Asianet Suvarna News Asianet Suvarna News

ಸಿದ್ರಾಮಣ್ಣ ಸಿಎಂ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದ ಜೆಡಿಎಸ್ MLA

* ಸನದಲ್ಲಿ ಸಿದ್ದರಾಮಯ್ಯನವರನ್ನು ಶ್ಲಾಘಿಸಿದ ಜೆಡಿಎಸ್ ಶಾಸಕ
* ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದ ಶಿವಲಿಂಗೇಗೌಡ
* ಸಿದ್ದರಾಮಯ್ಯ ಸಿಎಂ ಆಗಿದ್ದಾಗ 300 ಕೋಟಿ ರೂ ಕೊಟ್ಟಿದ್ರು

JDS MLA Shivalinge gowda praises Congress Leader Siddaramaiah rbj
Author
Bengaluru, First Published Sep 21, 2021, 10:25 PM IST

ಬೆಂಗಳೂರು, (ಸೆ.21): ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಇಂದು (ಸೆ.21) ವಿಧಾನಮಂಡಲ ಅಧಿವೇಶನದಲ್ಲಿ ಅನುದಾನ ವಿಚಾರಕ್ಕೆ ಜೆಡಿಎಸ್​ ಶಾಸಕರೇ ಕಿತ್ತಾಡಿಕೊಂಡ ಘಟನೆ ನಡೆಯಿತು. ಸಿಎಂ ವಿವೇಚನಾ ಕೋಟದ ಅನುದಾನದ ಬಗ್ಗೆ ಮಾಜಿ ಸಚಿವ ಎಚ್​​.ಡಿ ರೇವಣ್ಣ ಪ್ರಸ್ತಾಪಿಸಿದ್ದರು. ರೇವಣ್ಣ ಪ್ರಸ್ತಾಪದ ವೇಳೆ ಮಧ್ಯಪ್ರವೇಶಿಸಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಯಾವಾಗ ನೋಡಿದ್ರು ನನಗೆ ನೀಡಿದ ಅನುದಾನದ ಬಗ್ಗೆಯೇ ಮಾತಾಡ್ತಾರೆ. ಹೀಗಾಗಿ ರೇವಣ್ಣಗೂ 10 ಕೋಟಿ ಅನುದಾನ ಕೊಟ್ಟುಬಿಡಿ ಎಂದು ಅಸಮಾಧಾನ ಎಂದರು.

ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರ: ಸಿದ್ದರಾಮಯ್ಯ ಮನದ ಮಾತು

ಇನ್ನು, ಶಿವಲಿಂಗೇಗೌಡರ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್​ ಶಾಸಕ ವೆಂಕಟರಾವ್ ನಾಡಗೌಡ, ಅದೇ ನಾವು ಹೇಳ್ತಿರೋದು. ನಿಮಗೆ ನೀಡಿದ್ದ ಅನುದಾನ ನಮಗೂ ಕೊಡಲಿ ಎಂದು. ಯಾಕೆ ಈಗ ನಾವು ಕೇಳಬಾರದೇ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಹೌದ್ರೀ, ನಮಗೆ ಅನುದಾನ ಕೊಟ್ಟಿದ್ದಾರೆ. ನಾನು ನೇರವಾಗಿಯೇ ಹೇಳುತ್ತಿದ್ದೇನೆ, ಆಡಳಿತ ಪಕ್ಷಕ್ಕೆ ಕೈ ಮುಗಿಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 300 ಕೋಟಿ ರೂ ಕೊಟ್ಟಿದ್ರು, ಹಾಗಾಗಿಯೇ ನಾನು ಶಾಸಕನಾದೆ. ಬಿ.ಎಸ್​ ಯಡಿಯೂರಪ್ಪ ಕೂಡ ಹೋದಾಗ  ಕೊಡ್ತಿದ್ರು ಎಂದು ಶ್ಲಾಘಿಸಿದರು.

Follow Us:
Download App:
  • android
  • ios