Asianet Suvarna News Asianet Suvarna News

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಶೂಟಿಂಗ್‌ ಶುರುವಾಗೋ ಟೈಮಲ್ಲೇ ಇದೇನಿದು 'ರಾಮಾಯಣ'?

ರಾಮಾಯಣದಲ್ಲಿ ಯಶ್​ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್​ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್​​ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ..

Sandalwood based Rocking star yash toxic movie shoot starts on 15 april in Bangalore srb
Author
First Published Apr 11, 2024, 3:38 PM IST

ರಾಕಿಂಗ್ ಸ್ಟಾರ್​ ಯಶ್​ ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್​ ಹೋಗೋ ತಯಾರಿಯಲ್ಲಿದ್ದಾರೆ. ಏಪ್ರಿಲ್​ 15ರ ನಂತರ ಬೆಂಗಳೂರಿನಲ್ಲೇ ಟಾಕ್ಸಿಕ್ ಚಿತ್ರೀಕರಣ ಆರಂಭ ಆಗುತ್ತೆ. ಆದ್ರೆ ಮತ್ತೊಂದ್ ಕಡೆ ಬಾಲಿವುಡ್​​​​ನ ಬಹು ಕೋಟಿ ವೆಚ್ಚದ ಬಿಗ್ ಬಜೆಟ್​​ ಸಿನಿಮಾ, ಇಡೀ ದೇಶದ ಸಿನಿ ಪ್ರೇಕ್ಷಕರು ಕಣ್ಣರಳಿಸಿ ಕಾಯುತ್ತಿರೋ ಸಿನಿಮಾ ರಾಮಾಯಣ ಚಿತ್ರದಲ್ಲೂ ಯಶ್ ಹೆಸರು ಪದೇ ಪದೆ ಕೇಳಿ ಬರುತ್ತಿದೆ.

ಬಾಲಿವುಡ್ ನಟ ರಣಬೀರ್ ಕಪೂರ್ ನಾಯಕತ್ವದ 'ರಾಮಾಯಣ'ದಲ್ಲಿ ಯಶ್​ಗೆ ಮಾಡಿರೋ ಆಫರ್ ಎಷ್ಟು ಕೋಟಿ ಗೊತ್ತಾ.? ಆದರೆ ಆ ಚಿತ್ರಕ್ಕೆ ಯಶ್ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರೆ ಯಶ್ ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್​ ಬಾಲಿವುಡ್​ನಲ್ಲಿ ಸಿದ್ಧವಾಗುತ್ತಿರೋ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಇನ್ನು ಪಕ್ಕಾ ಸುದ್ದಿ ಬಂದಿಲ್ಲ. ಆದ್ರೆ ಯಶ್​ ಹೆಸ್ರು ಮಾತ್ರ ರಾಮಾಯಣದಲ್ಲಿ ಬರ್ತಾನೆ ಇದೆ. ಯಶ್ ರಾವಣ ಆಗುತ್ತಾರೆ ಅಂತ ಕಾಯುತ್ತಿರೋ ಯಶ್ ಫ್ಯಾನ್ಸ್​​ಗೆ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. .

ಒಲ್ಲದ ಮದುವೆ ತಪ್ಪಿಸಿಕೊಳ್ಳಲು ಕೇರಳದಿಂದ ಓಡಿಹೋದ ನಟಿ ಫೇಮಸ್ ಐಟಂ ಡಾನ್ಸರ್‌ ಆದ್ರು!

ರಾಮಾಯಣದಲ್ಲಿ ಯಶ್​ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್​ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್​​ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ. ಪ್ಯಾನ್ ಇಂಡಿಯಾ ಪ್ರೊಡ್ಯೂಸರ್​ ಕೂಡ ಹೌದು. ಟಾಕ್ಸಿಕ್ ಸಿನಿಮಾದಲ್ಲಿ ಯಶ್​​​​ ನಟನೆ ಜೊತೆ Monster Mind Creation ಮೂಲಕ ಬಂಡವಾಳವನ್ನೂ ಹೂಡುತ್ತಿದ್ದಾರೆ. ಇದೀಗ ಹಿಂದಿಯ ರಾಮಾಯಣದಲ್ಲಿ ನಟಿಸೋ ಯಶ್​​​ ಆ ಸಿನಿಮಾದ ನಟನೆಗೆ 80 ಕೋಟಿ ಸಂಭಾವನೆ ಬೇಡ. ನಿರ್ಮಾಣದ ಪಾಲುದಾರಿಕೆ ಕೊಡಿ ಅಂತ ಕೇಳಿದ್ದಾರಂತೆ. ಈ ಬಗ್ಗೆ ಈ ಬಾಲಿವುಡ್​ನಲ್ಲಿ ಸುದ್ದಿ ಹರಿದಾಡುತ್ತಿದೆ. 

ಕೇರಳದ ಜನರ ಬಗ್ಗೆ ಮತ್ತೆ ಮತ್ತೆ ಯಾಕೆ ಹೀಗೇ ಹೇಳ್ತಿದಾರೆ ಅಲ್ಲು ಅರ್ಜುನ್; ಅದರಲ್ಲೇನಿದೆ ಮರ್ಮ?

ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್​ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗೆ 70 ಕೋಟಿ ಸಂಭಾವನೆ ಕೊಡುತ್ತಿದ್ದಾರೆ. ಆದ್ರೆ ರಾವಣನ ರೋಲ್​ ಮಾಡೋಕೆ ಯಶ್​ಗೆ ಆಫರ್​​ ಮಾಡಿದ್ದು 80 ಕೋಟಿ. ಅಲ್ಲಿಗೆ ರಾಮನಿಗಿಂತ ರಾವಣನ ರೋಲ್​​ಗೆ ಡಿಮ್ಯಾಂಡ್ ಹೆಚ್ಚಿದೆ ಅದ್ಕೊಳ್ಳಬೇಡಿ. ಇಲ್ಲಿ ರಾಣಬೀರ್ ಕಪೂರ್​ಗಿಂತ ಯಶ್​​​ಗೆ ಡಿಮ್ಯಾಂಡ್​ ಅನ್ನೋದು ಸತ್ಯ. ಇದಲ್ಲವೇ ನಮ್ಮ ಕನ್ನಡ ಸ್ಟಾರ್ ತಾಕತ್ತು.

ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್‌ ಕೊಟ್ಟ ಸಾಯಿ ಪಲ್ಲವಿ!

Follow Us:
Download App:
  • android
  • ios