Asianet Suvarna News Asianet Suvarna News

ಗ್ಯಾರಂಟಿ​ಗಳ ಅನು​ಷ್ಠಾ​ನದ ಬಗ್ಗೆ ಒಂದು ವಾರ ಕಾದು ನೋಡಿ: ಪರಮೇಶ್ವರ್‌

ಭರ​ವ​ಸೆ​ಗಳು ನಮ್ಮ ಪಕ್ಷದ ಸುಳ್ಳು ಭರ​ವ​ಸೆ​ಗ​ಳಲ್ಲ. ನುಡಿ​ದಂತೆ ನಡೆ​ಯಲು ಘೋಷಣೆ ಮಾಡಿ​ದ್ದೇವೆ. ಮೊದಲ ಸಂಪುಟ ಸಭೆ​ಯ​ಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್‌ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ: ಜಿ.ಪ​ರ​ಮೇ​ಶ್ವರ್‌

Wait for a week for Guarantee Implementation Says Home Minister G Parameshwar grg
Author
First Published May 31, 2023, 6:59 AM IST

ಮಾಗ​ಡಿ/ರಾಮ​ನ​ಗರ(ಮೇ.31): ಚುನಾ​ವಣೆ ಸಂದ​ರ್ಭ​ದಲ್ಲಿ 5 ಗ್ಯಾರಂಟಿಗಳನ್ನು ನಾವು ಕೊಟ್ಟಿ​ದ್ದೇವೆ. ಕಾಂಗ್ರೆಸ್‌ನ ಚುನಾ​ವಣಾ ಪ್ರಣಾ​ಳಿಕೆ ಕಮಿಟಿಗೆ ನಾನೇ ಅಧ್ಯ​ಕ್ಷ​ನಾ​ಗಿದ್ದೆ. ದೇವರ ಸನ್ನಿ​ಧಿ​ಯಲ್ಲಿ ನಿಂತು ಹೇಳು​ತ್ತಿ​ದ್ದೇನೆ. ಆ ಐದೂ ಭರ​ವ​ಸೆ​ಗ​ಳನ್ನು ಈಡೇ​ರಿ​ಸಿ ತೋರಿ​ಸು​ತ್ತೇವೆ. ಕೇವಲ ಒಂದು ವಾರ ಕಾದು ನೋಡಿ ಸಾಕು ಎಂದು ಗೃಹ ಸಚಿವ ಜಿ.ಪ​ರ​ಮೇ​ಶ್ವರ್‌ ಸ್ಪಷ್ಟಪಡಿಸಿದ್ದಾರೆ. 

ಮಾಗಡಿ ತಾಲೂ​ಕಿನ ಹೆಬ್ಬಾ​ಳಲು ಗ್ರಾಮ​ದಲ್ಲಿರುವ ತಮ್ಮ ಮನೆ ದೇವ​ರಾದ ಮುಳು​ಕ​ಟ್ಟಮ್ಮ ದೇವಿ ದೇವ​ಸ್ಥಾ​ನ​ಕ್ಕೆ ಕುಟುಂಬ ಸಮೇ​ತರಾಗಿ ಆಗ​ಮಿಸಿ, ಪೂಜೆ ಸಲ್ಲಿ​ಸಿದ ಬಳಿಕ, ಸುದ್ದಿ​ಗಾ​ರ​ರೊಂದಿಗೆ ಅವರು ಮಾತ​ನಾ​ಡಿ​ದ​ರು. ಆ ಭರ​ವ​ಸೆ​ಗಳು ನಮ್ಮ ಪಕ್ಷದ ಸುಳ್ಳು ಭರ​ವ​ಸೆ​ಗ​ಳಲ್ಲ. ನುಡಿ​ದಂತೆ ನಡೆ​ಯಲು ಘೋಷಣೆ ಮಾಡಿ​ದ್ದೇವೆ. ಮೊದಲ ಸಂಪುಟ ಸಭೆ​ಯ​ಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್‌ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ. ಈ ಭರ​ವಸೆಗಳನ್ನು ಈಡೇ​ರಿ​ಸಲು 40 ರಿಂದ 50 ಸಾವಿರ ಕೋಟಿ ರುಪಾಯಿ ಖರ್ಚಾ​ಗಲಿದೆ. ಆ ಹಣ​ವನ್ನು ಒದ​ಗಿ​ಸುವ ಬುದ್ಧಿ​ವಂತಿಕೆ ಕಾಂಗ್ರೆಸ್‌ ಪಕ್ಷ​ಕ್ಕಿದೆ ಎಂದರು.

Congress Guarantee: ಹಂತ ಹಂತವಾಗಿ ಗ್ಯಾರಂಟಿ ಜಾರಿ?

ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದ ಅವರು, ಹಿಂದಿನ ಬಿಜೆಪಿ ಸರ್ಕಾ​ರ ಭ್ರಷ್ಟಾ​ಚಾ​ರದಲ್ಲಿ ತೊಡ​ಗಿ​ ನಾವು ತಲೆತಗ್ಗಿಸುವಂತಹ ಕೆಲಸ ಮಾಡಿತು. ಈಗ ಅವ​ರು ನಮಗೆ ಪಾಠ ಹೇಳಿ​ಕೊ​ಡು​ವುದು ಬೇಡ. ಈ ಹಿಂದೆ ಜೆಡಿ​ಎಸ್‌ಗೂ ಅಧಿ​ಕಾರ ನಡೆ​ಸಲು ನಾಡಿನ ಜನ ಅವ​ಕಾಶ ನೀಡಿ​ದ್ದರು. ಕುಮಾ​ರ​ಸ್ವಾಮಿಯವರ ಕೈಗೆ ಅಧಿ​ಕಾರ ನೀಡಿ​ದಾಗ ಕೇವಲ 14 ತಿಂಗಳು ಆಡ​ಳಿತ ನಡೆಸಿ, ನಮ್ಮ ಕೈಯಲ್ಲಿ ಆಗ​ಲ್ಲ​ಎಂದು ಬಿಟ್ಟು ಹೋದರು. ಅವರ ಕೆಟ್ಟಆಡಳಿತ ನೋಡಿ ಜನರು ಬುದ್ದಿ ಕಲಿಸಿದ್ದಾರೆ. ಈಗ ಜನರನ್ನು ಎತ್ತಿಕಟ್ಟುವ ಕೆಲಸ ಮಾಡು​ತ್ತಿ​ದ್ದಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios