Asianet Suvarna News Asianet Suvarna News

ಸೈಕ್ಲೋನ್‌ಗೆ ತಲೆ ತಗ್ಗಿಸುವ ಉಷ್ಟ್ರಪಕ್ಷಿ ಅಲ್ಲ ಬಿಜೆಪಿ: ಕೇಂದ್ರ ಸಚಿವ ಅಮಿತ್‌ ಶಾ

ಕರ್ನಾ​ಟಕ ವಿಧಾ​ನ​ಸಭೆ ಚುನಾ​ವ​ಣಾ ಕಣ ನಿರ್ಣಾಯಕ ಹಂತ ತಲು​ಪಿದೆ. ರಾಜ್ಯದಲ್ಲಿ ಬಿಜೆಪಿ ಆಡ​ಳಿತ ಉಳಿ​ಸಿ​ಕೊ​ಳ್ಳು​ವು​ದನ್ನು ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿ​ರುವ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕರ್ನಾ​ಟ​ಕದಲ್ಲೇ ಬೀಡು​ಬಿ​ಟ್ಟಿ​ದ್ದಾರೆ. 

Karnataka Election 2023 Union Minister Amit Shah Exclusive Inerview gvd
Author
First Published May 8, 2023, 9:57 AM IST

ಸಂದರ್ಶನ: ಭಾವನಾ ನಾಗಯ್ಯ

ಬೆಂಗಳೂರು (ಮೇ.08): ಕರ್ನಾ​ಟಕ ವಿಧಾ​ನ​ಸಭೆ ಚುನಾ​ವ​ಣಾ ಕಣ ನಿರ್ಣಾಯಕ ಹಂತ ತಲು​ಪಿದೆ. ರಾಜ್ಯದಲ್ಲಿ ಬಿಜೆಪಿ ಆಡ​ಳಿತ ಉಳಿ​ಸಿ​ಕೊ​ಳ್ಳು​ವು​ದನ್ನು ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿ​ರುವ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕರ್ನಾ​ಟ​ಕದಲ್ಲೇ ಬೀಡು​ಬಿ​ಟ್ಟಿ​ದ್ದಾರೆ. ಈ ನಡುವೆ ಇಲ್ಲಿನ ರಾಜ​ಕೀಯ ಸ್ಥಿತಿಗತಿ, ವಿರೋಧ ಪಕ್ಷ​ಗಳ ತಂತ್ರ​, ಬಿಜೆ​ಪಿಯ ಮುಂದಿನ ಸಿಎಂ ಸೇರಿ​ದಂತೆ ಹಲವು ವಿಚಾ​ರ​ಗಳ ಬಗ್ಗೆ ತಮ್ಮ ಅನಿ​ಸಿ​ಕೆ​ಗ​ಳನ್ನು ಅವರು ಸಂದ​ರ್ಶ​ನ​ದಲ್ಲಿ ಹಂಚಿ​ಕೊಂಡಿ​ದ್ದಾರೆ.

* ಚುನಾವಣೆ ಬಂದಾಗ ನಿಮಗೆ ಇಷ್ಟೊಂದು ಎನರ್ಜಿ ಎಲ್ಲಿಂದ ಬರುತ್ತದೆ?
ಚುನಾವಣೆ ಇದ್ದರೂ ಇಲ್ಲದೇ ಇದ್ದರೂ ನಾನು ಇದೇ ರೀತಿ ಕೆಲಸ ಮಾಡುತ್ತೇನೆ.

ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು

* ಮೈಸೂರು ಸೇರಿ ಪ್ರತಿ ಪ್ರಾಂತ್ಯದಲ್ಲೂ ಪ್ರಚಾರ ಮಾಡಿದ್ದೀರಿ. ಫಲಿ​ತಾಂಶ ಏನಾ​ಗ​ಬ​ಹು​ದು?
ಈ ಚುನಾವಣೆ ಬಳಿಕ ರಾಜಕೀಯ ವಿಶ್ಲೇಷಕರು ತಮ್ಮ ಮಾನದಂಡಗಳನ್ನು ಬದಲಿಸಿಕೊಳ್ಳಬೇಕು. ಈವರೆಗೆ ಜಾತಿ, ಪ್ರಭಾವಿ ವ್ಯಕ್ತಿ​ಗಳು, ಕ್ಷೇತ್ರ​ಗಳ ಮೇಲೆ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪರಿ​ವ​ರ್ತನೆ ಆಗು​ತ್ತಿದೆ. ಯಡಿ​ಯೂ​ರಪ್ಪ ಸಿಎಂ ಆದಾಗ ಮೊದಲ ಬಾರಿ ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರದ ಅನುಭವ ಜನ​ರಿಗೆ ಸಿಕ್ಕಿದೆ. ಈ ಮೊದಲು ಯಾರು ಸಿಎಂ ಆಗು​ತ್ತಾರೋ ಅವರ ಭಾಗ​ದಲ್ಲಿ ಮಾತ್ರ ಅಭಿ​ವೃ​ದ್ಧಿ​ಯಾ​ಗು​ತ್ತಿತ್ತು. ಆದರೆ ಈಗ ಕ್ಷೇತ್ರ, ಪ್ರಾಂತ್ಯಗಳ ಗಡಿ ಇಲ್ಲ. ಮೋದಿ ನೇತೃತ್ವದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಗರೀಬ್‌ ಕಲ್ಯಾಣ್‌ ಯೋಜನೆ ಜಾತಿ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಪಿಎಂ ಆವಾಸ್‌ ಯೋಜ​ನೆ​ಯಡಿ 4 ಲಕ್ಷ ಕುಟುಂಬಗಳಿಗೆ ಮನೆ ನಿರ್ಮಿಸಲಾಗಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿ 43 ಲಕ್ಷ ಕುಟುಂಬಕ್ಕೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 48 ಲಕ್ಷ ಕುಟುಂಬಕ್ಕೆ ಶೌಚಾಲಯ, ಗ್ಯಾಸ್‌ ಸೌಲಭ್ಯ ಲಭಿ​ಸಿದೆ. 4 ಕೋಟಿ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. 1.38 ಕೋಟಿ ಜನರಿಗೆ ಸ್ವಾಸ್ಥ್ಯ ವಿಮಾ ಯೋಜನೆ ಸಿಕ್ಕಿದೆ. ಈ ಹಿಂದೆ ಇವೆಲ್ಲಾ ಜಾತಿ ಮೇಲೆ ನೀಡಲಾಗುತ್ತಿತ್ತು. ಈಗ ಪ್ರಾಂತ್ಯ, ಜಾತಿಗೆ ಸೀಮಿತವಾಗಿರದೆ ಸಂಪೂರ್ಣ ಕರ್ನಾಟಕಕ್ಕೆ ಸೌಲಭ್ಯ ಸಿಗುತ್ತಿದೆ.

* ಗ್ಯಾಸ್‌ ಸಿಲಿಂಡರ್‌ ಬೆಲೆ ವಿಪ​ರೀತ ಜಾಸ್ತಿ​ಯಾ​ಗಿದೆ. ಹಿಂದೆ 400 ರು.ಗೆ ಸಿಗು​ತ್ತಿದ್ದ ಸಿಲಿಂಡರ್‌ ಬೆಲೆ ಈಗ 1200 ರು. ದಾಟಿದೆಯಲ್ಲ​ವೇ?
ಪ್ರಣಾಳಿಕೆಯಲ್ಲಿ 3 ಸಿಲಿಂಡರ್‌ ಉಚಿತವಾಗಿ ಕೊಡುವು​ದಾಗಿ ಹೇಳಿ​ದ್ದನ್ನು ಈಡೇ​ರಿ​ಸು​ತ್ತೇವೆ. ಇದ​ರಿಂದ ಶೇ.30ರಷ್ಟುಖರ್ಚು ಕಡಿಮೆ ಮಾಡಲಿದೆ. ಆದರೆ ಗ್ಯಾಸ್‌ಗೆ ಪೂರ​ಕ​ವಾಗಿ ಬಳ​ಸುವ ಕಟ್ಟಿಗೆ, ಸೀಮೆ​ಎಣ್ಣೆ ವೆಚ್ಚ ಗ್ಯಾಸ್‌​ಗಿಂತಲೂ ಹೆಚ್ಚಾ​ಗಿ​ರು​ತ್ತದೆ. ಜೊತೆಗೆ ಅಡುಗೆ ಮಾಡುವಾಗ ಹೊಗೆಯಿಂದ ಮಹಿಳೆಯ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತೆ. ಮನೆಯ ಇತರೆ ಸದಸ್ಯರ ಆರೋಗ್ಯವೂ ಹದಗೆಡುತ್ತದೆ. ಹೀಗಾಗಿ ಅವರು ಸರಿಯಾಗಿರುವು​ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

* ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ. 2018ರಲ್ಲಿ ಸಿಕ್ಕಷ್ಟುಸೀಟು​ಗಳೇ ಈ ಬಾರಿಯೂ ಸಿಗಲಿದೆಯೇ?
ಇಲ್ಲ. 2018ರಲ್ಲಿ ಗೆದ್ದಷ್ಟುಸೀಟಲ್ಲ. ಅದ​ಕ್ಕಿಂತ ಹೆಚ್ಚಿನ ಕ್ಷೇತ್ರ​ಗ​ಳಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿ​ದೆ.

* ಲಕ್ಷ್ಮಣ ಸವದಿ ಬಿಜೆಪಿ ತೊರೆ​ದಿ​ದ್ದಾರೆ. ಜಗ​ದೀಶ್‌ ಶೆಟ್ಟರ್‌ ಇದು ಗುಜ​ರಾತ್‌ ಅಲ್ಲ, ಕರ್ನಾ​ಟಕ ಎಂದಿ​ದ್ದಾ​ರ​ಲ್ಲವೇ ?
ಖಂಡಿತಾ ಇದು ಕರ್ನಾ​ಟ​ಕವೇ ಹೊರತು ಗುಜ​ರಾತ್‌ ಅಲ್ಲ. ಆದರೆ ನನಗೆ ಹುಬ್ಬಳ್ಳಿ, ಅ​ಲ್ಲಿ​ನ ಜನರು, ಕಾರ್ಯಕರ್ತರ ಸಂಘಟನೆ ಬಗ್ಗೆ ಗೊತ್ತು. 9 ವರ್ಷದಿಂದ ರಾಷ್ಟ್ರ ರಾಜಕಾರಣದಲ್ಲಿದ್ದೇನೆ. ಹುಬ್ಬಳ್ಳಿ ಜನತೆ ಯಾವತ್ತೂ ವ್ಯಕ್ತಿ ನೋಡಿ ಮತ ನೀಡಿಲ್ಲ. ಅವರು ಬಿಜೆಪಿಗೆ ಮತ ನೀಡಿದ್ದಾರೆ. ಶೆಟ್ಟರ್‌ ಸೋಲಿನ ಅಂತರ ಕಳೆದ ಬಾರಿ ಗೆದ್ದ ಅಂತ​ರ​ಕ್ಕಿಂತ ದುಪ್ಪ​ಟ್ಟಾ​ಗಿ​ರ​ಲಿದೆ. ಸವದಿ ಕಳೆದ ಬಾರಿ ಚುನಾ​ವ​ಣೆ​ಯಲ್ಲಿ ಸೋತಿ​ದ್ದರು. ಆದರೂ ಅವ​ರನ್ನು ವಿಧಾ​ನ​ಪ​ರಿ​ಷತ್‌ ಸದಸ್ಯ, ಉಪ​ಮು​ಖ್ಯ​ಮಂತ್ರಿ ಮಾಡಿ​ದ್ದೇ​ವೆ. ಅವ​ರಿ​ಬ್ಬ​ರಿಗೂ ಟಿಕೆಟ್‌ ನೀಡು​ವುದು ನಮಗೆ ಕಷ್ಟ​ವಿ​ರ​ಲಿಲ್ಲ. ಆದರೆ ಬಿಜೆಪಿ ತತ್ವ, ಸಿದ್ಧಾಂತದ ಮೇಲೆ ನಿಂತಿದೆ. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗಲ್ಲ ಎಂದು ಶೆಟ್ಟ​ರ್‌ ಮೊದಲೇ ಹೇಳಿ​ದ್ದರು. ಇದು ಅವರದ್ದೇ ನಿರ್ಧಾರವಾಗಿತ್ತು. ಒಬ್ಬ ಶಾಸಕನಾಗಿ ಯುವ ಕಾರ್ಯಕರ್ತನ ಭವಿಷ್ಯವನ್ನು ಯಾಕೆ ಬಲಿ ಕೊಡ​ಬೇಕು. 6 ಬಾರಿ ಶಾಸಕರಾಗಿ, ಮುಖ್ಯ​ಮಂತ್ರಿಯೂ ಆಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡಿದವ​ರು. ಶೆಟ್ಟರ್‌ರ ಮತ್ತೆ ಶಾಸಕರಾಗುವ ಕನಸು ಒಬ್ಬ ಕಾರ್ಯಕರ್ತನ ಭವಿಷ್ಯಕ್ಕೆ ಅಡ್ಡಲಾಗಿತ್ತು. ಹೀಗಾಗಿ ಬಿಜೆಪಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಯ್ತು.

* ಈ ಬಾರಿ 75 ಹೊಸ​ಮು​ಖ​ಗ​ಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಇದು ಯುವಕರ ಮೇಲೆ ಯಾವ ರೀತಿ ಪರಿ​ಣಾಮ ಬೀರ​ಬ​ಹು​ದು?
ನಾವು ಪ್ರತಿ ಬಾರಿಯೂ ಇದನ್ನು ಮಾಡುತ್ತಿದ್ದೇವೆ. ಕಳೆದ 6 ಬಾರಿಯ ಬಿಜೆಪಿ ಅಭ್ಯ​ರ್ಥಿ​ಗಳ ಪಟ್ಟಿಗಮ​ನಿಸಿ. ಬಹುತೇಕ ನಾವು ಶೇ.66ರಿಂದ ಶೇ.85ರಷ್ಟುಬದಲಾವಣೆ ಮಾಡುತ್ತೇವೆ. ನಮಗಿದು ಹೊಸ​ತ​ಲ್ಲ.

* ಚುನಾ​ವ​ಣೆಯ ಕೊನೆ ಹಂತ​ದಲ್ಲಿ 2 ವಿವಾ​ದ​ಗಳು ಸೃಷ್ಟಿ​ಯಾ​ಗಿವೆ. ಈ ಪೈಕಿ ಒಂದು ಕಾಂಗ್ರೆಸ್‌ನ ಬಜ​ರಂಗ​ದಳ ನಿಷೇಧ ಭರವಸೆ. ಇದ​ಕ್ಕೇ​ನು ಹೇಳುತ್ತೀರಿ?
ಕಾಂಗ್ರೆಸ್‌ ಅಧಿಕಾರಕ್ಕೇ ಬರ​ಲ್ಲ. ಹೀಗಾಗಿ ಬಜರಂಗದಳ ನಿಷೇಧದ ಅವಕಾಶವೂ ಸಿಗಲ್ಲ. ಆದರೆ ಈ ಭರ​ವ​ಸೆ​ಯನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್‌ ತುಷ್ಟೀಕರಣದ ಆಧಾರದಲ್ಲಿ ರಾಜಕಾರಣವನ್ನು ಹದಗೆಡಿಸುವುದು ಸರಿಯಲ್ಲ. ಅವರು ಪಿಎಫ್‌ಐ ನಿಷೇ​ಧಕ್ಕೆ ಉತ್ತ​ರ​ವಾಗಿ ಅಲ್ಪಸಂಖ್ಯಾತರ ಮನವೊಲಿಸಲು ಮುಂದಾಗಿದ್ದಾರೆ.

* ‘ಕಾಶ್ಮೀರ್‌ ಫೈಲ್ಸ್‌’ ಬಳಿಕ ಇದೀಗ ‘ದಿ ಕೇರಳ ಸ್ಟೋರಿ’ ಸಿನಿ​ಮಾ​ವನ್ನು ವಿರೋಧಿಸುತ್ತಿದ್ದಾರೆ. ನಿಮ್ಮ ಅಭಿ​ಪ್ರಾ​ಯ​ವೇನು?
ಇದು ಕಾಂಗ್ರೆಸ್‌ನ ದ್ವಿಮುಖ ನೀತಿ. ದೇಶದ ವಾಸ್ತವಿಕತೆ ಬಗ್ಗೆ ಕಣ್ಮುಚ್ಚಿ ಕೂರಲು ಆಗಲ್ಲ. ಇದರಿಂದ ಆಗುವ ಕೆಟ್ಟಪರಿಣಾಮಗಳಿಂದ ಸಮಾಜವನ್ನು ರಕ್ಷಿಸಬೇಕಿದೆ. ಸುಂಟರಗಾಳಿ ಬಂದಾಗ ತನ್ನ ತಲೆಯನ್ನು ಭೂಮಿ ಒಳಗಡೆ ಹಾಕಿ ಕಂಟಕ ಹೋಯ್ತು ಎಂದು ನಂಬುವ ಉಷ್ಟ್ರ​ಪಕ್ಷಿ ರೀತಿ​ಯಲ್ಲ ಬಿಜೆ​ಪಿ.

* ಬಿಜೆ​ಪಿ​ಯಲ್ಲಿ ಸಿಎಂ ಆಗ​ಬೇ​ಕಿ​ದ್ದರೆ .2500 ಕೋಟಿ, ಮಂತ್ರಿ ಮಾಡಲು .500 ಕೋಟಿ ಕೊಡಬೇಕು ಎಂದು ಕಾಂಗ್ರೆಸ್‌ ಆರೋ​ಪಿ​ಸಿ​ದೆ. ನಿಜವೇ?
ಈ ಬಗ್ಗೆ ಬಸನಗೌಡ ಯತ್ನಾಳ್‌ ಕ್ಷಮೆ ಕೇಳಿದ್ದಾರೆ. ಇದನ್ನೇ ಜಾಹೀ​ರಾ​ತಿ​ನಲ್ಲಿ ನೀಡಿ ಕಾಂಗ್ರೆಸ್‌ ಜನ​ರನ್ನು ವಂಚಿ​ಸು​ತ್ತಿದೆ. ಅವರು ಕನ್ನಡಿಗರನ್ನು ಅರ್ಥಮಾಡಿಕೊಂಡಿಲ್ಲ.

* ಪ್ರಧಾನಿ ಮೋದಿ ಉಚಿತ ಭಾಗ್ಯಗಳನ್ನು ವಿರೋಧಿಸುತ್ತಾರೆ. ಆದರೆ ಅವರೇ ಸಿಲಿಂಡರ್‌, ಸಿರಿ​ಧಾನ್ಯ ಸೇರಿ​ದಂತೆ ಅನೇಕ ಉಚಿತ ಭಾಗ್ಯಗಳನ್ನು ನೀಡಿದ್ದಾರ​ಲ್ಲವೇ?
ರಷ್ಯಾ-ಉಕ್ರೇನ್‌ ಯುದ್ಧ ಹಾಗೂ ಕೊರೋ​ನದಿಂದಾಗಿ ಅನೇಕ ತೊಂದರೆ ಎದುರಾಗಿದೆ. ಇದೇ ಕಾರಣ ಗ್ಯಾಸ್‌ ಸಿಲಿಂಡರ್‌ ಬೆಲೆ ಹೆಚ್ಚಾಗಿದೆ. ಹೀಗಾಗಿ ಜನ​ರಿಗೆ ಸಹಾಯ ಮಾಡು​ತ್ತಿ​ದ್ದೇವೆ. ಇದು ತಾತ್ಕಾಲಿಕ ಸೌಲಭ್ಯ, ಉಚಿತ ಭಾಗ್ಯವಲ್ಲ. ನಾವು ಜೀವನಮಟ್ಟವನ್ನು ಸುಧಾರಿಸಿದ್ದೇವೆ. ಬ್ಯಾಂಕ್‌ ಅಕೌಂಟ್‌ಗೆ ಹಣ ಹಾಕಿಲ್ಲ.

* ಮೀಸಲಾತಿ ನಿಷೇ​ಧದ ಬಗ್ಗೆ ನಿಮ್ಮ ನಿಲುವೇನು?
ಧರ್ಮದ ಆಧಾರದ ಮೇಲೆ ನೀಡುತ್ತಿದ್ದ ಮೀಸಲಾತಿಯನ್ನು ನಾವು ಮೊದಲೇ ರದ್ದು ಮಾಡಬೇಕಿತ್ತು. ನಮ್ಮಿಂದ ತಡವಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಪ್ರಧಾನಿ ಮೋದಿ ಮುಖದಲ್ಲಿ 2018ರ ಉತ್ಸಾಹ ಇಲ್ಲ: ಜೈರಾಂ ರಮೇಶ್‌

* 2008 ಹಾಗೂ 2018ರಲ್ಲಿ ಚುನಾ​ವ​ಣೆಗೆ ಬೇರೆ ಬೇರೆ ವಿಚಾರಗಳಿದ್ದವು. ಆದರೂ ಬಿಜೆಪಿಗೆ ಬಹುಮತ ಬಂದಿಲ್ಲ. ಈ ಬಾರಿ ಬಹುಮತದ ವಿಶ್ವಾ​ಸ​ವಿ​ದೆಯೇ?
ಖಂಡಿತಾ ಇದೆ. ಕರ್ನಾಟದಲ್ಲಿ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಬಹುಮತಕ್ಕಿಂತ 15 ಸೀಟುಗಳು ಹೆಚ್ಚು ಬರಲಿವೆ.

* ಬಿಜೆಪಿ ಸರ್ಕಾರ ಬಂದರೆ ಮುಖ್ಯ​ಮಂತ್ರಿ ಯಾರಾ​ಗು​ತ್ತಾ​ರೆ?
ಈಗ ಬೊಮ್ಮಾಯಿ ಇದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಈ ಬಗ್ಗೆ ನಿರ್ಧಾರ ಕೈಗೊ​ಳ್ಳ​ಲಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios