'ಕನ್ನಡತಿ' ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಪ್ರಸಿದ್ಧ್ ನಿರ್ದೇಶಿಸಿರುವ 'ಬಹದ್ದೂರ್ ಗಂಡು' ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಿದೆ. ಹೀಗಿರುವಾಗಲೇ, ಆ ಚಿತ್ರದ ಶೀರ್ಷಿಕೆ ಬದಲಾಗಿದೆ.

ಕಿರುತೆರೆಯಿಂದ ಬಂದ ಸಾಕಷ್ಟು ನಟ, ನಟಿಯರು ಬೆಳ್ಳಿ ತೆರೆ ಮೇಲೆ ಸ್ಟಾರ್​ಗಳಾಗಿ ಮಿಂಚಿದ್ದಾರೆ. ಇದೀಗ 'ಕನ್ನಡತಿ' (Kannadathi) ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಕಿರಣ್ ರಾಜ್ (Kiran Raj) ಈಗಾಗಲೇ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕಿರಣ್ ರಾಜ್ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಿದೆ. ಹೀಗಿರುವಾಗಲೇ ಆ ಚಿತ್ರದ ಶೀರ್ಷಿಕೆ ಬದಲಾಗಿದೆ. ಈ ಮೊದಲು 'ಬಹದ್ದೂರ್ ಗಂಡು' (Bahaddur Gandu) ಎಂದೇ ಅಂತಿಮವಾಗಿದ್ದ ಶೀರ್ಷಿಕೆ, ಇದೀಗ 'ಭರ್ಜರಿ ಗಂಡು' (Bharjari Gandu) ಎಂದು ಬದಲಾಗಿದೆ.

ಹೌದು! 'ಬಹದ್ದೂರ್ ಗಂಡು' ಚಿತ್ರದ ಟೈಟಲ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ (Puneeth Rajkumar) ಅವರಿಗೆ ಅರ್ಪಿಸಿ ಚಿತ್ರದ ಟೈಟಲ್ ಬದಲಾಯಿಸಿಕೊಂಡು ಹೆಮ್ಮೆ ಮೆರೆದ ಚಿತ್ರತಂಡ. 'ಬಹದ್ದೂರ್ ಗಂಡು' ಈಗ 'ಭರ್ಜರಿ ಗಂಡು' ಎಂದು ಕಿರಣ್ ರಾಜ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು ಚಿತ್ರದ ವಿಡಿಯೋ ಝಲಕ್‌ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರಸಿದ್ಧ್ (Prasiddh) ನಿರ್ದೇಶನದ ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿರುವ ಅವರು, ದೊಣ್ಣೆ ವರಸೆ ಸಾಹಸದಲ್ಲಿ ಮಿಂಚಿದ್ದಾರೆ.

Kiran Raj: ನಂದಿ ಬೆಟ್ಟದಲ್ಲಿ 'ಬಹದ್ದೂರು ಗಂಡು' ಸಾಹಸ ದೃಶ್ಯ ಚಿತ್ರೀಕರಣ

ಈ ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಇತ್ತೀಚೆಗೆ ನಂದಿ ಬೆಟ್ಟದ (Nandi Hills) ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿನಿಂದ ದೊಣ್ಣೆ ವರಸೆ ಕಲಿತಿದ್ದರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು (Shabari Manju) ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ. ವಿನೋದ್ (Vinod) ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿಯಾಗಿ ಈ ಸನ್ನಿವೇಶ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಪ್ರಸಿದ್ದ್ ತಿಳಿಸಿದ್ದಾರೆ. 



'ಭರ್ಜರಿ ಗಂಡು' ಚಿತ್ರದಲ್ಲಿ ಯಶಾ ಶಿವಕುಮಾರ್‌ (Yasha Shivakumar) ಮತ್ತು ನಿಸರ್ಗ ಲಕ್ಷ್ಮಣ್ (Nisarga Lakshman) ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸ್ಪ್ಲಿಟ್‌ ಪರ್ಸನಾಲಿಟಿ ಸಿಂಡ್ರೋಮ್‌ ಇರುವಂತಹ ಹುಡುಗಿಯ ಪಾತ್ರ ಯಶಾ ಶಿವಕುಮಾರ್‌ಗೆ ಸಿಕ್ಕಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರು, ವಡ್ಡಗೆರೆ, ಸತ್ತಿಗಾಲ ಇತರೆ ಸ್ಥಳಗಳಲ್ಲಿ 30 ದಿನಗಳವರಗೆ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಛಾಯಾಗ್ರಾಹಣ ಕೆಲಸವನ್ನು ಚಾಮರಾಜನಗರದ ಕಿಟ್ಟಿ ಕೌಶಿಕ್ ಮಾಡಿದ್ದಾರೆ. ಮಳ್ಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಈ ಸಿನಿಮಾಕ್ಕಿದೆ. 

ಕನ್ನಡತಿ ರಂಜನಿ ರಾಘವನ್‌ಗೆ Get well soon champs ಅಂದ್ರು ಕಿರಣ್ ರಾಜ್

ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಮಡೆನೂರ್ ಮನು, ಗೋವಿಂದೇ ಗೌಡ, ವಾಣಿ, ರಂಜಿತ್ ಖನ್ನಾ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಸಿದ್ಧ್ ಸಿನಿಮಾಸ್ ಸಂಸ್ಥೆ (Prasiddh Cinemas) ಹಾಗೂ ರಮೇಶ್ ರೆಡ್ಡಿ (Ramesh Reddy) ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬಹುಬೇಗನೆ ಚಿತ್ರದ ಚಿತ್ರೀಕರಣ ಮುಗಿಸಿ ಈ ವರ್ಷದಲ್ಲಿ'ಭರ್ಜರಿ ಗಂಡು ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ, ವೆಂಕಿ ಯು ಡಿ ವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 

View post on Instagram