Asianet Suvarna News Asianet Suvarna News

ಜೆಡಿಎಸ್‌ ಶಾಸಕರೇ ಸುಮಲತಾ ಟಾರ್ಗೆಟ್‌: ಶಾ​ಸಕ ಸಿ.ಎಸ್‌.ಪುಟ್ಟರಾಜು

ದಿಶಾ ಸಭೆ ನಡೆಸಿ ಜೆಡಿಎಸ್‌ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವುದೇ ಸಂಸದೆ ಸುಮಲತಾ ಕೆಲಸವಾಗಿದೆ. ಅಭಿವೃದ್ಧಿ ವಿಚಾರವಾಗಿ ಅವರ ಸಾಧನೆ ಶೂನ್ಯ ಎಂದು ಶಾ​ಸಕ ಸಿ.​ಎಸ್‌. ಪು​ಟ್ಟ​ರಾಜು ಕಿ​ಡಿ​ಕಾ​ರಿ​ದರು. 

MLA CS Puttaraju Slams On MP Sumalatha Ambareesh At Mandya gvd
Author
First Published Nov 2, 2022, 10:12 PM IST

ಮಂಡ್ಯ (ನ.02): ದಿಶಾ ಸಭೆ ನಡೆಸಿ ಜೆಡಿಎಸ್‌ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವುದೇ ಸಂಸದೆ ಸುಮಲತಾ ಕೆಲಸವಾಗಿದೆ. ಅಭಿವೃದ್ಧಿ ವಿಚಾರವಾಗಿ ಅವರ ಸಾಧನೆ ಶೂನ್ಯ ಎಂದು ಶಾ​ಸಕ ಸಿ.​ಎಸ್‌. ಪು​ಟ್ಟ​ರಾಜು ಕಿ​ಡಿ​ಕಾ​ರಿ​ದರು. ತಾ​ಲೂ​ಕಿನ ದುದ್ದ ಹೋ​ಬ​ಳಿಯ ಚಂದ​ಗಾಲು ಗ್ರಾ​ಮ​ದಲ್ಲಿ ಲೋ​ಕೋ​ಪ​ಯೋಗಿ ಇ​ಲಾಖೆ ವ​ತಿ​ಯಿಂದ ಚಂದ​ಗಾಲು-ತಂಡ​ಸ​ನ​ಹಳ್ಳಿ ಮಾರ್ಗವಾಗಿ 3 ಕೋಟಿ ರು. ವೆ​ಚ್ಚದ ರಸ್ತೆ ಅ​ಭಿ​ವೃದ್ಧಿ ಕಾ​ಮ​ಗಾ​ರಿ​ಗ​ಳಿಗೆ ಚಾ​ಲನೆ ನೀಡಿ ಮಾ​ತ​ನಾ​ಡಿ, ನ​ರೇಗಾ ಯೋ​ಜ​ನೆ​ಯಲ್ಲಿ ಮಂಡ್ಯ ಜಿಲ್ಲೆ ಕೊನೆಯ ಸ್ಥಾ​ನ​ದ​ಲ್ಲಿದ್ದು, ಸಂಸದೆ ಸು​ಮ​ಲತಾ ಯಾ​ವುದೇ ಅ​ಭಿ​ವೃದ್ಧಿ ಕೆ​ಲಸ ಮಾ​ಡು​ತ್ತಿಲ್ಲ. 

ನ​ರೇಗಾ ಯೋ​ಜ​ನೆ​ಯಡಿ ಒಂದೊಂದು ಪಂಚಾ​ಯ್ತಿಯಲ್ಲಿ 10 ಕೋಟಿ ರು. ಕೆ​ಲಸ ಮಾ​ಡು​ವಂತಹ ಅ​ವ​ಕಾ​ಶ​ಗ​ಳಿವೆ. ನಾನೂ ಸಹ ನಾಲ್ಕು ವರ್ಷಗಳ ಕಾಲ ಸಂಸ​ದ​ನಾಗಿ ಕೆ​ಲಸ ಮಾ​ಡಿದ್ದೆ. ಕೇಂದ್ರ​ದಿಂದ ಹಣ ತಂದು ಯಾವ ರೀತಿ ಕೆ​ಲಸ ಮಾ​ಡ​ಬ​ಹುದು ಎಂಬು​ದನ್ನು ತೋ​ರಿ​ಸಿ​ಕೊ​ಟ್ಟಿ​ದ್ದೇನೆ. ಆ​ದ​ರೆ, ಸು​ಮ​ಲತಾ ಅ​ವರು ಯಾ​ವುದೇ ಕೆ​ಲಸ ಮಾ​ಡದೆ ಕೇ​ವಲ ಗೊಂದಲ ಮೂ​ಡಿ​ಸುತ್ತಿ​ದ್ದಾರೆ ಎಂದು ಟೀ​ಕಿ​ಸಿ​ದರು. ಇ​ನ್ನಾ​ದರೂ ಕೀಳು ಮ​ಟ್ಟದ ರಾ​ಜ​ಕೀಯ, ಜೆ​ಡಿ​ಎಸ್‌ ಶಾ​ಸ​ಕ​ರನ್ನು ಟೀ​ಕಿ​ಸು​ವು​ದನ್ನು ಬಿಟ್ಟು ಅ​ಭಿ​ವೃದ್ಧಿ ಕಾ​ರ‍್ಯ​ಗ​ಳನ್ನು ಮಾಡಿ ಜಿ​ಲ್ಲೆಗೆ ಹೆ​ಸರು ತ​ರುವ ಕೆ​ಲಸ ಮಾ​ಡಲಿ ಎಂದು ಸ​ಲಹೆ ನೀ​ಡಿ​ದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರ

ಬಿ​ಜೆಪಿ ವಿ​ರುದ್ಧವೂ ವಾ​ಗ್ದಾಳಿ: ನನ್ನ 40 ವರ್ಷದ ರಾ​ಜ​ಕೀಯ ಜೀ​ವ​ನ​ದಲ್ಲಿ ಇಂತಹ ಕೆಟ್ಟವ್ಯ​ವಸ್ಥೆಯನ್ನು ನೋ​ಡಿ​ರ​ಲಿಲ್ಲ. ಇಂತಹ ಬೇ​ಜ​ವಾ​ಬ್ದಾರಿ ಸರ್ಕಾರ ಹಾಗೂ ಬೇ​ಜ​ವಾ​ಬ್ದಾರಿ ಮಂತ್ರಿ​ಗ​ಳನ್ನು ನಾನು ನೋ​ಡಿ​ರ​ಲಿಲ್ಲ ಎಂದು ಬಿ​ಜೆಪಿ ಸರ್ಕಾರದ ವಿ​ರುದ್ಧ ವಾ​ಗ್ದಾಳಿ ನ​ಡೆ​ಸಿ​ದರು. ಒಂದು ವರ್ಷವಾ​ದರೂ ಉ​ಸ್ತು​ವಾರಿ ಸ​ಚಿವ ಗೋ​ಪಾ​ಲಯ್ಯ ಕ​ಚೇರಿ ತೆ​ರೆ​ದಿಲ್ಲ. ಈ ಸರ್ಕಾರ​ದಲ್ಲಿ ಅ​ಭಿ​ವೃದ್ಧಿ ವಿ​ಚಾರ ಇ​ಲ್ಲವೇ ಇಲ್ಲ. ನಾ​ರಾ​ಯ​ಣ​ಗೌಡ ಪ್ರ​ತಿ​ನಿ​ಧಿಸುವ ಕೆ.​ಆರ್‌.ಪೇಟೆ ಹೊ​ರ​ತು​ಪ​ಡಿಸಿ ಉ​ಳಿದ ಕ್ಷೇ​ತ್ರ​ಗಳು ಗೋ​ಪಾ​ಲಯ್ಯ ಅ​ವ​ರಿಗೆ ಕಾ​ಣು​ವು​ದಿಲ್ಲ ಎಂದು ಅ​ಸ​ಮಾ​ಧಾನ ವ್ಯ​ಕ್ತ​ಪ​ಡಿ​ಸಿ​ದರು.

ಶಿ​ವ​ರಾ​ಮೇ​ಗೌ​ಡ​ರಿಗೆ ತಿ​ರು​ಗೇಟು: ಮಾಜಿ ಸಂಸದ ಎಲ್‌.​ಆರ್‌.ಶಿ​ವ​ರಾ​ಮೇ​ಗೌ​ಡರು ಮಂಡ್ಯ ಜಿಲ್ಲೆ ಜೆ​ಡಿ​ಎಸ್‌ ಭ​ದ್ರ​ಕೋಟೆ ಛಿ​ದ್ರ​ವಾ​ಗ​ಲಿ​ದೆ ಎಂದು ಹೇ​ಳಿ​ದ್ದಾರೆ. ಇ​ದನ್ನು ಶಿ​ವ​ರಾ​ಮೇ​ಗೌಡ ಹೇ​ಳು​ವು​ದ​ರಿಂದ ಅದು ಸಾ​ಬೀತಾಗುವುದಿಲ್ಲ. ಜಿ​ಲ್ಲೆಯ ಜ​ನತೆ ಕ​ಳೆದ ಬಾರಿ ಏ​ಳಕ್ಕೆ ಏಳೂ ಜೆ​ಡಿ​ಎಸ್‌ ಶಾ​ಸ​ಕ​ರನ್ನು ಗೆ​ಲ್ಲಿ​ಸಿ​ಕೊ​ಟ್ಟಿ​ದ್ದರು. ಅದೇ ರೀತಿ ಮ​ತ್ತೊಮ್ಮೆ ಜನ ಆ​ಶೀರ್ವಾದ ಮಾಡಿ ಕೊಡು​ತ್ತಾರೆ. ಅದು ಜ​ನರ ತೀರ್ಮಾನ ಶಿ​ವ​ರಾ​ಮೇ​ಗೌಡ ಹೇ​ಳು​ವು​ದ​ರಿಂದ ತೀರ್ಮಾನ​ವಾ​ಗು​ವು​ದಿಲ್ಲ ಎಂದು ಅ​ವ​ರಿಗೆ ತಿ​ರು​ಗೇಟು ನೀ​ಡಿ​ದರು.

ಎಸ್‌.ಎಂ.ಕೃಷ್ಣ ಯೋಜನೆಗಳ ಹಿಂದೆ ನನ್ನ ಪರಿಶ್ರಮವಿತ್ತು:ಡಿ.ಸಿ.ತಮ್ಮಣ್ಣ

ಮ​ಳೆ​ಯಿಂದಾಗಿ ಸಾ​ಕಷ್ಟು ಹಾ​ನಿ​ಯುಂಟಾ​ಗಿತ್ತು. ಮಾ​ರ​ಚಾ​ಕ​ನ​ಹಳ್ಳಿ ಗ್ರಾಪಂ ವ್ಯಾ​ಪ್ತಿ​ಯಲ್ಲಿ ಸಾ​ಕಷ್ಟುಸ​ಮ​ಸ್ಯೆ​ಗ​ಳಿತ್ತು. ಅ​ದನ್ನು ಪಟ್ಟಿಮಾಡಿ ಎ​ಲ್ಲ​ವನ್ನೂ ಸ​ರಿ​ಪ​ಡಿ​ಸುವ ಕಾರ‍್ಯ ಮಾ​ಡು​ತ್ತಿ​ದ್ದೇವೆ. ಹಂತ ಹಂತ​ವಾಗಿ ಅ​ಭಿ​ವೃದ್ಧಿ ಕಾ​ರ‍್ಯ​ವನ್ನು ಮಾ​ಡು​ತ್ತೇನೆ. ಜ​ನರ ಸ​ಮ​ಸ್ಯೆಗೆ ತ​ಕ್ಷ​ಣವೇ ಸ್ಪ​ಂದಿಸಿ ಕೆ​ಲಸ ಮಾ​ಡು​ತ್ತೇನೆ. ಈ​ಗಾ​ಗಲೇ ವ​ಡ್ಡ​ರ​ಹ​ಳ್ಳಿ​ಕೊ​ಪ್ಪಲು, ಕು​ರಿ​ಕೊ​ಪ್ಪಲು ಗ್ರಾ​ಮದ ಅ​ಭಿ​ವೃ​ದ್ಧಿಗೂ ಚಾ​ಲನೆ ನೀ​ಡಿ​ದ್ದೇನೆ ಎಂದರು. ಜೆ​ಡಿ​ಎಸ್‌ ಮು​ಖಂಡ ಚಂದ​ಗಾಲು ಶ್ರೀ​ಧರ್‌, ವಿ​ಜ​ಯ​ಕು​ಮಾರ್‌, ತಮ್ಮ​ಣ್ಮ ಗ್ರಾಮ ಪಂಚಾ​ಯಿತಿ ಅ​ಧ್ಯಕ್ಷೆ ಪ​ವಿತ್ರಾ ಶಿ​ವ​ಕು​ಮಾರ್‌, ಸ​ದ​ಸ್ಯ​ರಾದ ನಿ​ರಂಜನ್‌, ಸಿ​ದ್ದ​ರಾಜು, ಸಂತೋಷ್‌, ಎಂಜಿ​ನಿ​ಯರ್‌ ಲೋ​ಕೇಶ್‌, ಜ​ಗ​ದೀಶ್‌, ಗು​ತ್ತಿ​ಗೆ​ದಾರ ರಾ​ಘ​ವೇಂದ್ರ ಇ​ತ​ರ​ರಿ​ದ್ದರು.

Follow Us:
Download App:
  • android
  • ios