Asianet Suvarna News Asianet Suvarna News

ಹೂಡಿಕೆ ಇದ್ದರೂ Jammu and Kashmirದಲ್ಲಿ ನಿರುದ್ಯೋಗ ಏಕೆ ಹೆಚ್ಚಿದೆ?

ಕಾಶ್ಮೀರದಲ್ಲಿ ಖಾಸಗಿ ವಲಯವು ಬಹುತೇಕ ನಗಣ್ಯವಾಗಿರುವುದರಿಂದ, ಸಂಘಟಿತ ವಲಯದಲ್ಲಿ ಸರ್ಕಾರವೇ  ಉದ್ಯೋಗಗಳ ಮುಖ್ಯ ಮೂಲವಾಗಿದೆ. ಆಗಸ್ಟ್ 2019 ರ ನಂತರ ಜಮ್ಮು-ಕಾಶ್ಚೀರದಲ್ಲಿ ಆರ್ಥಿಕತೆ ಜೊತೆಗೆ ನಿರುದ್ಯೋಗ ಸಂಪೂರ್ಣವಾಗಿ ತಗ್ಗಿದೆ. 

why has unemployment soared in Jammu and Kashmir gow
Author
Bengaluru, First Published Apr 26, 2022, 2:16 PM IST

ಜಮ್ಮು-ಕಾಶ್ಮೀರ(ಎ.26): ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದೇನೆ ಎಂಬುದು ಹಸನ್‌ಗೆ ಮರೆತೇ ಹೋಗಿದೆ. ಅವರು 2018 ರಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಆದರೆ ಕಾಶ್ಮೀರದಲ್ಲಿ ಉತ್ತಮ ಸಂಬಳದ ಕೆಲಸವನ್ನು ಹುಡುಕಲು ಈ ವರೆಗೆ ಸಾಧ್ಯವಾಗಲಿಲ್ಲ.

ಅನೇಕ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ನಾನೀಗ ಎಣಿಕೆ ಕಳೆದುಕೊಂಡಿದ್ದೇನೆ ಎಂದು ಕೇಂದ್ರ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ವಾಸಿಸುವ 28 ವರ್ಷದ ಹಸನ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಖಾಸಗಿ ವಲಯವು ಬಹುತೇಕ ನಗಣ್ಯವಾಗಿರುವುದರಿಂದ, ಸಂಘಟಿತ ವಲಯದಲ್ಲಿ ಸರ್ಕಾರವೇ  ಉದ್ಯೋಗಗಳ ಮುಖ್ಯ ಮೂಲವಾಗಿದೆ. ಆದರೂ, ಹಸನ್ ಕಣಿವೆಗಳಲ್ಲಿರುವ ಕೆಲವು ಖಾಸಗಿ ಸಾಫ್ಟ್‌ವೇರ್ ಕಂಪನಿಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ.

ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯತ್ವ ಮತ್ತು ಸ್ವಾಯತ್ತತೆಯಿಂದ (statehood and autonomy ) ತೆಗೆದುಹಾಕಿದಾಗ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (Union Territories)ವಿಭಜಿಸಿದಾಗ ಎಲ್ಲವೂ ಅಂತ್ಯಗೊಂಡಿತು. ತಿಂಗಳುಗಳ ಕಾಲ ಇಂಟರ್ನೆಟ್ ಬಂದ್ ಮಾಡಲಾಯಿತು, ಇತರ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಯಿತು.

NIT KARNATAKA RECRUITMENT 2022: ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ

ಮತ್ತೆ  ಇವೆಲ್ಲ ಸೌಲಭ್ಯಗಳನ್ನು ಮರಳಿ ನೀಡಿದಾಗ, ಹಲವು ಸವಾಲುಗಳು ಇದ್ದವು. ಆಗಸ್ಟ್ 2019 ರ ಶಾಸನಗಳು ಆರ್ಟಿಕಲ್ 35A ಅಡಿಯಲ್ಲಿ ರಕ್ಷಣೆಗಳನ್ನು ವಿಸರ್ಜಿಸಿದ್ದವು, ಇದು ಜಮ್ಮು ಮತ್ತು ಕಾಶ್ಮೀರದ ದೀರ್ಘಾವಧಿಯ ನಿವಾಸಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸಿದೆ.

"ನಾನು ಹತಾಶನಾಗಿದ್ದೇನೆ, ಈಗ ಹೊರಗಿನವರು ಇಲ್ಲಿ ಉದ್ಯೋಗಗಳಿಗೆ ಅರ್ಹರಾಗಿರುವುದರಿಂದ, ಭವಿಷ್ಯವು ಮತ್ತಷ್ಟು ಕ್ಷೀಣಿಸಿದೆ ಎಂದು ಹಸನ್ ಹೇಳಿದರು. 

ಕೊನೆ ಇಲ್ಲದ ಉದ್ಯೋಗ ಹುಡುಕಾಟವು  ಹಸನ್ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾಲ್ಕು ವರ್ಷಗಳ ನಿರಂತರ ಹುಡುಕಾಟದ ಬಳಿಕ ಅವರು ಈಗ ಉದ್ಯೋಗವನ್ನು ಹುಡುಕಲು ಜಮ್ಮು ಮತ್ತು ಕಾಶ್ಮೀರದಿಂದ ಹೊರಹೋಗುವ ಚಿಂತನೆಯಲ್ಲಿದ್ದಾರೆ.

ಕೇಂದ್ರವು ಆಗಸ್ಟ್ 2019 ರಲ್ಲಿ ತೆಗೆದುಕೊಂಡ  ಕ್ರಮಗಳನ್ನು ಸಮರ್ಥಿಸಿಕೊಂಡಿದೆ.  ಹೆಚ್ಚಿನ ಸಮೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮಾಡುವ ಬಗ್ಗೆ  ಹೇಳಿಕೊಂಡಿದೆ.

ಏಪ್ರಿಲ್ 24 ರಂದು ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗಿ ವಲಯದಲ್ಲಿ ಹೂಡಿಕೆ ಮಾಡುವುದನ್ನು ಘೋಷಿಸಿದ್ದರು.  38,000 ಕೋಟಿ ರೂ. ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರಿಗೆ  ಸಹಾಯವಾಗಲಿದೆ ಎಂದು ಭರವಸೆ ನೀಡಿದ್ದರು.

ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court

ನಿರುದ್ಯೋಗ ಅಂಕಿಅಂಶಗಳ ವಿಭಿನ್ನ ಕಥೆ:
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿಗಳ ಪೈಕಿ ಹಸನ್ ಕೂಡ ಸೇರಿದ್ದಾರೆ. ಥಿಂಕ್‌ಟ್ಯಾಂಕ್, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರಕಟಿಸಿದ ಮಾಸಿಕ ಮಾಹಿತಿಯಂತೆ ಕಳೆದ  ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗವು 25% ಕ್ಕೆ ತಲುಪಿದೆ.  ದೇಶದಲ್ಲಿ ಎರಡನೇ ಅತಿ ಹೆಚ್ಚು ನಿರುಧ್ಯೋಗ  ಹರಿಯಾಣ (26.7%) ದಲ್ಲಿದೆ.  ಮತ್ತು ರಾಷ್ಟ್ರೀಯ ಸರಾಸರಿ 7.6% ಕ್ಕಿಂತ ಹೆಚ್ಚಿದೆ.

ಮಾರ್ಚ್‌ನಲ್ಲಿ ಅಂಕಿಅಂಶಗಳು ಮತ್ತು ಮಾಹಿತಿ ಸಚಿವಾಲಯವು ಪ್ರಕಟಿಸಿದ ಮತ್ತೊಂದು ಸಮೀಕ್ಷೆಯ ಪ್ರಕಾರ, ಏಪ್ರಿಲ್-ಜೂನ್ 2021 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 15-29 ವಯೋಮಾನದವರಲ್ಲಿ ನಿರುದ್ಯೋಗವು 46.3% ರಷ್ಟಿತ್ತು, ಇದು ಹಿಂದಿನ ತ್ರೈಮಾಸಿಕದಲ್ಲಿ 44.1% ರಿಂದ ಹೆಚ್ಚಾಗಿದೆ.

ಆಗಸ್ಟ್ 2019 ರ ನಂತರ ವಿಷಯಗಳು ಸುಧಾರಿಸಲಿಲ್ಲ. ಹೊಸ ಆಡಳಿತವು ಜಮ್ಮು ಮತ್ತು ಕಾಶ್ಮೀರಕ್ಕೆ ಹೂಡಿಕೆಗಳನ್ನು ಸೆಳೆಯಲು ಕ್ರಮಗಳನ್ನು ಘೋಷಿಸಿತು. ಮಾರ್ಚ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆರು ತಿಂಗಳೊಳಗೆ 70,000 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ನಿರೀಕ್ಷಿಸುವುದಾಗಿ ಹೇಳಿದೆ. ಕಳೆದ ವರ್ಷ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ 28,400 ಕೋಟಿ ರೂಪಾಯಿಗಳ ಕೈಗಾರಿಕಾ ಹೂಡಿಕೆ ಪ್ಯಾಕೇಜ್ ಅನ್ನು ಘೋಷಿಸಿತು. ಇದು 4.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭರವಸೆ ವ್ಯಕ್ತಪಡಿಸಿದ್ದರು.

ಈ ಕ್ರಮಗಳ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಏಕೆ ಹೆಚ್ಚಿದೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪರಿಸ್ಥಿತಿಗೆ ಸತತ ಮೂರು ಲಾಕ್‌ಡೌನ್‌ಗಳನ್ನು ಹಲವರು ಸೂಚಿಸುತ್ತಾರೆ. ಆಗಸ್ಟ್ 2019 ರಲ್ಲಿ ವ್ಯಾಪಕವಾದ ಶಾಸಕಾಂಗ ಬದಲಾವಣೆಗಳನ್ನು ಪರಿಚಯಿಸಿದಂತೆ. ಕಾಶ್ಮೀರ ಕಣಿವೆಯಲ್ಲಿ ತಿಂಗಳುಗಟ್ಟಲೆ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಂಡಿತ್ತು.

ಜನವರಿ 2020 ರಲ್ಲಿ, ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಂಶೋಧನೆ ಪ್ರಕಾರ ಆಗಸ್ಟ್ 2019 ರ ಲಾಕ್‌ಡೌನ್‌ನಿಂದ ಕಣಿವೆಯ ಆರ್ಥಿಕತೆಗೆ ಸುಮಾರು 18,000 ಕೋಟಿ ರೂ. ಗೆ ಇಳಿದಿದೆ.  ಸಂಶೋಧನೆಗಳ ಪ್ರಕಾರ, ಅತಿ ಹೆಚ್ಚು ಉದ್ಯೋಗ ನಷ್ಟಗಳು ವ್ಯಾಪಾರ ವಲಯದಲ್ಲಿವೆ, ಅಲ್ಲಿ ನಾಲ್ಕು ತಿಂಗಳಲ್ಲಿ ಸುಮಾರು 1.2 ಲಕ್ಷ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಹೊಡೆತವು ಪ್ರವಾಸೋದ್ಯಮ ಮತ್ತು ಕರಕುಶಲಗಳ ಮೇಲೆ ವಿಶೇಷವಾಗಿ ಪ್ರಭಾವಿತವಾಗಿವೆ.

ಕೈಗಾರಿಕಾ ವಲಯದಲ್ಲಿ ಸುಮಾರು 70,000 ಮತ್ತು ಸಾರಿಗೆಯಲ್ಲಿ 60,000 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸುಮಾರು ಮೂರು ಲಕ್ಷ ಜನರಿಗೆ ಉದ್ಯೋಗ ನೀಡುವ ಸಾರಿಗೆ ಕ್ಷೇತ್ರದ ಮೇಲೆ ಇದರ ಪರಿಣಾಮ ಇನ್ನೂ ಕೆಟ್ಟದಾಗಿದೆ. ಲಾಕ್‌ಡೌನ್‌ಗಳು ಮುಂದುವರಿದಂತೆ, ಅನೇಕ ಖಾಸಗಿ ಬಸ್ ಮಾಲೀಕರು ಬದುಕುಳಿಯುವ ಸಲುವಾಗಿ ತಮ್ಮ ವಾಹನಗಳ ಭಾಗಗಳನ್ನು ಸ್ಕ್ರ್ಯಾಪ್‌ನಂತೆ ಮಾರಾಟ ಮಾಡಿದ್ದಾರೆ!

ಕಾಶ್ಮೀರದಲ್ಲಿ ವ್ಯಾಪಾರ ವಲಯವು ಮೂರು ವರ್ಷಗಳಲ್ಲಿ ಅತ್ಯಂತ ಕೆಟ್ಟದಾಗಿದೆ. ಕೃಷಿಯ ನಂತರ, ಇದು ದೊಡ್ಡ ಉದ್ಯೋಗದಾತ. ಇದು ಚಿಲ್ಲರೆ ವ್ಯಾಪಾರ, ಪ್ರವಾಸೋದ್ಯಮ, ಆತಿಥ್ಯ ಮತ್ತು ಇತರ ಸೇವೆಗಳನ್ನು ಒಳಗೊಂಡಿದೆ.

ವಾಸ್ತವವಾಗಿ, ವ್ಯಾಪಾರ ನಾಯಕರು ಮತ್ತು ಅರ್ಥಶಾಸ್ತ್ರಜ್ಞರು ಹೆಚ್ಚಿನ ಬಿಕ್ಕಟ್ಟು ಸರ್ಕಾರದ ತಪ್ಪು ನಿರ್ವಹಣೆಯಿಂದ ಉಂಟಾಗಿದೆ ಎಂದು ಭಾವಿಸುತ್ತಾರೆ.

ಆಗಸ್ಟ್ 2019 ರ ನಂತರ, ಹೊರಗಿನ ಹೂಡಿಕೆಯನ್ನು ಸಮೃದ್ಧಿಯ ಮಾರ್ಗಸೂಚಿ ಎಂದು ಹೇಳಲಾಯಿತು. ಅಂತಹ ಹೂಡಿಕೆಯನ್ನು ಸೆಳೆಯಲು ಹೆಚ್ಚಿನ ಯೋಜನೆಗಳು ಮತ್ತು ನೀತಿಗಳನ್ನು ರೂಪಿಸಲಾಗಿದೆ.

ಸಮಸ್ಯೆ ರಾಜಕೀಯ ಮತ್ತು ಆರ್ಥಿಕವಾಗಿರಬಹುದು. ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದಾಗಿನಿಂದ, ಇದು ಯಾವುದೇ ಚುನಾಯಿತ ಸರ್ಕಾರವನ್ನು ಹೊಂದಿಲ್ಲ ಮತ್ತು ಅಧಿಕಾರಶಾಹಿ ಆಡಳಿತದಿಂದ ನಡೆಸಲ್ಪಡುತ್ತದೆ ಎಂಬುದು ಮುಖ್ಯ ವಿಚಾರ.

Follow Us:
Download App:
  • android
  • ios