Asianet Suvarna News Asianet Suvarna News

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ ಎಂದು ಸಿಂಪಲ್ ಸುನಿ CSK ಫ್ಯಾನ್ಸ್‌ಗೆ ತಿರುಗೇಟು ನೀಡಿದ್ದಾರೆ. 

Director Simple Suni about RCB lost match opposite CSK sgk
Author
First Published Apr 18, 2023, 6:01 PM IST

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 226 ರನ್ ಕಲೆಹಾಕಿ 227 ಗುರಿ ನೀಡಿತ್ತು. ಆ ಗುರಿ ಬೆನ್ನಟ್ಟಿದ  ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಮೂಲಕ 8 ರನ್‌ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಒಪ್ಪಿಕೊಂಡಿತು. ಆರ್‌ಸಿಬಿ ಸೋಲುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮೂಲಕ ಕಿತ್ತಾಟ ಶುರು ಮಾಡಿಕೊಂಡರು. ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಅಭಿಮಾನಿಗಳ ಕಾಲೆಳೆದು, ಟ್ರೋಲ್ ಮಾಡಿ ಉರಿಸುತ್ತಿದ್ದಾರೆ. 

ಈ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳಿದ್ದ ಸುನಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೋಲಿನ ಬಳಿಕ ಸುನಿ ಸಿಎಸ್‌ಕೆ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ. ಸಿಂಪಲ್ ಸುನಿ ಆರ್‌ಸಿಬಿಯ ಅಪ್ಪಟ ಅಭಿಮಾನಿ. ಎಷ್ಟೇ ಸೋತರು, ಕಪ್ ಗೆಲ್ಲದಿದ್ದರೂ ಆರ್ ಸಿ ಬಿ ಮೇಲೆ ಪ್ರಾಣನೇ ಇದೆ ಅಂತಾರೆ ಸುನಿ. ಹೀಗಿರುವಾಗ ನಿನ್ನೆ ಸೋತ ಮ್ಯಾಚನ್ನು ಬಿಟ್ಟುಕೊಡುವ ಮಾತೆ ಇಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಸುನಿ, ಖುಷಿಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ ಎಂದು ಹೇಳಿದ್ದಾರೆ. 

ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ....; RCBಗೆ ಸಿಂಪಲ್ ಸುನಿ ಮನವಿ

'ಶುಭಾಶಯಗಳು csk. ಈ ಮ್ಯಾಚ್  ಧೋನಿಗೆ..ಖುಷಿಪಡಿ.. ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಮಾತ್ರ ಬರಬೇಡಿ. ನಮ್ ಹುಡುಗ್ರು ಒಳ್ಳೆ ಫೈಟ್ ಕೊಟ್ರು..ಕೊನೇಲಿ ಏನಾಯ್ತೋ.. ಮ್ಯಾಚ್ ಬಿಟ್ರು..' ಎಂದು ಹೇಳಿದ್ದಾರೆ. ಸುನಿ ಪೋಸ್ಟ್‌ಗ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇದನ್ನು ಇಂಡಿಯಾ ಪಾಕಿಸ್ತಾನ ಅಂತ ಬಿಂಬಸಬೇಡಿ. ಎರಡು ರಾಜ್ಯಗಳು ಭಾರತದಲ್ಲೇ ಇರೋದು ಎಂದು ಹೇಳುತ್ತಿದ್ದಾರೆ.

IPL 2023: ಚೆನ್ನೈ ಎದುರು ಸೋಲಿನ ಬೆನ್ನಲ್ಲೇ ವಿರಾಟ್‌ ಕೊಹ್ಲಿಗೆ ಶಾಕ್ ನೀಡಿದ ಬಿಸಿಸಿಐ..!

 

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಆರ್ ಸಿ ಬಿ ಸೋತಾಗಲೂ ಸುನಿ ಪೋಸ್ಟ್ ಶೇರ್ ಮಾಡಿದ್ದರು. 'ಈ ಮ್ಯಾಚ್ ಅಷ್ಟೇ ಅಲ್ಲಾ ಬೇಕಾದರೆ 15ನೇ ತಾರೀಖು ಇರೋ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ. ಆದ್ರೆ 17ನೇ ತಾರಿಖು ನಡೆಯೋ ಮ್ಯಾಚ್ ಮಾತ್ರ ನಮ್ದೆ ಆಗ್ಬೇಕು. RCB ಕೆಂಪು CSK ಹಳದಿ ಸೇರಿದ ಸ್ಟೇಡಿಯಂಲಿ ಶಿಳ್ಳೆ ಎಲ್ಲಾ ನಮ್ ಕಹಳೆನೇ ಮೊಳಗಬೇಕು ಧೋನಿ ಮೇಲೆ ರೆಸ್ಪಕ್ಟ್ ಇದೆ. ಆದರೆ CSK ಮೇಲೆ ಜಿದ್ದಿದೆ. RCB ಮೇಲೆ ಪ್ರಾಣನೇ ಇದೆ' ಎಂದು ಬರೆದುಕೊಂಡಿದ್ದರು. ಆದರೆ ಸುನಿಯ ನಿರೀಕ್ಷೆ ಹುಸಿ ಮಾಡಿದೆ ಆರ್ ಸಿ ಬಿ. 

Follow Us:
Download App:
  • android
  • ios