ಉಡುಪಿ ಚಿಕ್ಕಮಗಳೂರು- 72.13
ಹಾಸನ- 72.13
ದಕ್ಷಿಣ ಕನ್ನಡ 71.83
ಚಿತ್ರದುರ್ಗ 67
ತುಮಕೂರು- 72.10
ಮಂಡ್ಯ- 74.87
ಮೈಸೂರು- 65.85
ಚಾಮರಾಜನಗರ- 69.60
ಬೆಂಗಳೂರು ಗ್ರಾಮಾಂತರ- 61.78
ಬೆಂಗಳೂರು ಉತ್ತರ 50.04
ಬೆಂಗಳೂರು ಕೇಂದ್ರ- 48.61
ಚಿಕ್ಕಬಳ್ಳಾಪುರ 70.97
ಕೋಲಾರ- 71.26
ಕರ್ನಾಟಕ Election 2024 Live: ಕರ್ನಾಟಕದ ಮೊದಲ ಹಂತದ ಮತಯುದ್ಧಕ್ಕೆ ಶಾಂತಿಯುತ ತೆರೆ

ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇದುವರಿಗಿನ ಮಾಹಿತಿಯಂತೆ ಶೇ.70 ಮತದಾನವಾಗಿದ್ದು, ಸ್ಪಷ್ಟ ಚಿತ್ರಣವಿನ್ನೂ ಸಿಕ್ಕಿಲ್ಲ. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಮಂಡ್ಯ, ಮೈಸೂರು, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಚುನಾವಣೆ ನಡೆದಿದೆ. 2.88 ಕೋಟಿ ಮತದಾರರಿಗೆ, 30602 ಮತಗಟ್ಟೆ ತೆರೆಯಲಾಗಿತ್ತು. ಚುನಾವಣಾ ಕಾರ್ಯಕ್ಕೆ 1.4 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶುಕ್ರವಾರ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿ, ಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿತ್ತು ಉತ್ತರ ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.
ಮಂಡ್ಯದಲ್ಲಿ ಹೈಯೆಸ್ಟ್, ಬೆಂಗಳೂರು ಕೇಂದ್ರದಲ್ಲಿ ಕಡಿಮೆ ಮತದಾನ
ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದಕ್ಕೆ ತೇಜಸ್ವಿ ಸೂರ್ಯ ಮೇಲೆ ಕೇಸ್
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.

ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ನಾರಾಯಣ ಮೂರ್ತಿ!
ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದುತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮತ ಚಲಾಯಿಸಿದ ಜಾವಗಲ್ ಶ್ರೀನಾಥ್
ಟೀಮ್ ಇಂಡಿಯಾ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಮೈಸೂರಿನಲ್ಲಿ ಮತ ಚಲಾಯಿಸಿದ್ದಾರೆ.

ಸ್ಟ್ರೆಚರ್ನಲ್ಲಿ ಮತಗಟ್ಟೆಗೆ ಬಂದು ವೋಟ್ ಮಾಡಿದ ಬೆಂಗಳೂರಿನ ವೃದ್ಧೆ!
ನ್ಯುಮೋನಿಯಾದಿಂದ ಬಳಲುತ್ತಿದ್ದ 78 ವರ್ಷದ ಮಹಿಳೆಯೊಬ್ಬರು ಇಂದು ಕರ್ನಾಟಕದಲ್ಲಿ ಆಕ್ಸಿಜನ್ ಸಪೋರ್ಟ್ನಲ್ಲಿಯೇ ಬಂದು ಮತದಾನ ಮಾಡಿದರು.
ಆಕ್ಸಿಜನ್ ಸಪೋರ್ಟ್ನೊಂದಿಗೆ ಸ್ಟ್ರೆಚರ್ನಲ್ಲಿ ಬಂದು ವೋಟ್ ಮಾಡಿದ ಬೆಂಗಳೂರು ಮಹಿಳೆ!
ದೇಶದಲ್ಲಿ ಶೇ. 50.3ರಷ್ಟು ಮತದಾನ
ದೇಶದಲ್ಲಿ ಮತದಾನ ನಡೆಯುತ್ತಿರುವ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.3ರಷ್ಟು ಮತದಾನವಾಗಿದೆ.

ಮಧ್ಯಾಹ್ನ 3 ಗಂಟೆಯ ವೇಳೆಗೆ ಕರ್ನಾಟಕದಲ್ಲಿ ಮತ ಪ್ರಮಾಣ
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.93ರಷ್ಟು ಮತದಾನವಾಗಿದೆ.

113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ
113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಮತದಾನ. ತನ್ನ ಸಾಕು ಮಗ ಉಮೇಶ್ ಜೊತೆ ತೆರಳಿ ಮತದಾನ ಮಾಡಿದ ಸಾಲುಮರದ ತಿಮ್ಮಕ್ಕ. 113 ವರ್ಷದ ವಯಸ್ಸಿನಲ್ಲೂ ಮತಗಟ್ಟೆ ಖುದ್ದು ತೆರಳಿ ಮತದಾನ ಮಾಡಿದ ಸಾಲು ಮರದತಿಮ್ಮಕ್ಕ.

Kolara Lok Sabha Elections 2024: ಬಂಗಾರದ ನಾಡಲ್ಲಿ ಮಲ್ಲೇಶ್-ಗೌತಮ್ ಹಣಾಹಣಿ
ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.
ಮತ ಚಲಾಯಿಸಿದ ಡಿಕೆ ಬ್ರದರ್ಸ್
ಕನಕಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಮ್ಮೂರಿನ ಮತಗಟ್ಟೆ ಹೋಗಿ ಮತ ಚಲಾಯಿಸಿದರು. 
ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!
ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ: ಸುಮಲತಾ
ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ ಕರೆದೇ ಇಲ್ಲ ಕುಮಾರಸ್ವಾಮಿ ಒಂದು ಕರೆ ಸಹ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ.

ಬಿರುಸು ತಗ್ಗಿಸಿಕೊಂಡ ಮತದಾನ, ಶೇ.38ರಷ್ಟು ಟರ್ನ್ ಔಟ್
ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಮತದಾನ ಸ್ವಲ್ಪ ಸ್ಲೋ ಆಗುತ್ತಿದ್ದು, ಕಳೆದ ಸಾರಿಗೆ ಹೋಲಿಸಿದಲ್ಲಿ ಮತದಾರರು ತಮ್ಮ ನಿರಾಸಕ್ತಿ ತೋರಿಸುತ್ತಿರುವಂತೆ ಕಾಣಿಸುತ್ತಿದೆ. ಮೊದ ಸ್ಥಾನದಲ್ಲಿಯೇ ಇರುವ ದಕ್ಷಿಣ ಕನ್ನಡದಲ್ಲಿ ಮತದಾನ ಜೋರಾಗುತ್ತಿದೆ. 
ಚಿತ್ರದುರ್ಗ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಕುಸಿದು ಸಾವು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆಂದು ತೆರಳಿದ್ದ ಚುನಾವಣಾ ಸಿಬ್ಬಂದಿ ಯಶೋಧಮ್ಮ ಎನ್ನುವವರು ಕಾರ್ಯ ನಿರ್ವಹಿಸುತ್ತಲೇ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಅಷ್ಟರೊಳಗೆ ಚುನಾವಣಾ ಸಿಬ್ಬಂದಿಯ ಜೀವ ಹೊರಟೇ ಹೋಗಿತ್ತು.
Indian General Elections 2024: ಮತ ಚಲಾಯಿಸಿದ ಕರ್ನಾಟಕದ ಅಭ್ಯರ್ಥಿಗಳು
ಕರ್ನಾಟಕದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್

ಎರಡೂ ಕೈ ಇಲ್ಲದ ರಾಷ್ಟ್ರೀಯ ಈಜು ಪಟು ವಿಶ್ವಾಸ ಕಾಲಿನಿಂದ ಮತದಾನ
ತಮ್ಮ ಕಾಲಿನಿಂದಲೇ ತಮ್ಮ ಸಾಮರ್ಥ್ಯ ಏನು ತೋರಿಸಿದ ವಿಶ್ವಾಸ್ ಅವರು ಕಾಲಲ್ಲೇ ಮತದಾನ ಮಾಡಿದ್ದಾರೆ.

Chikkaballapura Lok sabha Elections 2024 Live Updates: ಡಿ.ಸುಧಾಕರ್, ರಕ್ಷಾ ರಾಮಯ್ಯ ನಡುವೆ ಫೈಟ್
ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮಂತ್ರಿ ಡಿ.ಸುಧಾಕರ್ ಹಾಗೂ ಕಾಂಗ್ರೆಸ್ ಯುವ ನೇತರ ರಕ್ಷಾ ರಾಮಯ್ಯ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಕ್ಷೇತ್ರದ ಮತದಾನ ವಿವರ ಇಲ್ಲಿದೆ.

Tumakuru Lok Sabha Election s2024 Live: ಸೋಮಣ್ಣ ಮುದ್ದಹನುಮೇಗೌಡ ಹೋರಾಟ
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ನಿಂದ ಎಸ್ಪಿ ಮುದ್ದಹನುಮೇಗೌಡ ತಮ್ಮ ಅದೃಷ್ಟ ಪರೀಕ್ಷಿಸಿ ಕಣಕ್ಕಳಿದಿದ್ದು, ಜಿಲ್ಲೆಯಲ್ಲೆಡೆ ಬಿರುಸಿನಿಂದ ಮತದಾನವಾಗುತ್ತಿದೆ.

Dakshina Kannada Lok Sabha Elections 2024 Live: ಓದಿನಲ್ಲಿ ಮಾತ್ರವಲ್ಲ, ಮತದಾನಕ್ಕೂ ಸೈ
11 ಗಂಟೆ ಹೊತ್ತಿಗೆ ರಾಜ್ಯದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಶೇ.31ರಷ್ಟು ಮತದಾನವಾಗಿದ್ದು, ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಲೋಕ ಸಭಾ ಕ್ಷೇತ್ರದ ಅಪ್ಡೇಟ್ಸ್ಗೆ ಕೆಳಗೆ ಕ್ಲಿಕ್ಕಿಸಿ.

Bengaluru Rural Lok Sabha Elections 2024: ಡಾಕ್ಟರ್ Vs ಡಿಕೆಸು ರಾಜಕಾರಣ
ಬೆಂಗಳೂರು ಗ್ರಾಮಾಂತರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ವಿರುದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಿದೆ.
