Asianet Suvarna News Asianet Suvarna News

KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ

 ಕೆಎಂಎಫ್‌ ಅನ್ನು ಗುಜ​ರಾ​ತಿನ ಅಮುಲ್‌ ಸಂಸ್ಥೆ​ಯೊಂದಿಗೆ ವಿಲೀನದ ಯಾವುದೇ ಚಿಂತನೆ ನಡೆ​ದಿ​ಲ್ಲ​ವೆಂದು ಮುಖ್ಯ​ಮಂತ್ರಿ​ಗಳೇ ಸ್ಪಷ್ಟ​ವಾ​ಗಿ ಹೇಳಿ​ದ್ದಾರೆ. ಆದಾಗ್ಯು ಬೃಹ​ಸ್ಪ​ತಿ​ಗಳು ಬೇಜ​ವಾ​ಬ್ದಾರಿ ಹೇಳಿ ನೀಡುತ್ತಿ​ರು​ವುದು ಅವ​ರ​ ಕೀಳು ಮಟ್ಟ​ವನ್ನು ತೋರಿ​ಸು​ತ್ತಿದೆ ಎಂದು ಸಿದ್ದರಾಮಯ್ಯ, ಹೆಚ್ಡಿಕೆ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.

minister cn ashwath narayana outraged against siddaramaih and HDK at ramanagar rav
Author
First Published Jan 3, 2023, 10:44 AM IST

 ಕುದೂರು (ಜ.3) : ಕೆಎಂಎಫ್‌ ಅನ್ನು ಗುಜ​ರಾ​ತಿನ ಅಮುಲ್‌ ಸಂಸ್ಥೆ​ಯೊಂದಿಗೆ ವಿಲೀನದ ಯಾವುದೇ ಚಿಂತನೆ ನಡೆ​ದಿ​ಲ್ಲ​ವೆಂದು ಮುಖ್ಯ​ಮಂತ್ರಿ​ಗಳೇ ಸ್ಪಷ್ಟ​ವಾ​ಗಿ ಹೇಳಿ​ದ್ದಾರೆ. ಆದಾಗ್ಯು ಬೃಹ​ಸ್ಪ​ತಿ​ಗಳು ಬೇಜ​ವಾ​ಬ್ದಾರಿ ಹೇಳಿ ನೀಡುತ್ತಿ​ರು​ವುದು ಅವ​ರ​ ಕೀಳು ಮಟ್ಟ​ವನ್ನು ತೋರಿ​ಸು​ತ್ತಿದೆ ಎಂದು ಮಾಜಿ ಮುಖ್ಯ​ಮಂತ್ರಿ​ಗ​ಳಾದ ಸಿದ್ದ​ರಾ​ಮಯ್ಯ ಮತ್ತು ಕುಮಾ​ರ​ಸ್ವಾಮಿ ವಿರುದ್ಧ ಜಿಲ್ಲಾ ಉಸ್ತು​ವಾ​ರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ವಾಗ್ದಾಳಿ ನಡೆ​ಸಿ​ದರು.

ಮಾಗಡಿ(Magadi) ತಾಲೂಕು ತಿಪ್ಪ​ಸಂದ್ರ ಹೋಬ​ಳಿಯ ಸಂಕಿ​ಘ​ಟ್ಟ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮುಖ್ಯ​ಮಂತ್ರಿ​ಗಳು ಸ್ಪಷ್ಟನೆ ನೀಡಿದ ಮೇಲೂ ಬೇಜ​ವಾ​ಬ್ದಾರಿ ಹೇಳಿಕೆ ನೀಡಿ, ಯಾರೂ ಕೀಳು ಮಟ್ಟದ ರಾಜ​ಕೀಯ ಮಾಡ​ಬಾ​ರದು ಎಂದರು.

ಸಚಿವ ಅಶ್ವತ್ಥ್ ನಾರಾಯಣ ಮಾದರಿ ಪ್ರತಿನಿಧಿ: ಬಿ.ಎಸ್‌.ಯಡಿಯೂರಪ್ಪ

ರಾಮದೇವರ ಬೆಟ್ಟ(Ramadevara betta )ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ(HD Kumaraswamy) ಹೇಳಿಕೆ ವಿಚಾರಕ್ಕೆ ಉತ್ತ​ರಿ​ಸಿದ ಸಚಿ​ವರು, ಶ್ರೀರಂಗ ನೀರಾ​ವರಿ ಯೋಜ​(Sriranga irregation project)ನೆಗೆ ನಮ್ಮ ಸರ್ಕಾ​ರವು 175 ಕೋಟಿ ರುಪಾಯಿ ಕೊಟ್ಟಿದೆ. ಕುಮಾ​ರ​ಸ್ವಾಮಿ ಕೈಯಲ್ಲಿ 20 ವರ್ಷವಾದರೂ ಈ ಕೆಲಸ ಆಗು​ತ್ತಿ​ರ​ಲಿಲ್ಲ. ಮಂಚ​ನ​ಬೆಲೆ ಯೋಜ​ನೆಯ ಕತೆಯೂ ಅಷ್ಟೆಎಂದು ಕಿಡಿ​ಕಾ​ರಿ​ದ​ ಸಚಿವರು, ಕುಮಾ​ರ​ಸ್ವಾ​ಮಿ​ರ​ವರು ಕೆಂಪೇ​ಗೌ​ಡರ ಜಪ ಮಾಡು​ತ್ತಿ​ದ್ದರು ಅಷ್ಟೆ. ಕೆಂಪಾ​ಪು​ರ​ದಲ್ಲಿ ಕೆಂಪೇ​ಗೌ​ಡರ ಸಮಾ​ಧಿಗೆ ಪೂಜೆ ಮಾಡಿ ಹೋದ​ವರು ನಾಪ​ತ್ತೆ​ಯಾ​ದರು. ಸಮಾಧಿ ಅಭಿ​ವೃ​ದ್ಧಿಗೆ ಒಂದು ಗುಂಟೆ ಜಮೀ​ನನ್ನು ಸಹ ಸ್ವಾಧೀನ ಪಡಿ​ಸಿ​ಕೊ​ಳ್ಳು​ವುದು ಅವ​ರಿಗೆ ಸಾಧ್ಯ​ವಾ​ಗ​ಲಿಲ್ಲ. ಆದರೆ, ಬಿಜೆಪಿ ಸರ್ಕಾರ(BJP govt) ಕೆಂಪೇ​ಗೌಡರ ನೆನ​ಪನ್ನು ಚಿರ​ಸ್ಥಾ​ಯಿ​ಯಾಗಿ ಮಾಡಿದೆ ಎಂದು ಹೇಳಿ​ದರು.

ಕೆಂಪೇಗೌಡರ ಹೆಸರು ಹೇಳಿದರೆ ವಿನಾಃ ಒಂದು ನಯಾಪೈಸೆ ಕೆಲಸ ಮಾಡಲಿಲ್ಲ. ಮಾಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಏನಾಯಿತು ಎಂದು ಪ್ರಶ್ನಿ​ಸಿದ ಸಚಿ​ವರು, 65 ಕೋಟಿ ರುಪಾಯಿ ವೆಚ್ಚ​ದಲ್ಲಿ ಜಿಟಿ​ಟಿಸಿ, ಸಂಸ್ಕೃತ ವಿವಿ ಕ್ಯಾಂಪಸ್‌, ಕುದೂ​ರಿ​ನಲ್ಲಿ ಕೈಗಾ​ರಿಕಾ ಪ್ರದೇಶ ರಚನೆ, ಮಾಗಡಿ - ಸೋಮ​ವಾ​ರ​ಪೇಟೆ ಚತು​ಷ್ಪಥ ರಸ್ತೆ ಇವೆ​ಲ್ಲವೂ ಬಿಜೆಪಿ ಸರ್ಕಾ​ರದ ಜಿಲ್ಲೆಗೆ ಕೊಟ್ಟಿ​ರುವ ಯೋಜ​ನೆ​ಗ​ಳಾ​ಗಿವೆ. ಇದನ್ನು ಕುಮಾ​ರ​ಸ್ವಾಮಿ ನೆನ​ಪಿ​ಸಿ​ಕೊ​ಳ್ಳ​ಬೇಕು ಎಂದು ಕುಟು​ಕಿ​ದ​ರು.

ಸಿದ್ರಾಮುಲ್ಲಾಖಾನ್‌ ಅಂತ ಹೆಸರು ಬದಲಿಸಿ: ಸಚಿವ ಅಶ್ವತ್ಥ್‌ ನಾರಾಯಣ

ಬಿಜೆಪಿ ಸರ್ಕಾರ ಎಲ್ಲರಿಗೂ ಉದ್ಯೋಗ ಸಿಗುವ ಕೆಲಸ ಮಾಡು​ತ್ತಿ​ದ್ದೇ​ವೆ. ಒಬ್ಬ​ರಿಗೆ ಒಂದು ಉದ್ಯೋಗ ಕೊಡಿ​ಸುವ ಕೆಲ​ಸವನ್ನು ಅವರು ಮಾಡ​ಲಿಲ್ಲ. ಆದರೆ, ಕೋಟಿ ಜನ​ರಿಗೆ ಕೌಶಲ್ಯ ಕೊಡಿ​ಸುವ ಶಕ್ತಿ ನಮ್ಮ ಸರ್ಕಾ​ರ​ಕ್ಕಿದೆ. ಶಿಕ್ಷಣ, ಅರೋಗ್ಯ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿ​ದ್ದೇವೆ. ಅಭಿ​ವೃದ್ಧಿ ಅಂದರೆ ಮೂಲ​ಭೂ​ತ​ವಾಗಿ ಏನು ಬೇಕೊ ಅದನ್ನು ಕೊಡು​ವು​ದಾ​ಗಿದೆ. ರಾಜ​ಕೀಯ ಮಾಡು​ವುದು ಕೇವಲ ಲಾಭ​ಕ್ಕಾಗಿ ಅಲ್ಲ. ರಾಜ​ಕೀಯ ಮಾಡು​ವುದು ಅಭಿ​ವೃ​ದ್ಧಿ​ಗಾಗಿ ಎಂಬು​ದನ್ನು ವಿರೋ​ಧಿ​ಗಳು ತಿಳಿದುಕೊಳ್ಳ​ಬೇಕು ಎಂದು ಅಶ್ವತ್ಥ ನಾರಾ​ಯಣ ಸಲಹೆ ನೀಡಿ​ದರು.

Follow Us:
Download App:
  • android
  • ios