ಪ್ರಕೃತಿಯೇ ವಿಸ್ಮಯಗಳಲ್ಲಿ ಒಂದು ಮಹಾಬಲಿ ಕಪ್ಪೆ. ನೇರಳೆ ಕಪ್ಪೆ ಎಂದೂ ಕರೆಯುವ ಇದು ವರ್ಷಕ್ಕೊಮ್ಮೆ ಮಾತ್ರ ಭೂಮಿಯಿಂದ ಮೇಲೆ ಬರುತ್ತದೆ. ಕೇರಳದ ಈ ಕಪ್ಪೆಯ ರೋಚಕ ಸ್ಟೋರಿ ಇಲ್ಲಿದೆ...

ಪ್ರಕೃತಿಯೇ ವಿಸ್ಮಯ. ಯಾರ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ಆಗುತ್ತಲೇ ಇರುತ್ತವೆ. ವಿಜ್ಞಾನಕ್ಕೇ ಸವಾಲೆಸೆಯುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳಿವೆ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಪ್ರಕೃತಿಯ ಮುಂದೆ ಎಲ್ಲವೂ ಗೌಣವೇ. ಅಂಥ ವಿಚಿತ್ರಗಳಲ್ಲಿ ಒಂದು ಮಹಾಬಲಿ ಕಪ್ಪೆ! ಇದು ಕೇರಳದಲ್ಲಿ ಕಾಣಿಸಿಕೊಳ್ಳುವ ಕಪ್ಪೆ. ವರ್ಷಪೂರ್ತಿ ಭೂಮಿಯ ಒಳಗೆ ಇರುವ ಈ ಕಪ್ಪೆ ಇದೀಗ ಅಂದರೆ ಮಳೆಗಾಲದ ಸಮಯದಲ್ಲಿ ಒಮ್ಮೆ ಮಾತ್ರ ಮೇಲಕ್ಕೆ ಬಂದು ದರುಶನವನ್ನು ನೀಡುತ್ತದೆ! ವರ್ಷದಲ್ಲಿ ಒಂದು ದಿನ ಸಂತಾನೋತ್ಪತ್ತಿ ಮಾಡಲು ಮೇಲ್ಮೈಗೆ ಬರುತ್ತದೆ ಮತ್ತು ಮೊಟ್ಟೆಗಳನ್ನು ಇಡುತ್ತದೆ ಮತ್ತು ಭೂಮಿಯ ಆಳವಾದ ಪದರಗಳಿಗೆ ಮರಳುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ .ಕೇರಳದ ಮುನ್ನಾರದಲ್ಲಿ ಇದು ಸದ್ಯದಲ್ಲಿಯೇ ಕಾಣಿಸಿಕೊಳ್ಳಲಿದೆ.

ಈ ಕಪ್ಪೆಯ ವಿಶೇಷತೆ ಬಲು ಸೋಜಿಗ. ಇದನ್ನು ನೇರಳೆ ಕಪ್ಪೆ (ನಾಸಿಕಾಬಟ್ರಾಕಸ್ ಸಹ್ಯಾಡ್ರೆನ್ಸಿಸ್) ಎಂದೂ ಕರೆಯುತ್ತಾರೆ. ಕಪ್ಪೆಯಾದರೂ ಇದು ಜಿಗಿಯುವುದಿಲ್ಲ. ಈ ಕಪ್ಪೆಯು ಚಿಕ್ಕ ಕಾಲುಗಳನ್ನು ಹೊಂದಿದ್ದು, ಕಡು ಬಣ್ಣದಲ್ಲಿರುತ್ತದೆ. ಇದರ ದೇಹವು ಸುಮಾರು ಏಳು ಸೆಂಟಿಮೀಟರ್ ಉದ್ದವಿರುತ್ತದೆ ಮತ್ತು ಉಬ್ಬಿಕೊಂಡಿರುವಂತೆ ಕಾಣುತ್ತದೆ. ಇದರ ಮೊನಚಾದ ಮೂಗುಗಳಿಂದಾಗಿ ಹಂದಿ ಮೂತಿ ಕಪ್ಪೆ ಎಂದೂ ಕರೆಯುತ್ತಾರೆ. ದಪ್ಪ ಸ್ನಾಯುಗಳನ್ನು ಹೊಂದಿರುವ ಸಣ್ಣ ಕಾಲುಗಳು ಮತ್ತು ತೋಳುಗಳು ಮಣ್ಣಿನಲ್ಲಿ ಅಗೆಯಲು ಸಹಾಯ ಮಾಡುತ್ತದೆ. ಆದರೆ, ಅದರ ಹಿಂಗಾಲುಗಳು ಚಿಕ್ಕದಾಗಿರುವ ಕಾರಣ, ಜಿಗಿಯಲು ಬರುವುದಿಲ್ಲ.

ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವುಗಳ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ಸಿಸ್ ಎಂದು. ಇವುಗಳನ್ನು ಮಹಾಬಲಿ ಕಪ್ಪೆ ಎಂದೂ ಇದನ್ನು ಕರೆಯುತ್ತಾರೆ. ವರ್ಷದಲ್ಲಿ 364 ದಿನಗಳವರೆಗೆ ಈ ಕಪ್ಪೆಗಳು ಭೂಗತವಾಗಿರುತ್ತವೆ. ಮೊಟ್ಟೆಯನ್ನು ಇಡಲು ಮಾತ್ರ ವರ್ಷಕ್ಕೆ ಒಮ್ಮೆ ಮಾತ್ರ ಹೊರಗೆ ಬರುತ್ತವೆ. ಇದು ಹೊರಗಡೆ ಬಂದರೆ ಕೇರಳದ ಪಾಲಿಗೆ ಶುಭ ಸೂಚನೆ ಎಂದು ನಂಬಿಕೆ. ಉಬ್ಬಿದ ಕಪ್ಪೆಯ ವಿಶಿಷ್ಟ ಲಕ್ಷಣವೆಂದರೆ ಅದು ಚಾಚಿಕೊಂಡಿರುವ ಮೂತಿ ಮತ್ತು ಶಕ್ತಿಯುತವಾದ ಹಿಂಗಾಲುಗಳು. ಇದನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟದ (IUCN) ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿ ಮಾಡಲಾಗಿದೆ . ನದಿಗಳು ಮತ್ತು ತೊರೆಗಳ ಬಳಿಯ ಮಣ್ಣಿನಲ್ಲಿ ವಾಸಿಸುತ್ತವೆ ಮತ್ತು ಎರೆಹುಳುಗಳು, ಗೆದ್ದಲುಗಳು, ಇರುವೆಗಳು ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಅರಣ್ಯ ಇಲಾಖೆಯ ಶಿಫಾರಸಿನಂತೆ ಮಹಾಬಲಿ ಕಪ್ಪೆಯನ್ನು ರಾಜ್ಯದ ಅಧಿಕೃತ ಕಪ್ಪೆ ಎಂದು ಘೋಷಿಸಲು ಕ್ರಮಕೈಗೊಳ್ಳಲಾಗಿದೆ. ಇದು ಒಂದು ವಿಶಿಷ್ಟ ಪ್ರಭೇದವಾಗಿದ್ದು, ದಕ್ಷಿಣ ಪಶ್ಚಿಮ ಘಟ್ಟಗಳ ಈ ಭಾಗಕ್ಕೆ ಸ್ಥಳೀಯವಾಗಿದ್ದು , ಬೇರೆಲ್ಲಿಯೂ ಕಂಡುಬರುವುದಿಲ್ಲ. 2003 ರಲ್ಲಿ ಕೇರಳದ ಕಾಡುಗಳಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ಪ್ರಭೇದವು ಹಲವಾರು ಕಾರಣಗಳಿಗಾಗಿ ವಿಶ್ವಾದ್ಯಂತ ಸರೀಸೃಪಶಾಸ್ತ್ರಜ್ಞರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಅರಣ್ಯನಾಶ ಮತ್ತು ಅರಣ್ಯ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವುದು ಮತ್ತು ಮಾನವ ವಸಾಹತುಗಳು ಪ್ರಾಣಿಗಳ ಆವಾಸಸ್ಥಾನಗಳಲ್ಲಿ ಆಳವಾಗಿ ಮತ್ತು ಆಳವಾಗಿ ನುಸುಳುತ್ತಿರುವುದರಿಂದ, ಇಂಥ ಪ್ರಬೇಧಗಳು ಕಣ್ಮರೆಯಾಗುತ್ತಿವೆ. ಶೇಕಡಾ 50 ಕ್ಕಿಂತ ಹೆಚ್ಚು ನೇರಳೆ ಕಪ್ಪೆಗಳ ಆವಾಸಸ್ಥಾನಗಳು ಸಂರಕ್ಷಿತ ಪ್ರದೇಶಗಳ ಹೊರಗೆ ಇವೆ. ಅನಧಿಕೃತ ಚೆಕ್ ಡ್ಯಾಮ್‌ಗಳ ಅತಿಯಾದ ನಿರ್ಮಾಣವು ಕಪ್ಪೆಗಳ ದೀರ್ಘಕಾಲಿಕ ಸಂತಾನೋತ್ಪತ್ತಿ ಸ್ಥಳಗಳನ್ನು ಮುಳುಗಿಸಲು ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ರಸ್ತೆ ಜಾಲಗಳು ಅವುಗಳ ಸಂತಾನೋತ್ಪತ್ತಿ ಸ್ಥಳಗಳಿಗೆ ಹತ್ತಿರದಲ್ಲಿವೆ ಮತ್ತು ಪ್ರತಿ ವರ್ಷ ನೂರಾರು ರಸ್ತೆ-ಹತ್ಯೆ ಪ್ರಕರಣಗಳು ವರದಿಯಾಗುವುದಿಲ್ಲ. ಇವುಗಳ ಉಳಿವಿಗೆ ಶ್ರಮಿಸಲಾಗುತ್ತಿದೆ.