Asianet Suvarna News Asianet Suvarna News

ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಡಿ.ಕೆ.ಸುರೇಶ್‌ ವಾಗ್ದಾಳಿ

ರಾಮ​ನ​ಗರ ಕ್ಷೇತ್ರ​ದಿಂದ ತಾತಾ, ಮಗ, ಸೊಸೆ ಅಧಿ​ಕಾರ ಅನು​ಭ​ವಿ​ಸಿ​ದ್ದಾ​ಯಿತು. ಇದೀಗ ಮೊಮ್ಮಗ ಬಂದಿ​ದ್ದಾನೆ. ಮಂಡ್ಯ ಕ್ಷೇತ್ರದ ಜನರು ಬೇಡವೆಂದು ಕಳು​ಹಿ​ಸಿದ ವ್ಯಕ್ತಿ​ಯನ್ನು ನೀವೇಕೆ ಇಟ್ಟು​ಕೊ​ಳ್ಳು​ತ್ತೀರಾ. 

MP DK Suresh Slams On HD Kumaraswamy Family At Ramanagara gvd
Author
First Published Feb 6, 2023, 8:16 PM IST

ರಾಮ​ನ​ಗರ (ಫೆ.06): ರಾಮ​ನ​ಗರ ಕ್ಷೇತ್ರ​ದಿಂದ ತಾತಾ, ಮಗ, ಸೊಸೆ ಅಧಿ​ಕಾರ ಅನು​ಭ​ವಿ​ಸಿ​ದ್ದಾ​ಯಿತು. ಇದೀಗ ಮೊಮ್ಮಗ ಬಂದಿ​ದ್ದಾನೆ. ಮಂಡ್ಯ ಕ್ಷೇತ್ರದ ಜನರು ಬೇಡವೆಂದು ಕಳು​ಹಿ​ಸಿದ ವ್ಯಕ್ತಿ​ಯನ್ನು ನೀವೇಕೆ ಇಟ್ಟು​ಕೊ​ಳ್ಳು​ತ್ತೀರಾ. ಮಂಡ್ಯದವರ ತೀರ್ಮಾ​ನ​ವನ್ನು ರಾಮ​ನ​ಗರ ಜನರು ತೆಗೆದು​ಕೊ​ಳ್ಳ​ಬೇಕು ಎಂದು ಜೆಡಿ​ಎಸ್‌ ಸಂಭಾವ್ಯ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಸೋಲಿ​ಸು​ವಂತೆ ಸಂಸದ ಡಿ.ಕೆ.​ಸು​ರೇಶ್‌ ಪರೋ​ಕ್ಷ​ವಾಗಿ ಕರೆ​ನೀ​ಡಿ​ದ​ರು. ತಾಲೂ​ಕಿನ ತುಂಬೇ​ನ​ಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿ​ಎಸ್‌ ಮುಖಂಡರ ಕಾಂಗ್ರೆಸ್‌ ಸೇರ್ಪಡೆ ಕಾರ್ಯ​ಕ್ರ​ಮ​ದಲ್ಲಿ ಮಾತ​ನಾ​ಡಿದ ಅವರು, ಈಗ ಹೊಸ ಪರ್ವ ಅಂತ ಮಾಜಿ ಸಿಎಂ ಕುಮಾ​ರ​ಸ್ವಾಮಿ ಮಗ​ನನ್ನು ನಿಲ್ಲಿ​ಸುತ್ತಿ​ದ್ದಾರೆ. 

ಆ ಪಕ್ಷ​ದಲ್ಲಿ ಬೇರೆ ಕಾರ್ಯ​ಕ​ರ್ತರು ಇರ​ಲಿ​ಲ್ಲವೇ. ಅವ​ರಿ​ಗೇಕೆ ಅವ​ಕಾಶ ನೀಡ​ಲಿಲ್ಲ. ಈ ಬಗ್ಗೆ ಸಾರ್ವ​ಜ​ನಿ​ಕ​ವಾ​ಗಿಯೂ ಚರ್ಚೆ ಆಗ​ಬೇಕು ಎಂದರು. ಮಂಡ್ಯ ಸಂಸದೆ ಸುಮ​ಲತಾ ಒಕ್ಕ​ಲಿ​ಗ​ರಲ್ಲ. ಆ ಕ್ಷೇತ್ರದ ಜನರು ಬುದ್ಧಿ​ವಂತಿಕೆ ಮೆರೆ​ದರು. ಅದೇ ರೀತಿ ರಾಮ​ನ​ಗರ ಕ್ಷೇತ್ರದ ಜನರು ತಮ್ಮ ಕಷ್ಟಸುಖ​ಗ​ಳಲ್ಲಿ ಭಾಗಿ​ಯಾಗಿ, ಕ್ಷೇತ್ರ​ವನ್ನು ಅಭಿ​ವೃ​ದ್ಧಿ​ಯತ್ತ ಕೊಂಡೊ​ಯ್ಯುವ ಸಾಮ​ಥ್ಯ​ರ್‍ವಿರುವ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವ​ರಿಗೆ ಅವ​ಕಾಶ ನೀಡಿ ಬುದ್ಧಿ​ವಂತಿಕೆ ಪ್ರದ​ರ್ಶನ ಮಾಡ​ಬೇ​ಕಿದೆ. ಅವರು ತಮ್ಮ ತವರು ಜಿಲ್ಲೆಗೆ ಹೋಗಿ ಏನು ಬೇಕಾ​ದರು ಮಾಡಿ​ಕೊ​ಳ್ಳಲಿ ಎಂದು ಹೇಳಿ​ದ​ರು. 

ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ: ಸಂಸದ ಡಿ.ಕೆ.ಸುರೇಶ್‌

ಆ ಕುಟುಂಬ​ದವರ ಕೊಡುಗೆ ಏನು: ಕೊರೋನಾ ಸಂಕಷ್ಟಕಾಲ​ದಲ್ಲಿ ಸ್ಥಳೀ​ಯ ಶಾಸ​ಕರು ಕೊರೋನಾ ಬರುತ್ತದೆ ಅಂತ ಮನೆ​ಯಲ್ಲಿ ಬೀಗ ಹಾಕಿ​ಕೊಂಡು ಕುಳಿ​ತಿ​ದ್ದರು. ಆದರೆ, ಇಕ್ಬಾಲ್‌ ಹುಸೇನ್‌ ರವರು ತಮ್ಮ ಪ್ರಾಣದ ಹಂಗನ್ನು ತೊರೆದು ಸಂಕ​ಷ್ಟ​ದ​ಲ್ಲಿದ್ದ ಜನರಿಗೆ ಕೈಲಾದ ಸೇವೆ ಮಾಡಿ​ದರು. ಇದನ್ನು ಜನರು ಮರೆ​ಯ​ಬಾ​ರದು ಎಂದು ತಿಳಿ​ಸಿ​ದರು. ರಾಮ​ನ​ಗರ ಕ್ಷೇತ್ರ​ಕ್ಕೆ ಒಮ್ಮೆ ಪ್ರಧಾನಿ ಹಾಗೂ ನಾಲ್ಕು ಬಾರಿ ಮುಖ್ಯ​ಮಂತ್ರಿ​ಯನ್ನು ಕೊಡುಗೆ ನೀಡಿದ ಕೀರ್ತಿ ಇದೆ. ಇಷ್ಟಾ​ದರು ರಾಮ​ನ​ಗರ ಕ್ಷೇತ್ರದ ಜನರು ನೆಮ್ಮ​ದಿಯ ಜೀವ​ನ ನಡೆ​ಸಲು ಬೇಕಾದ ಕನಿಷ್ಠ ಮೂಲ​ಸೌ​ಕ​ರ್ಯ​ಗಳನ್ನು ಕಲ್ಪಿ​ಸಿಲ್ಲ. 

ರಸ್ತೆ, ಚರಂಡಿ, ಕುಡಿ​ವ ನೀರು, ಸೂರಿ​ಲ್ಲ​ದ​ವ​ರಿಗೆ ಮನೆ, ನಿವೇ​ಶನ, ಯುವ​ಕ​ರಿಗೆ ಉದ್ಯೋಗದಂತಹ ಸಮ​ಸ್ಯೆ​ಗ​ಳಿಗೆ ಪರಿ​ಹಾ​ರ ಸಿಕ್ಕಿ​ದಿಯಾ ಎಂಬ ಪ್ರಶ್ನೆ ಕಾಡು​ತ್ತಿದೆ. ಪ್ರಧಾನಿ, ಮುಖ್ಯ​ಮಂತ್ರಿ​ಯಂತಹ ಉನ್ನತ ಹುದ್ದೆ ಸಿಕ್ಕಿ​ದಾ​ಗಲೂ ಜನರ ಕಷ್ಟನೀಗಿಸಿ ರಾಮ​ನ​ಗ​ರ​ವನ್ನು ಮಾದರಿ ಕ್ಷೇತ್ರ​ವ​ನ್ನಾಗಿ​ಸಲು ಸಾಧ್ಯ​ವಾ​ಗ​ಲಿಲ್ಲ ಏಕೆ. ಆಡ​ಳಿ​ತ​ದ​ಲ್ಲಿ​ದ್ದಾಗ ಮಾಡ​ಲಾ​ಗ​ದನ್ನು ಮುಂದೆ ಹೇಗೆ ಸಾಧ್ಯ​ವಾ​ಗು​ತ್ತದೆ. ಒಂದೇ ಪಕ್ಷ, ಒಂದೇ ಕುಟುಂಬ​ವನ್ನು ಇನ್ನೇಷ್ಟುದಿನ ನಂಬಿ ಮೋಸ ಹೋಗು​ತ್ತೀರಾ ಎಂದು ಪ್ರಶ್ನಿಸಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಸುರೇಶ್‌ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು.

ರಾಮ​ನ​ಗರ ಅಭಿ​ವೃ​ದ್ಧಿ​ಯಲ್ಲಿ 25-30ವರ್ಷ​ಗ​ಳಷ್ಟುಹಿಂದಕ್ಕೆ ಹೋಗಿದೆ. ತಾಲೂಕು ಆಡ​ಳಿ​ತ​ದಲ್ಲಿ ಭ್ರಷ್ಟಾ​ಚಾರ ತಾಂಡವ ಆಡು​ತ್ತಿದೆ. ಕ​ನ​ಕ​ಪುರ ಕ್ಷೇತ್ರ​ದಲ್ಲಿ ಆಗಿ​ರುವ ಅಭಿ​ವೃದ್ಧಿ ಕಾರ್ಯ​ಗಳು ರಾಮ​ನ​ಗ​ರ​ದಲ್ಲಿ ಏಕೆ ಆಗಿ​ಲ್ಲ​ವೆಂದು ಜನರು ತುಲನೆ ಮಾಡು​ತ್ತಿ​ದ್ದಾ​ರೆ.

ಹೊಸ ನಾಯ​ಕ​ತ್ವಕ್ಕೆ ಶಕ್ತಿ ತುಂಬಿ: ಕ್ಷೇತ್ರ​ವನ್ನು ಒಂದು ಕುಟುಂಬ​ದ​ವರ ಕೈಗೆ ನೀಡುವ ಪದ್ಧ​ತಿಗೆ ತಿಲಾಂಜಲಿ ಹಾಡಲು ಯುವ​ಕರು ಸಂಕಲ್ಪ ಮಾಡಿ ಒಳ್ಳೆಯ ನಿರ್ಧಾರ ಮಾಡಿ​ದ್ದಾರೆ. ಯುವ​ಕರಿಗೆ ಬೆನ್ನೆ​ಲು​ಬಾಗಿ ನಿಲ್ಲುವ ಡಿ.ಕೆ.​ಶಿ​ವ​ಕು​ಮಾರ್‌ ಅನೇಕ ಸಮ​ಸ್ಯೆ​ಗ​ಳನ್ನು ಮುಂದಿ​ಟ್ಟು​ಕೊಂಡು ಹೋರಾಟ ನಡೆ​ಸು​ತ್ತಿ​ದ್ದಾರೆ. ಆ ಹೊಸ ನಾಯ​ಕ​ತ್ವಕ್ಕೆ ಇಕ್ಬಾಲ್‌ ಅವ​ರನ್ನು ಬೆಂಬ​ಲಿ​ಸುವ ಮೂಲಕ ಶಕ್ತಿ ತುಂಬುವ ಕೆಲ​ಸ​ವನ್ನು ಜನರು ಮಾಡ​ಬೇಕು ಎಂದು ಮನವಿ ಮಾಡಿ​ದರು. ಯುವ​ಕ​ರಿಗೆ ಉದ್ಯೋಗ ಸೇರಿ​ದಂತೆ ಎಲ್ಲ ವರ್ಗದ ಜನರ ಕಲ್ಯಾಣ ಕಾರ್ಯ​ಕ್ರ​ಮ ರೂಪಿ​ಸ​ಬೇ​ಕಿ​ದೆ. 

ಹೀಗಾ​ಗಿಯೇ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ , ಮನೆ ಯಾಜ​ಮಾ​ನಿಗೆ 2 ಸಾವಿರ , ಬಡ​ವ​ರಿಗೆ 10 ಕೆಜಿ ಅಕ್ಕಿ ಸೇರಿ​ದಂತೆ ಇನ್ನೂ ಅನೇಕ ಘೋಷ​ಣೆ​ಗಳನ್ನು ಕಾಂಗ್ರೆಸ್‌ ಮಾಡ​ಲಿದೆ. ಅದೆ​ಲ್ಲ​ವನ್ನು ಪಕ್ಷ ಅಧಿ​ಕಾ​ರಕ್ಕೆ ಬಂದ ಕೂಡಲೇ ಅನುಷ್ಠಾ​ನಕ್ಕೆ ತರು​ತ್ತೇವೆ ಎಂದು ಭರ​ವಸೆ ನೀಡಿ​ದ​ರು. ಕಾಂಗ್ರೆಸ್‌ ಅಧಿ​ಕಾ​ರ​ದ​ಲ್ಲಿದ್ದ ಅವ​ಧಿ​ಯಲ್ಲಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿ​ಸು​ತ್ತಿ​ರ​ಲಿಲ್ಲ. ಆದರೆ, ಪ್ರಧಾನಿ ಮೋದಿ ನೇತೃ​ತ್ವದ ಸರ್ಕಾರ ಎಲ್ಲದರ ಮೇಲೂ ತೆರಿಗೆ ಹೇರಿಕೆ ಮಾಡುತ್ತಿದೆ. ತೆರಿಗೆ ಕಟ್ಟಿಊಟ ಮಾಡುವ ಸ್ಥಿತಿ ಬಂದಿದೆ. ಆದ್ದ​ರಿಂದ ಕರ್ನಾ​ಟ​ಕ​ವನ್ನು ಅತ್ಯು​ತ್ತಮ ರಾಜ್ಯ​ವ​ನ್ನಾಗಿ ನಿರ್ಮಿ​ಸಲು ಕಾಂಗ್ರೆಸ್‌ ಪಕ್ಷ​ವನ್ನು ಬೆಂಬ​ಲಿ​ಸು​ವಂತೆ ಸುರೇಶ್‌ ಮನವಿ ಮಾಡಿ​ದರು.

ಎಚ್‌ಡಿಕೆ ಮೊದಲು ತಮ್ಮ ಮನೆ ಬೆಂಕಿ ಆರಿಸಿಕೊಳ್ಳಲಿ: ಸಂಸದ ಮುನಿಸ್ವಾಮಿ

ಗ್ರಾಪಂ ಬಿಜೆಪಿ ಬೆಂಬ​ಲಿತ ಸದಸ್ಯ ಪುನೀತ್‌ ಕುಮಾರ್‌, ಜೆಡಿ​ಎಸ್‌ ಮುಖಂಡ ರವಿ ಶಂಕರ್‌ , ಡೇರಿ ಅಧ್ಯಕ್ಷ ಸೀಬ​ಕಟ್ಟೆ ರಾಮ​ಕೃಷ್ಣ, ಚಂದ್ರ​ಶೇ​ಖರ್‌, ತುಂಬೇ​ನ​ಹಳ್ಳಿ ಮಹ​ದೇವ, ಹನು​ಮಂತೇ​ಗೌ​ಡ​ನ​ದೊಡ್ಡಿ ಶಶಿ​ಕು​ಮಾರ್‌, ಮಲ್ಲೇ​ಗೌಡ, ಚಂದ್ರಪ್ಪ, ಪ್ರದೀಪ್‌, ಗೋವಿಂದಯ್ಯ ಮತ್ತಿ​ತ​ರರು ಕಾಂಗ್ರೆಸ್‌ ಸೇರ್ಪೆ​ಡೆ​ಯಾ​ದ​ರು. ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಚೇತನ್‌ ಕುಮಾರ್‌, ವಿ.ಎಚ್‌ .ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ಕಾರ್ಮಿಕ ಘಟಕ ಜಿಲ್ಲಾ​ಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕ ಅಧ್ಯಕ್ಷೆ ದೀಪಾ ಮುನಿರಾಜು, ಮುಖಂಡ​ರಾದ ​ಉಮಾಶಂಕರ್‌, ಅಪ್ಪಾ​ಜ​ಣ್ಣ, ಜಗಣ್ಣ, ಗ್ರಾಪಂ ಅಧ್ಯಕ್ಷೆ ಸರೋ​ಜಮ್ಮ, ಉಪಾ​ಧ್ಯಕ್ಷ ಗೋಪಾಲ್‌, ಮಾಜಿ ಉಪಾ​ಧ್ಯಕ್ಷ ಪುಟ್ಟ​ಸ್ವಾಮಿ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios