ನನ್ನ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ನಿರ್ದೇಶಕ: ಕೀರ್ತಿ
ಅಂದೊಂದಿತ್ತು ಕಾಲ’ ಸಿನಿಮಾದ ನಿರ್ದೇಶಕ ಕೀರ್ತಿ ಚಿತ್ರದ ಬಗ್ಗೆ, ನಾಯಕ ವಿನಯ್ ರಾಜ್ ಕುಮಾರ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ.
- ‘ಅಂದೊಂದಿತ್ತು ಕಾಲ’ ಸಿನಿಮಾ ಹಳೆಯ ನಿಷ್ಕಲ್ಮಶಸ್ನೇಹದ ಕತೆ ಹೇಳುವ ಚಿತ್ರ. ಮೊಬೈಲ್ ಇಲ್ಲದ ಕಾಲವನ್ನು ರೀಕಾಲ್ ಮಾಡುವ ಪ್ರಯತ್ನಇಲ್ಲಾಗಿದೆ. ಹೀರೋ ವಿನಯ್ ರಾಜ್ಕುಮಾರ್ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಹೀರೋಯಿಸಂ, ಅಬ್ಬರಗಳಿಲ್ಲ. ಒಬ್ಬ ಮಧ್ಯಮ ವರ್ಗದ ಹುಡುಗನ ವಿವಿಧ ಮುಖಗಳನ್ನುವಿನಯ್ ಪಾತ್ರದ ಮೂಲಕ ಅನಾವರಣ ಮಾಡುತ್ತಿದ್ದೇನೆ. ನಾಯಕಿ ಅದಿತಿ ಪ್ರಭುದೇವ ತೀರ್ಥಹಳ್ಳಿಯಲ್ಲಿಸಂಗೀತ ವಿದ್ಯಾರ್ಥಿನಿ.
'ಅಂದೊಂದಿತ್ತು ಕಾಲ'ದಲ್ಲಿ ವಿನಯ್ ರಾಜ್ಕುಮಾರ್; ಮೊಬೈಲ್ ಇಲ್ಲದ ಅದಿತಿ ಪ್ರಭುದೇವ ಹೇಗಿರುತ್ತಾರೆ?- ಗಾಯಕ ವಿಜಯ ಪ್ರಕಾಶ್ ಅವರನ್ನು ನಮ್ಮ ಸಿನಿಮಾಕ್ಕೆಕರೆತರುವ ಪ್ರಯತ್ನ ಜಾರಿಯಲ್ಲಿದೆ. ಜೊತೆಗೆ ಒಬ್ಬ ಸ್ಟಾರ್ ನಿರ್ದೇಶಕ ನಟಿಸುತ್ತಿದ್ದಾರೆ.ಅವರ್ಯಾರು ಅನ್ನೋದನ್ನು ಸದ್ಯದಲ್ಲೇ ರಿವೀಲ್ ಮಾಡ್ತೀನಿ.
- ಮೂರನೇ ಹಂತದ ಚಿತ್ರೀಕರಣ ಬೆಂಗಳೂರುಸುತ್ತಮುತ್ತ ನಡೆಯಲಿದೆ. ಅದಾಗಿ ತೀರ್ಥಹಳ್ಳಿಯಲ್ಲಿ ಕೊನೆಯ ಹಂತದ ಚಿತ್ರೀಕರಣನಡೆಯುತ್ತದೆ. ಸುರೇಶ್ ಹಾಗೂ ಎನ್. ಲೋಕೇಶ್ ಈ ಸಿನಿಮಾದ ನಿರ್ಮಾಪಕರು. ನನ್ನ ಬಳಿಕತೆಯನ್ನೂ ಕೇಳದೇ, ವಿಶ್ವಾಸದಿಂದ ಬಂಡವಾಳ ಹೂಡಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿದೆ.