮಗಳಿಗೆ ಮಾದರಿಯಾಗಿವೆ.