ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್, ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಹಸಿದ ಹೊಟ್ಟೆಗೆ ಕೈ ತುತ್ತು ನೀಡಿದ್ದಾರೆ.

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟಪಡುತ್ತಿರುವ ಜನರ ಹಸಿವು ನೀಗಿಸಲು ನಟ ಡಾ.ಶಿವರಾಜ್‌ಕುಮಾರ್‌ ಮುಂದಾಗಿದ್ದಾರೆ. ‘ಆಸರೆ’ ಯೋಜನೆ ಹೆಸರಿನಲ್ಲಿ ನಾಗವಾರ ಪ್ರದೇಶದ 500 ಮಂದಿಗೆ ಚಹಾ, ತಿಂಡಿ, ಊಟ ಒದಗಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಾ. ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಮತ್ತು ಶಿವಣ್ಣ ಬಾಯ್ಸ್ ಸೇರಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಆಹಾರ ಸರಬರಾಜಿಗಾಗಿ ಶಿವಣ್ಣ ಬೊಲೆರೋ ಕ್ಯಾಂಟರ್‌ ವ್ಯವಸ್ಥೆ ಮಾಡಿದ್ದಾರೆ. 10 ದಿನದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದ್ದು, ಲಾಕ್‌ಡೌನ್‌ ಮುಂದುವರೆದರೆ ಸುಮಾರು 1000 ಮಂದಿಯ ಹಸಿವು ನೀಗಿಸಲು ಶಿವಣ್ಣ ಮತ್ತು ತಂಡ ಯೋಚನೆ ಮಾಡುತ್ತಿರುವುದಾಗಿ ಶಿವರಾಜ್‌ಕುಮಾರ್‌ ಆಪ್ತ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ನಟ ಉಪೇಂದ್ರ : ತರಕಾರಿ ಖರೀದಿಸಿ ಉಚಿತ ಹಂಚಿಕೆ

View post on Instagram