Asianet Suvarna News Asianet Suvarna News

ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ; ಜೀವನ ಕಥನ ‘ಅನಂತವಾಗಿರು’ ಬಿಡುಗಡೆ!

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೀವನದ ಕುರಿತ ‘ಅನಂತವಾಗಿರು’ ಪುಸ್ತಕ ಜು.17ಕ್ಕೆ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. 
 

Actor Sanchari Vijay biography Sharanu Halluru Ananthavagiru vcs
Author
Bangalore, First Published Jul 17, 2021, 1:57 PM IST

ರಸ್ತೆ ಅಪಫಾತದಿಂದ ನಿಧನರಾದ ಸಂಚಾರಿ ವಿಜಯ್ ಜೀವನದ ಪಯಣವನ್ನು ಹಾಗೂ ಹೆಜ್ಜೆ ಗುರುತಗಳನ್ನು ಮೆಲುಕು ಹಾಕಬೇಕು ಎಂದು ಅಗಲಿದ ಕಲಾವಿದನನ್ನು ನೆನಪಿಸುವ ಪ್ರಯತ್ನಕ್ಕೆ  ಪತ್ರಕರ್ತ ಡಾ ಶರಣು ಹುಲ್ಲೂರು ಸಂಪಾದಕತ್ವದಲ್ಲಿ ಸಿದ್ಧವಾಗಿರುವ 'ಅನಂತವಾಗಿರು' ಪುಸ್ತಕವನ್ನು ಬೆಂಗಳೂರಿನ ಕಾಯಕ ಪ್ರಕಾಶನ ಪ್ರಕಟಿಸುತ್ತಿದೆ.

ಸಂಚಾರಿ ವಿಜಯ್‌ ಹುಟ್ಟಿದಬ್ಬವಿಂದು: ಕಳೆದ ಕೆಲವು ದಿನಗಳಲ್ಲಿ ಕೊನೆಯುಸಿರೆಳೆದ ಗಣ್ಯರು

ವಿಜಯ್ ಅವರ ಬಾಲ್ಯ, ಜೀವನದ ಬಗ್ಗೆ ವಿಜಯ್ ಸಹೋದರರು ಹಾಗೂ ಕುಟುಂಬದವರು ಬರೆದಿದ್ದಾರೆ. ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ಆತ್ಮೀಯ ಗೆಳೆಯನೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ. 

Actor Sanchari Vijay biography Sharanu Halluru Ananthavagiru vcs

ಸಾಹಿತಿ ಜಿ.ಎನ್. ಮೋಹನ್ ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಜು.17 ರಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಸಂಚಾರಿ ಥಿಯೇಟರ್‌ನಲ್ಲಿ ಸಂಜೆ ಪುಸ್ತಕ ಬಿಡುಗಡೆ ಆಗಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ವಿಜಯ್ ಗೆಳೆಯರು ಸೋಷಿಯಲ್ ಮೀಡಿಯಾದಲ್ಲಿ ವಿಜಯ್‌ಗೆ ಶುಭ ಹಾರೈಸಿದ್ದಾರೆ.

Follow Us:
Download App:
  • android
  • ios