ಬಾಕ್ಸ್‌ ಆಫೀಸ್ ಸುಲ್ತಾನ್ ಬಹು ನೀರಿಕ್ಷಿತ ಚಿತ್ರ 'ರಾಬರ್ಟ್' ಕೊನೆ ಭಾಗದ ಚಿತ್ರೀಕರಣಕ್ಕೆ  ಉಳಿದಿದ್ದು ಚಿತ್ರತಂಡ ವಾರಣಾಸಿಗೆ ತೆರಳಿದೆ. 

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ' ಚಿತ್ರದ ಯಶಸ್ಸಿನಲ್ಲಿದ್ದು ಈಗ ಬ್ಯಾಕ್‌ ಟು ವರ್ಕ್‌ ಅಂತ 'ರಾಬರ್ಟ್‌' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸೆಂಬರ್ 16 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Add Asianetnews Kannada as a Preferred SourcegooglePreferred

ಚಿತ್ರ ವಿಮರ್ಶೆ: ಒಡೆಯ

ಈ ಹಿಂದೆ ಚಿತ್ರದ ಬಹುತೇಕ ಸನ್ನಿವೇಶಗಳನ್ನು ವಾರಣಾಸಿಯಲ್ಲಿ ಚಿತ್ರಿಸಲಾಗಿದ್ದು ಮತ್ತೊಂದು ಮುಖ್ಯ ಭಾಗದ ಶೂಟಿಂಗ್‌ಗೆ ಕಾಶಿಗೆ ತೆರಳಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ನಿರ್ದೇಶಕ ತರುಣ್ ಸುಧೀರ್ ಹಾಗೂ ಇನಿತ್ತರ ತಂತ್ರಜ್ಞರು ಕಾಶಿಗೆ ತರಳಿದ್ದಾರೆ. 

"

ದರ್ಶನ್‌ ಸಿನಿಮಾ ಬಾಕ್ಸ್‌ ಅಫೀಸ್‌ನಲ್ಲಿ ಗಳಿಸಿದ್ದು ಎಷ್ಟು?

2020ರಲ್ಲಿ ಯುಗಾದಿ ಹಬ್ಬದಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಇದಾದ ನಂತರ 'ರಾಜ ವೀರ ಮದಕರಿ ನಾಯಕ' ಚಿತ್ರೀಕರಣ ಶುರುವಾಗಲಿದೆ.

View post on Instagram