ಅಲ್ಲಾ..ಹೇಗೆಲ್ಲಾ ಇರ್ತಾರೆ ಅಂತ. ಮದ್ವೆ ಮೊದ್ಲು ಗಂಡಸರ ರಂಗಿನಾಟ ಇದ್ದಿದ್ದೇ. ಮದ್ವೆಯಾದ್ಮೇಲೂ ಸುಮ್ನಿರಲ್ಲ. ಹಾಗೆಯೇ ಇಲ್ಲೊಬ್ಬ  ತನ್ನ ಪತ್ನಿಯ ಅಶ್ಲೀಲ ವೀಡಿಯೊಗಳನ್ನು ತನ್ನ ವಿವಾಹೇತರ ಸಂಗಾತಿಯೊಂದಿಗೆ ಹಂಚಿಕೊಂಡಿದ್ದ. ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ಪತ್ನಿಯ ಅಶ್ಲೀಲ ವೀಡಿಯೊಗಳನ್ನು ತನ್ನ ವಿವಾಹೇತರ ಸಂಗಾತಿಯೊಂದಿಗೆ ಹಂಚಿಕೊಂಡ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೇ 12ರಂದು ನೀಡಿರುವ ಆದೇಶದಲ್ಲಿ ತನ್ನ ವಿವಾಹೇತರ ಸಂಗಾತಿ, ಅಶ್ಲೀಲ ವೀಡಿಯೊಗಳು ಮತ್ತು ಅವರ ಪತ್ನಿಯ ಫೋಟೋಗಳನ್ನು ಹಂಚಿಕೊಂಡ ಆರೋಪದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಗುರ್ಬೀರ್ ಸಿಂಗ್ ಅವರು ಲೈಂಗಿಕ ಅಶ್ಲೀಲ ವಿಷಯವನ್ನು ಸಾರ್ವಜನಿಕರಿಗೆ ಹಂಚಿಕೊಳ್ಳದ ಕಾರಣ, ಪ್ರಾಸಿಕ್ಯೂಷನ್ ಪ್ರಕರಣವನ್ನು ಮಾಡಲಾಗಿಲ್ಲ ಎಂದು ಆದೇಶವನ್ನು ನೀಡಿದರು.

ಅರ್ಜಿದಾರ ಗಂಡನ ವಿರುದ್ಧದ ಆರೋಪಗಳೆಂದರೆ, ಅವರು ದೂರುದಾರರ (ಅವರ ಪತ್ನಿ) ಅಶ್ಲೀಲ ವೀಡಿಯೊ ಮತ್ತು ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಈ ವೀಡಿಯೊ ಮತ್ತು ಫೋಟೋಗಳನ್ನು ತನ್ನ ಗರ್ಲ್‌ಫ್ರೆಂಡ್‌ನ ಮೊಬೈಲ್‌ಗೆ ಕಳುಹಿಸಿದ್ದಾರೆ ಎಂಬುದಾಗಿದೆ. ಆದರೆ ಲೈಂಗಿಕವಾಗಿರುವ ಪೋಟೋಗಳು ಅಥವಾ ವೀಡಿಯೋವನ್ನು ಶೇರ್ ಮಾಡಿಲ್ಲ. ಆದ್ದರಿಂದ ಅರ್ಜಿದಾರರು ನಿರೀಕ್ಷಣಾ ಜಾಮೀನು ಮಂಜೂರು ಪಡೆಯಲು ಅರ್ಹರಾಗಿರುತ್ತಾ' ಎಂದು ಕೋರ್ಟ್ ಆದೇಶದಲ್ಲಿ ಹೇಳಲಾಗಿದೆ. ಏಕಸದಸ್ಯ ನ್ಯಾಯಾಧೀಶರು ಪತಿಯ ವಿವಾಹೇತರ ಸಂಗಾತಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.

ಗಂಡನ ವಾಟ್ಸಾಪ್‌ ಬ್ಯಾಕಪ್‌ ಚೆಕ್ ಮಾಡಿದ ಪತ್ನಿ, ಬಯಲಾಯ್ತು ಅತ್ತಿಗೆ ಜೊತೆಗಿನ ಲವ್ವಿಡವ್ವಿ!

ದೂರುದಾರರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ತನ್ನ ಗಂಡನ ವಿವಾಹೇತರ ಸಂಗಾತಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದರು. ದೂರುದಾರ ಪತ್ನಿ ಈ ಹಿಂದೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕ್ರೌರ್ಯಕ್ಕಾಗಿ ಎಫ್‌ಐಆರ್ ದಾಖಲಿಸಿದ್ದರು. 

ವಿವಾಹೇತರ ಸಂಗಾತಿಯನ್ನು ಪ್ರತಿನಿಧಿಸುವ ವಕೀಲರು ಅವರು ವೀಡಿಯೊವನ್ನು ಪ್ರಕಟಿಸಿಲ್ಲ ಅಥವಾ ಪ್ರಸಾರ ಮಾಡಿಲ್ಲ ಮತ್ತು ದಂಪತಿಗಳ ನಡುವಿನ ವೈವಾಹಿಕ ವಿವಾದಕ್ಕೆ ಅನಗತ್ಯವಾಗಿ ಆಕೆಯನ್ನು ಎಳೆಯಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದರು. ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಗಣಿಸಿ, ಎಫ್‌ಐಆರ್ ದಾಖಲಾದ ನಂತರ, ತನಿಖಾಧಿಕಾರಿಯು ಅರ್ಜಿದಾರರು ತಮ್ಮ ವಿವಾಹೇತರ ಸಂಗಾತಿಯೊಂದಿಗೆ ಶಾಮೀಲಾಗಿ ವೀಡಿಯೊವನ್ನು ಮಾಡಿದ್ದಾರೆ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ರಚಿಸಿದ್ದಾರೆ ಎಂದು ನ್ಯಾಯಾಲಯವು ಗಮನಿಸಿತು.

ಗಂಡ ಖುಷಿಯಾಗಿದ್ರಷ್ಟೇ ಸಾಕಂತೆ..ಬೇರೆಯವಳ ಜೊತೆ ಮಲಗೋಕೆ ಹೆಂಡ್ತೀನೆ ಟೈಂ ಕೊಡ್ತಾಳೆ!

ನ್ಯಾಯಾಲಯವು ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಲು ಮತ್ತು ತನಿಖೆಗೆ ಸೇರಿಕೊಳ್ಳಲು ಸೂಚಿಸಿತು. ಅರ್ಜಿದಾರರ ಪರ ವಕೀಲ ವರುಣ್ ಚಿಬ್ಬಾ ಮತ್ತು ಮನ್ಮೀತ್ ಸಿಂಗ್ ಬಿಂದ್ರಾ ವಾದ ಮಂಡಿಸಿದರು. ಎಎಜಿ ಹಿಮಾನಿ ಅರೋರಾ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು. ದೂರುದಾರರ ಪರ ವಕೀಲ ಹರೀಶ್ ಶರ್ಮಾ ವಾದ ಮಂಡಿಸಿದ್ದರು.