ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನದಲ್ಲಿ ದೀಕ್ಷಿತ್‌ ನಾಯಕನಾಗಿರುವ ‘ಡೆಡ್ಲಿ 3’ ಚಿತ್ರದ ಆ್ಯಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.  

ಸ್ಯಾಂಡಲ್‌ವುಡ್‌ ನಿರ್ದೇಶಕ ರವಿ ಶ್ರೀವತ್ಸ 'ಎಂಆರ್‌' ಹೆಸರಿನಲ್ಲಿ ಮುತ್ತಪ್ಪ ರೈ ಅವರ ಬದುಕನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಮೂರು ಭಾಗಗಳಲ್ಲಿ ಸಿನಿಮಾ ಆಗಲಿದೆ ಎಂದು ತಿಳಿಸಿದ್ದರು. ಆದರೆ ಸಿನಿಮಾ ಮಾಡುವ ಬಗ್ಗೆ ಆಕ್ಷೇಪ ಎದುರಾದ ಕಾರಣ ಚಿತ್ರೀಕರಣ ನಿಲ್ಲಿಸಿದ್ದಾರೆ. ಈ ನಡುವೆ ತಮ್ಮ ಮುಂದಿನ ಸಿನಿಮಾವನ್ನು ಕೈಗೆತ್ತುಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭದಲ್ಲಿಯೇ ವಿವಾದದಲ್ಲಿ ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್!

ಈ ಸಂದರ್ಭದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿದರು. ‘ಈ ಹಿಂದಿನ ಡಿಆರ್‌ ಚಿತ್ರದ ಸ್ಕ್ರೀಪ್ಟ್‌ ಅನ್ನು ಪಕ್ಕಕ್ಕಿಟ್ಟು, ಈ ಸಿನಿಮಾ ಕೈಗೆತ್ತಿಕೊಂಡಿರುವೆ. ಇಂದಲ್ಲ ನಾಳೆ ಆ ಸಿನಿಮಾ ಮಾಡುವುದು ಖಂಡಿತಾ. ಇದೀಗ ಕೈಗೆತ್ತಿಕೊಂಡಿರುವ ಡೆಡ್ಲಿ 3 ಸಿನಿಮಾ, ಡೆಡ್ಲಿ ಸೋಮದ ಸೀಕ್ವೆಲ್‌ ಆಗಿದೆ. ಎರಡನೇ ಸಿನಿಮಾದಲ್ಲಿ ನಾಯಕ ಸತ್ತು ಹೋಗುತ್ತಾನೆ. ಅವನ ಮಗ ಈ ಡೆಡ್ಲಿ 3 ಚಿತ್ರದ ನಾಯಕ. ಆ ಪಾತ್ರವನ್ನು ಹೊಸ ನಟ ದೀಕ್ಷಿತ್‌ ನಿರ್ವಹಿಸುತ್ತಿದ್ದಾರೆ. ಈಗ ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ,’ ಎಂದಿದ್ದಾರೆ.

ತೆರೆ ಮೇಲೆ ಭೂಗತ ಲೋಕದ ಪುಟಗಳು;ಅದ್ದೂರಿಯಾಗಿ ಸೆಟ್ಟೇರಿದ ಎಂಆರ್‌ ಚಿತ್ರ!

ಥ್ರಿಲ್ಲರ್‌ ಮಂಜು ಹೊಸ ನಟನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ನಾಯಕ ದೀಕ್ಷಿತ್‌ ಈ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡಿದರು. ನಿರ್ಮಾಪಕರಾದ ಶೋಭಾ ರಾಜಣ್ಣ ಸುದ್ದಿಗೋಷ್ಠಿಯಲ್ಲಿದ್ದರು.