Asianet Suvarna News Asianet Suvarna News

ಎನ್‌ಇಪಿ ರದ್ದು: ಡಿಕೆಶಿಗೆ 8 ಪ್ರಶ್ನೆ ಕೇಳಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದು ವಿಚಾರಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಟ್ವೀಟರ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಎಂಟು ಪ್ರಶ್ನೆಗಳನ್ನು ಹಾಕಿದ್ದಾರೆ.

Union Education Minister Dharmendra Pradhan asked 8 questions to DK Shivakumar gvd
Author
First Published Aug 23, 2023, 8:20 AM IST

ಬೆಂಗಳೂರು (ಆ.23): ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದು ವಿಚಾರಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಟ್ವೀಟರ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಎಂಟು ಪ್ರಶ್ನೆಗಳನ್ನು ಹಾಕಿದ್ದಾರೆ.

1.ಔಪಚಾರಿಕ ಶಿಕ್ಷಣದ ಭಾಗವಾಗಿ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಡಿಕೆಶಿ ಅವರು ಮತ್ತು ಕಾಂಗ್ರೆಸ್‌ ಪಕ್ಷವು ವಿರೋಧಿಸುತ್ತದೆಯೇ? ಮಕ್ಕಳು ಗ್ರೇಡ್‌ 2 ಮುಗಿಸುವ ಹೊತ್ತಿಗೆ ಅಡಿಪಾಯದ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಸಾಧಿಸಬೇಕೆಂದು ಅವರು ಬಯಸುವುದಿಲ್ಲವೇ?

2.ಸ್ಥಳೀಯ ಭಾರತೀಯ ಆಟಿಕೆಗಳು, ಆಟಗಳು ಮತ್ತು ನಮ್ಮ ಮಕ್ಕಳಿಗೆ ಆಟದ ಆಧಾರಿತ ಕಲಿಕೆಯನ್ನು ವಿರೋಧಿಸುತ್ತೀರಾ? ಕರ್ನಾಟಕದಲ್ಲಿ ಚಿಣ್ಣರ ಮನೆಯನ್ನು ವಿರೋಧಿಸುತ್ತೀರಾ?

ಖರ್ಗೆಗೆ ಕೆಲಸ ಮಾಡಲು ಬಿಡದ ಗಾಂಧಿ ಕುಟುಂಬ: ಸಂಸದ ಲೇಹರ್‌ ಟೀಕೆ

3.ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ವಿರೋಧಿಸುತ್ತೀರಾ? ನೀಟ್‌, ಸಿಯುಇಟಿ, ಜೆಇಇ ಯಂತಹ ಪರೀಕ್ಷೆಗಳು ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಪಾರದರ್ಶಕವಾಗಿ ನಡೆಯಬೇಕೆಂದು ಬಯಸುವುದಿಲ್ಲವೇ?

4.ಬಹುಮಾದರಿ ಶಿಕ್ಷಣವನ್ನು ವಿರೋಧಿಸುತ್ತೀರಾ? ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲೆ ಮತ್ತು ಕ್ರೀಡೆಗಳನ್ನು ಶಾಲಾ ಶಿಕ್ಷಣದಲ್ಲಿ ಅಧ್ಯಯನದ ನಿರ್ಣಾಯಕ ಕ್ಷೇತ್ರಗಳಾಗಿ ಏಕೀಕರಿಸುವುದನ್ನು ವಿರೋಧಿಸುತ್ತೀರಾ?

5.ಕರ್ನಾಟಕದ ಯುವಕರು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಪಡೆಯಬೇಕೆಂದು ನಿಮಗೆ ಅನಿಸುವುದಿಲ್ಲವೇ?

6.21ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಬಯಸುವುದಿಲ್ಲವೇ? 21ನೇ ಶತಮಾನದ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ಪಠ್ಯಪುಸ್ತಕಗಳು ಮಕ್ಕಳಿಗೆ ಬೇಡವೇ?

7.ಕಲಿಯುವಾಗ ಗಳಿಸುವ ಅವಕಾಶಗಳನ್ನು ವಿರೋಧಿಸುತ್ತೀರಾ?

8.ಡಯಟ್‌ಗಳನ್ನು ಉತ್ಕೃಷ್ಟತೆಯ ಕೇಂದ್ರಗಳಾಗಿ ಮರುರೂಪಿಸುವ ಮೂಲಕ ನಮ್ಮ ಶಿಕ್ಷಕರ ಸಾಮರ್ಥ್ಯದ ಕೇಂದ್ರಗಳನ್ನು ಬಲಪಡಿಸಲು ಬಯಸುವುದಿಲ್ಲವೇ?

ಈ ಸರ್ಕಾರ 5 ವರ್ಷ ಇರುವುದಿಲ್ಲ, ಜೆಡಿಎಸ್‌ ಕಾರ್ಯಕರ್ತರು ಭಯಪಡಬೇಕಿಲ್ಲ: ಎಚ್‌ಡಿಕೆ

ಇದೇ ವೇಳೆ ಎನ್‌ಇಪಿಯ ಮೇಲೆ ರಾಜ್ಯದ ನಾಯಕರ ಅಸಂಬದ್ಧ ಹೇಳಿಕೆಗಳು ದೆಹಲಿಯಲ್ಲಿರುವ ಅವರ ಹೈಕಮಾಂಡ್‌ ಅನ್ನು ಮೆಚ್ಚಿಸಬಹುದು. ಆದರೆ ಇದು ಕರ್ನಾಟಕದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ರಾಜಿ ಮಾಡಿಕೊಂಡಂತೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

Follow Us:
Download App:
  • android
  • ios