Asianet Suvarna News Asianet Suvarna News

ಲೆಕ್ಕ ಮುಖ್ಯವಲ್ಲ, ಜನ ಮೆಚ್ಚುಗೆ ಮುಖ್ಯ: ಅಪೂರ್ವ

‘ಅಪೂರ್ವ’ ಚಿತ್ರಕ್ಕಾಗಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಶೋಧಿಸಿ ತಂದ ನಟಿ ಅಪೂರ್ವ ಈಗ ‘ಮೊಡವೆ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

 

Actress Apoorva Exclusive PhotoShoot
Author
Bengaluru, First Published Mar 7, 2019, 10:31 AM IST

ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಯುವ ಪ್ರತಿಭೆ ಸಿದ್ದಾರ್ಥ್ ಮರೆದೆಪ್ಪ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಶಿವಾನಂದ ಹಾಗೂ ಕೃಷ್ಣ ಮೂರ್ತಿ ಇದರ ನಿರ್ಮಾಪಕರು. ಸದ್ಯಕ್ಕೀಗ ಈ ಚಿತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಅಪೂರ್ವ ಹೊಸ ಅವಕಾಶಗಳತ್ತಲೂ ಮುಖ ಮಾಡಿದ್ದಾರೆ. ಅದಕ್ಕಾಗಿಯೇ ಈಗ ಚೆಂದದೊಂದು ಫೋಟೋ ಶೂಟ್ ಮಾಡಿಸಿ, ಹೊಸ ಲುಕ್‌ನಲ್ಲಿ ಮಿಚುತ್ತಿದ್ದಾರೆ.

Actress Apoorva Exclusive PhotoShoot

‘ನಟ-ನಟಿಯರು ಹೊಸದಾಗಿ ಪೋಟೋಶೂಟ್ ಮಾಡಿಸಿದಾಗ ಹೊಸ ಅವಕಾಶಗಳಿಗಾಗಿಯೇ ಮಾಡಿಸಿದ್ದುಅಂತಂದುಕೊಳ್ಳುವುದು ಸರ್ವೇ ಸಾಮಾನ್ಯ. ಅದರಾಚೆ ಪ್ರೊಫೈಲ್‌ಗೂ ಇರಲಿ ಅಂತಲೂ ನಟ-ನಟಿಯರು ಫೋಟೋಶೂಟ್ ಮಾಡಿಸುತ್ತಾರೆನ್ನುವುದು ಕೂಡ ಸತ್ಯ. ನನಗೆ ಅಂತಹದೊಂದು ಪ್ರೊಫೈಲ್‌ಗೂ ಬೇಕಿತ್ತು, ಜತೆಗೆ ಹೊಸದೊಂದು ಚಿತ್ರಕ್ಕೂ ಬೇಕಿತ್ತು. ಹಾಗಾಗಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇಷ್ಟರಲ್ಲೇ ಆ ಸಿನಿಮಾ ಯಾವುದು ಎನ್ನುವುದು ಬಹಿರಂಗವಾಗಲಿದೆ. ಅದಿನ್ನು ಮಾತುಕತೆ ಹಂತದಲ್ಲಿದೆ’ಎನ್ನುತ್ತಾರೆ ನಟಿ ಅಪೂರ್ವ.

Actress Apoorva Exclusive PhotoShoot

ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಹಾಗಂತ ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡು ಅಭಿನಯಸಬೇಕು ಎನ್ನುವ ಸಿದ್ಧಾಂತ ನಂದಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು, ಆ ಪಾತ್ರಗಳು ಪ್ರೇಕ್ಷಕರಿಗೂ ಇಷ್ಟ ಆಗಬೇಕು. ಎಷ್ಟು ಸಿನಿಮಾಗಳು ಎನ್ನುವ ಲೆಕ್ಕಕ್ಕಿಂತ ಎಂತಹ ಸಿನಿಮಾ ಮಾಡಿದ್ದೇನೆ ಎನ್ನುವುದು ಮುಖ್ಯವಾಗಬೇಕು.- ಅಪೂರ್ವ

Actress Apoorva Exclusive PhotoShoot

Actress Apoorva Exclusive PhotoShoot

Follow Us:
Download App:
  • android
  • ios