Asianet Suvarna News Asianet Suvarna News

ಚುನಾ​ವ​ಣೆ ಗೆಲ್ಲಲು ಅಮಿತ್‌ ಶಾ ಪಂಚ​ಸೂ​ತ್ರ: ಮೋದಿ, ಪಕ್ಷದ ಹೆಸ​ರಲ್ಲಿ ಚುನಾವಣಾ ಪ್ರಚಾರ ನಡೆ​ಸಿ

ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆ ಗೆಲ್ಲಲು ಕೇಂದ್ರ ಗೃಹ ಸಚಿವ, ಬಿಜೆಪಿ ತಂತ್ರ​ಗಾ​ರಿಕೆ ನಿಪು​ಣರೂ ಆಗಿ​ರುವ ಅಮಿತ್‌ ಶಾ ಅವರು ಪಕ್ಷದ ಮುಖಂಡ​ರಿಗೆ ಪಂಚ ಸೂತ್ರ​ಗ​ಳನ್ನು ಮುಂದಿ​ಟ್ಟಿ​ದ್ದಾ​ರೆ. 

Union Minister Amit Shah Panchasutra to win the karnataka election gvd
Author
First Published Feb 24, 2023, 7:42 AM IST

ಸಂಡೂರು (ಬ​ಳ್ಳಾ​ರಿ) (ಫೆ.24): ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆ ಗೆಲ್ಲಲು ಕೇಂದ್ರ ಗೃಹ ಸಚಿವ, ಬಿಜೆಪಿ ತಂತ್ರ​ಗಾ​ರಿಕೆ ನಿಪು​ಣರೂ ಆಗಿ​ರುವ ಅಮಿತ್‌ ಶಾ ಅವರು ಪಕ್ಷದ ಮುಖಂಡ​ರಿಗೆ ಪಂಚ ಸೂತ್ರ​ಗ​ಳನ್ನು ಮುಂದಿ​ಟ್ಟಿ​ದ್ದಾ​ರೆ. ಕಲ್ಯಾಣ ಕರ್ನಾ​ಟಕ ಭಾಗ​ದಲ್ಲಿ ಈ ಬಾರಿ ಪಕ್ಷವು ಗರಿಷ್ಠ ಸ್ಥಾನ​ಗ​ಳನ್ನು ಗೆಲ್ಲಬೇ​ಕಿ​ದ್ದರೆ ತಳ​ಮ​ಟ್ಟ​ದಲ್ಲಿ ಮುಖಂಡರು, ಕಾರ್ಯ​ಕ​ರ್ತರು ಕೆಲಸ ಮಾಡ​ಬೇ​ಕು. ಡಬಲ್‌ ಎಂಜಿನ್‌ ಸರ್ಕಾ​ರದ ಸಾಧ​ನೆ​ಗಳು, ಕಾರ್ಯ​ಕ್ರ​ಮ​ಗ​ಳನ್ನು ಮನೆ ಮನೆಗೆ ತಲು​ಪಿ​ಸ​ಬೇಕು ಎಂದು ಅಮಿತ್‌ ಶಾ ಅವರು ಸಲಹೆ ನೀಡಿ​ದ್ದಾ​ರೆ.

ಸಂಡೂ​ರಲ್ಲಿ ಬಿಜೆಪಿ ಸಮಾ​ವೇ​ಶದ ಬಳಿಕ ಶಿವಪುರ ಪ್ಯಾಲೇಸ್‌ನಲ್ಲಿ ಗುರುವಾರ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಪಕ್ಷದ ರಾಯ​ಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜ​ಯ​ನ​ಗರ ಜಿಲ್ಲೆ​ಗಳ ಕೋರ್‌ ಕಮಿಟಿ ಸಭೆಯಲ್ಲಿ ಅವರು ಚುನಾ​ವಣೆ ಎದು​ರಿ​ಸುವ ಸಂಬಂಧ ಮಹ​ತ್ವದ ಸಲಹೆ-ಸೂಚ​ನೆ​ಗ​ಳನ್ನು ನೀಡಿ​ದ​ರು.

ಮಾಂಸ ತಿಂದಿದ್ದು ನಿಜ, ಆದರೆ ದೇಗುಲದೊಳಕ್ಕೆ ಹೋಗಿಲ್ಲ: ಸಿ.ಟಿ.ರವಿ

1. ಮೋದಿ, ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡಿ: ಎಲ್ಲ ಟಿಕೆ​ಟ್‌ ಆಕಾಂಕ್ಷಿಗಳು ಪ್ರಧಾನಿ ಮೋದಿ ಹಾಗೂ ಪಕ್ಷದ ಹೆಸರಿನಲ್ಲಿ ಚುನಾ​ವ​ಣಾ ಪ್ರಚಾರ ಮಾಡಬೇಕು. ತಮ್ಮ ವೈಯಕ್ತಿಕ ಹೆಸರಿನಲ್ಲಿ ಪ್ರಚಾರ ಮಾಡು​ವು​ದನ್ನು ಕೈಬಿ​ಡ​ಬೇಕು. ಮೋದಿ ಮತ್ತು ಪಕ್ಷ​ವನ್ನು ಮುಂದಿ​ಟ್ಟು​ಕೊಂಡು ಚುನಾ​ವ​ಣೆಗೆ ಹೋಗ​ಬೇ​ಕು. ಯಾರೂ ಪಕ್ಷದ ನಿರ್ದೇಶನ ಉಲ್ಲಂಘಿಸಬಾರದು.

2. ಕ್ಲಸ್ಟರ್‌ ಮಾಡಿ​ಕೊ​ಳ್ಳಿ: ಕ್ಷೇತ್ರದಲ್ಲಿ ಮೂರ್ನಾಲ್ಕು ಗ್ರಾಮಕ್ಕೊಂದು ಕ್ಲಸ್ಟರ್‌ ಮಾಡಿಕೊಳ್ಳಬೇಕು. ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಕ್ಲಸ್ಟರ್‌ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕು.

3 ಯುವ ಮೋರ್ಚಾ ಬಲ​ಪ​ಡಿ​ಸಬೇಕು. ಯುವ ಮೋರ್ಚಾ ಕಾರ್ಯ​ಕ​ರ್ತರು ಬೈಕ್‌ ಮೂಲಕ ಪ್ರಚಾರ ಮಾಡ​ಬೇಕು.

4 ಪ್ರತಿ ವಿಧಾ​ನ​ಸಭಾ ಕ್ಷೇತ್ರ​ಳಲ್ಲಿ ಮಹಿಳಾ ಮೋರ್ಚಾ ತಂಡ​ಗ​ಳನ್ನು ರಚಿ​ಸ​ಬೇ​ಕು.

5 ಮಹಿಳಾ ಮೋರ್ಚಾ ತಂಡ​ಗ​ಳನ್ನು ಸ್ವ-ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಶಾ ಅವರು ಸಭೆ​ಯಲ್ಲಿ ಹೇಳಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ರೋಹಿಣಿ ವರ್ಸಸ್‌ ರೂಪಾಗೆ ಕೋರ್ಟ್‌ ಬ್ರೇಕ್‌: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು

ಸುಮಾರು 15ರಿಂದ 20 ನಿಮಿ​ಷ​ಗಳ ಕಾಲ ನಡೆದ ಈ ಸಭೆ​ಯಲ್ಲಿ ಸಚಿವರಾದ ಆನಂದ್‌ ಸಿಂಗ್‌, ಶಶಿಕಲಾ ಜೊಲ್ಲೆ ಅವರು ಕೂಡ ಪಕ್ಷ ಸಂಘಟನೆ ಕುರಿತು ಕೆಲ ಸಲಹೆ ನೀಡಿದರು ಎನ್ನ​ಲಾ​ಗಿ​ದೆ. ಮಾಜಿ ಮುಖ್ಯ​ಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಸಾರಿಗೆ ಸಚಿವ ಬಿ. ಶ್ರೀರಾಮುಲು ಪಾಲ್ಗೊಂಡಿ​ದ್ದ​ರು. ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕ ಸೋಮಲಿಂಗಪ್ಪ ಹಾಗೂ ನಾಲ್ಕು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಹಾಲಿ, ಮಾಜಿ ಶಾಸಕರು ಸೇರಿದಂತೆ 80 ಜನ ಪ್ರಮುಖರು ಇದ್ದರು.

Follow Us:
Download App:
  • android
  • ios