Asianet Suvarna News Asianet Suvarna News

ತೆಲುಗು ಈವೆಂಟ್‌ನಲ್ಲಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ; ಸಮಾಧಾನ ಮಾಡಿದ ನಟ ಬಾಲಯ್ಯ

ತೆಲುಗು ವೇದಾ ಈವೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತೆಲುಗು ಸ್ಟಾರ್ ಬಾಲಯ್ಯ ಸಮಾಧಾನ ಮಾಡಿದರು. 

Actor Shivaraj Kumar tears for remembering Puneeth Rajkumar at Telugu Vedha event sgk
Author
First Published Feb 8, 2023, 3:24 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ನಟನೆಯ ವೇದಾ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ವರ್ಷನ್ ರಿಲೀಸ್‌ಗಾಗಿ ಪ್ರಮೋಷನ್ ಮಾಡುತ್ತಿದೆ ಸಿನಿಮಾತಂಡ. ಸದ್ಯ ವೇದಾ ತಂಡ ಹೈದರಾಬಾದ್‌ನಲ್ಲಿದೆ. ರಿಲೀಸ್‌ಗೂಬ ಮುನ್ನ ಈವೆಂಟ್ ನಲ್ಲಿ ಇಡೀ ವೇದ ತಂಡ ಭಾಗಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶಿವಣ್ಣ ಪತ್ನಿ, ನಿರೂಪಕಿ ಗೀತಾ ಶಿವರಾಜ್ ಕುಮಾರ್, ನಾಯಕಿ ಗಾನವಿ ಸೇರಿದಂತೆ ಇಡೀ ತಂಡ ಹೈದರಾಬಾದ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಪ್ರಿ ರಿಲೀಸ್ ಈವೆಂಟ್ ಗೆ ತೆಲುಗು ಸ್ಟಾರ್ ನಟ ಬಾಲಯ್ಯ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಈವೆಂಟ್‌ನಲ್ಲಿ ಶಿವಣ್ಣ, ಅಪ್ಪು ನೆನೆದು ಕಣ್ಣೀರಾಕಿದ್ದಾರೆ. ಬಳಿಕ ಬಾಲಯ್ಯ ಸಮಾಧಾನ ಮಾಡಿದರು.  
 
ಪ್ರೀತಿಯ ಅಪ್ಪು ಕಳೆದುಕೊಂಡು ವರ್ಷದ ಮೇಲಾದರೂ ಅಗಲಿಯ ನೋವು ಮಾತ್ರ ಇನ್ನೂ ಹಸಿರಾಗೆ ಇದೆ. ಅದರಲ್ಲೂ ಡಾ.ರಾಜ್ ಕುಟುಂಬಕ್ಕೆ ಅಪ್ಪು ಇಲ್ಲ ಎನ್ನುವ ಸತ್ಯ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಅಪ್ಪು ನೆನೆದು ಕಣ್ಣೀರಾಕುತ್ತಿದ್ದಾರೆ. ಶಿವಣ್ಣ ಅನೇಕ ವೇದಿಕೆಗಳಲ್ಲಿ ತಮ್ಮನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತೆಲುಗು ವೇದಿಕೆಯಲ್ಲೂ ಶಿವಣ್ಣ ಕಣ್ಣೀರಾಕಿದ್ದಾರೆ. ವೇದ ಪ್ರಿ ರಿಲೀಸ್ ವೇದಿಕೆಯಲ್ಲಿ ಅಪ್ಪು ಜೊತೆಗಿನ ಅನೇಕ ಫೋಟೋಗಳನ್ನು ತೋರಿಸಲಾಯಿತು. ಅಪ್ಪು ಅವರ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ಆಗ ಶಿವಣ್ಣ ಭಾವುಕರಾದರು. ಶಿವಣ್ಣನ ಕಣ್ಣೀರು ನೋಡಿ ಪಕ್ಕದಲ್ಲೇ ಇದ್ದ ಬಾಲಯ್ಯ ಸಮಾಧಾನಾ ಮಾಡಿದರು. 

ನಟನೆಗೆ ವಿದಾಯ ಹೇಳಬೇಕು ಅಂತಿದ್ದ ಈ ನಟಿಗೆ ಶಿವಣ್ಣಂಗೆ ನಾಯಕಿಯಾಗುವ ಅವಕಾಶ

ಶಿವಣ್ಣ ಮತ್ತು ಬಾಲಯ್ಯ ಜೊತೆ ಇರುವ ಫೋಟೋವನ್ನು ಹಾಕಲಾಯಿತು. ಆಗ ಫೋಟೋ ಬಗ್ಗೆ ಶಿವಣ್ಣ ವಿವರಿಸಿದರು. ಬಾಲಯ್ಯ ಅವರ 100ನೇ ಸಿನಿಮಾದಲ್ಲಿ ನಟಿಸುವಾಗ ಕ್ಲಿಕ್ಕಿಸಿದ ಫೋಟೋ. ಅವರ ಜೊತೆ ನಟಿಸಿದ್ದು ನನ್ನ ಪುಣ್ಯ ಎಂದು ಹೇಳಿದರು. ಆಗ ಪಕ್ಕದಲ್ಲೇ ಕುಳಿತಿದ್ದ ಬಾಲಯ್ಯ ತಲೆಯಮೇಲೆ ಕೈ ಇಟ್ಟು ಪ್ರೀತಿ ವ್ಯಕ್ತಪಡಿಸಿದರು. ಬಳಿಕ ಡಾ.ರಾಜ್ ಕುಮಾರ್ ಜೊತೆಗಿನ ಶಿವಣ್ಣ ಫೋಟೋ ಹಾಕಲಾಯಿತು. ಎಲ್ಲರೂ ಅಪ್ಪು ಅಂತ ತಿಳಿಯುತ್ತಾರೆ ಆದರೆ ಅಪ್ಪಾಜಿ ಜೊತೆ ಇದ್ದಿದ್ದು ನಾನು ಎಂದು ಹೇಳಿದರು. ರಜನಿಕಾಂತ್ ಜೊತೆಗಿನ ಫೋಟೋ ನೋಡಿ ಸಂತಸ ಪಟ್ಟರು. ಪುನೀತ್ ಗೆ ಕರ್ನಾಟಕ ರತ್ನ ಕೊಡುವ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಆಗಿತ್ತು.  ಆ ಫೋಟೋ ಬಗ್ಗೆ ಮಾತನಾಡಿದ ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅವರ ಜೊತೆ ನಟಿಸುತ್ತಿರುವುದು ನನ್ನ ಪುಣ್ಯ ಎಂದರು. ರವಿತೇಜ ಜೊತೆಗಿನ ಫೋಟೋ ಅನುಭವವನ್ನು ಹಂಚಿಕೊಂಡರು. 

ಪುನೀತ್ ಬಗ್ಗೆ ನಿರೂಪಕಿ ಮಾತನಾಡಿದರು. ಅಪ್ಪು ಬಗ್ಗೆ ಪುಟ್ಟ ವಿಡಿಯೋವನ್ನು ಹಾಕಲಾಯಿತು. ವಿಡಿಯೋ ನೋಡುತ್ತಿದ್ದಂತೆ ಶಿವಣ್ಣ ಕಣ್ಣುಗಳು ತುಂಬಿ ಬಂತು. ವಿಡಿಯೋ ಮುಗಿಯುತ್ತಿದ್ದಂತೆ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತರು. ಬಾಲಯ್ಯ ಎಷ್ಟೇ ಸಮಾಧಾನಾ ಮಾಡಿದರೂ ಶಿವಣ್ಣ ಅಳು ನಿಲ್ಲಿಸಲಿಲ್ಲ. ಬಳಿಕ ಸಮಾಧಾನ ಮಾಡಿಕೊಂಡು ಕಾರ್ಯಕ್ರಮ ಮುಂದುವರೆಸಿದರು. ಈ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

ಶಿವಣ್ಣನ ಜೊತೆ ಬಣ್ಣ ಹಚ್ಚಲಿರುವ ಅನುಪಮ್ ಖೇರ್: 'ಘೋಸ್ಟ್' ಸಿನಿಮಾದಲ್ಲಿ 'ಕಾಶ್ಮೀರ್ ಫೈಲ್ಸ್' ಸ್ಟಾರ್

ಶಿವಣ್ಣ ನಟನೆಯ ಸಿನಿಮಾ ಇದೇ ವಾರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹರ್ಷ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ವೇದ ಚಿತ್ರಕ್ಕೆ ಗೀತ ಶಿವರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ವೇದ ಸಿನಿಮಾ ನೋಡಿ ಇಷ್ಟಪಡುತ್ತಾರಾ ಕಾದುನೋಡಬೇಕಿದೆ. 
 

Follow Us:
Download App:
  • android
  • ios