Asianet Suvarna News Asianet Suvarna News

ಸೋಮಣ್ಣ-ವಿಜಯೇಂದ್ರ ಮುನಿಸು ಶಮನವಾಯ್ತಾ?: ಕುತೂಹಲ ಮೂಡಿಸಿದ ಉಭಯ ನಾಯಕರ ಭೇಟಿ..!

ಸೋಮಣ್ಣ ಪರಸ್ಪರ ಕುಶಲೋಪರಿ ಉಭಯ ನಾಯಕರನ್ನು ಭೇಟಿ ಮಾಡಿಸಲು ವಿವಿಧ ನಾಯಕರು ಪ್ರಯತ್ನ ನಡೆಸಿದರೂ ಸೋಮಣ್ಣ ಅವರು ಒಪ್ಪಿರಲಿಲ್ಲ. ಇದೀಗ ಮೊದಲ ಬಾರಿಗೆ ವಿಜಯೇಂದ್ರ ಅವರ ಭೇಟಿ ಬಗ್ಗೆ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಕುತೂಹಲ ಮೂಡಿಸಿದೆ.

V Somanna and BY Vijayendra Met in Bengaluru grg
Author
First Published Feb 27, 2024, 6:58 AM IST

ಬೆಂಗಳೂರು(ಫೆ.27):  ಮಾಜಿ ಸಚಿವ ವಿ.ಸೋಮಣ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಡುವಿನ ಮುನಿಸು ಶಮನಗೊಂಡಂತಿದೆ. ನಗರದಲ್ಲಿ ನಡೆದ ಶಾಸಕ ಕೆ. ಗೋಪಾಲಯ್ಯ ಅವರ ಪುತ್ರನ ವಿವಾಹ ನಿಶ್ಚಯ ಕಾರ್ಯಕ್ರಮದಲ್ಲಿ ಉಭಯ ನಾಯಕರು ಮುಖಾಮುಖಿಯಾಗಿ ಕೆಲಹೊತ್ತು ಸಮಾಲೋಚನೆ ನಡೆಸಿದರು.

ಈ ಬಗ್ಗೆ ಸೋಮಣ್ಣ ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವಿವರ ಹಂಚಿಕೊಂಡಿದ್ದು, ಸಮಾರಂಭವೊಂದರಲ್ಲಿ ವಿಜಯೇಂದ್ರ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಸಿ.ಟಿ.ರವಿ ಅವರೂ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.

ತುಮಕೂರಿನಲ್ಲಿ ಯಾರಾಗುತ್ತಾರೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ: ಸೋಮಣ್ಣನಾ! ಕುಮಾರಣ್ಣನಾ

ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಪರೋಕ್ಷವಾಗಿ ಮಾಜಿ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರರಾಗಿರುವ ವಿಜಯೇಂದ್ರ ವಿರುದ್ಧ ಪದೇ ಪದೇ ಹರಿಹಾಯುತ್ತಿದ್ದರು. ನಂತರದ ದಿನಗಳಲ್ಲಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕವೂ ಅವರೊಂದಿಗೆ ಸೋಮಣ್ಣ ದೂರ ಉಳಿದಿದ್ದರು. ಅವರೊಂದಿಗೆ ಮುಖಾಮುಖಿಯೇ ಆಗಿರಲಿಲ್ಲ.

ಸೋಮಣ್ಣ ಪರಸ್ಪರ ಕುಶಲೋಪರಿ ಉಭಯ ನಾಯಕರನ್ನು ಭೇಟಿ ಮಾಡಿಸಲು ವಿವಿಧ ನಾಯಕರು ಪ್ರಯತ್ನ ನಡೆಸಿದರೂ ಸೋಮಣ್ಣ ಅವರು ಒಪ್ಪಿರಲಿಲ್ಲ. ಇದೀಗ ಮೊದಲ ಬಾರಿಗೆ ವಿಜಯೇಂದ್ರ ಅವರ ಭೇಟಿ ಬಗ್ಗೆ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಕುತೂಹಲ ಮೂಡಿಸಿದೆ.

Follow Us:
Download App:
  • android
  • ios