Asianet Suvarna News Asianet Suvarna News

ರಾಯಚೂರು: ಮೊದಲ ಪಟ್ಟಿ​ಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌

ಕಾಂಗ್ರೆಸ್‌ ಪಕ್ಷ ಬಿಡು​ಗಡೆ ಮಾಡಿ​ರುವ ಮೊದಲ ಪಟ್ಟಿ​ಯಲ್ಲಿ ಜಿಲ್ಲೆ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌ ಖಚಿ​ತ​ಗೊಂಡಿದ್ದು, ಮತ್ತೊಬ್ಬ ಹಾಲಿ ಶಾಸ​ಕ​ರನ್ನು ಪಟ್ಟಿ​ಯಲ್ಲಿ ಪರಿ​ಗ​ಣಿ​ಸದೇ ಇರು​ವುದು ಅವರ ಕಾರ್ಯ​ಕ​ರ್ತ​ರು, ​ಬೆಂಬ​ಲಿ​ಗ​ರಲ್ಲಿ ಅಸ​ಮಾ​ಧಾ​ನ​ವ​ನ್ನುಂಟು ಮಾಡಿದೆ.

In the first list tickets for two sitting MLAs of the district at raichur rav
Author
First Published Mar 26, 2023, 9:57 AM IST

ರಾಮ​ಕೃಷ್ಣ ದಾಸರಿ

 ರಾಯ​ಚೂರು ಮಾ.26) : ಕಾಂಗ್ರೆಸ್‌ ಪಕ್ಷ ಬಿಡು​ಗಡೆ ಮಾಡಿ​ರುವ ಮೊದಲ ಪಟ್ಟಿ​ಯಲ್ಲಿ ಜಿಲ್ಲೆ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌ ಖಚಿ​ತ​ಗೊಂಡಿದ್ದು, ಮತ್ತೊಬ್ಬ ಹಾಲಿ ಶಾಸ​ಕ​ರನ್ನು ಪಟ್ಟಿ​ಯಲ್ಲಿ ಪರಿ​ಗ​ಣಿ​ಸದೇ ಇರು​ವುದು ಅವರ ಕಾರ್ಯ​ಕ​ರ್ತ​ರು, ​ಬೆಂಬ​ಲಿ​ಗ​ರಲ್ಲಿ ಅಸ​ಮಾ​ಧಾ​ನ​ವ​ನ್ನುಂಟು ಮಾಡಿದೆ.

ಜಿಲ್ಲೆ ಏಳು ವಿಧಾ​ನ​ಸಭಾ ಕ್ಷೇತ್ರ​(Raichur assembly constitueny)ಗ​ಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಶಾಸ​ಕ​(Congress MLAs)ರಿ​ದ್ದಾರೆ. ಅವ​ರಲ್ಲಿ ರಾಯ​ಚೂರು ಗ್ರಾಮೀಣ ಶಾಸಕ ಬಸ​ನಗೌಡ ದದ್ದಲ್‌(Basanagowda daddal), ಮಸ್ಕಿ ಶಾಸಕ ಆರ್‌.​ ಬ​ಸ​ನ​ಗೌಡ ತುರ್ವಿ​ಹಾಳ(R Basanagowda turvihal) ಅವ​ರಿಗೆ ಪಕ್ಷ ಟಿಕೆಟ್‌ ಘೋಷಿ​ಸಿದ್ದು, ಲಿಂಗ​ಸು​ಗೂರು ಶಾಸಕ ಡಿ.ಎ​ಸ್‌. ​ಹು​ಲ​ಗೇರಿ(DS huageri) ಅವರ ಹೆಸ​ರನ್ನು ಕೈಬಿ​ಟ್ಟಿ​ರು​ವುದು ಹಲ​ವಾರು ಚರ್ಚೆ​ಗ​ಳಿಗೆ ಎಡೆ​ಮಾ​ಡಿ​ಕೊ​ಟ್ಟಿದೆ.

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ನಡೆ​ಯದ ಷಡ್ಯಂತ್ರ:

ರಾಯ​ಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸ​ನಗೌಡ ದದ್ದಲ್‌ ಅವ​ರಿಗೆ ಟಿಕೆಟ್‌ ತಪ್ಪಿ​ಸಲು ಖುದ್ದು ಕಾಂಗ್ರೆ​ಸ್‌ನ ನಾಯ​ಕರ ಸಾಕಷ್ಟುಪ್ರಯ​ತ್ನಿ​ಸಿ​ದರು ಸಹ ಅವರ ಷಡ್ಯಂತ್ರವು ಫಲಿ​ಸ​ಲಿಲ್ಲ. ಬಸ​ನ​ಗೌಡ ದದ್ದಲ್‌ ಸ್ಥಳೀ​ಯ​ರಲ್ಲ, ಬಿಜೆಪಿ ಕದ​ತಟ್ಟಿಬಂದಿ​ದ್ದಾರೆ ಎಂದು ಕೈ ಮುಖಂಡರೇ ಆರೋ​ಪಿಸಿದ್ದರು. ಅಷ್ಟೇ ಅಲ್ಲದೆ ಕ್ಷೇತ್ರ​ದಲ್ಲಿ ಹಾಲಿ ಶಾಸ​ಕ​ರಿ​ದ್ದರು ಸಹ ತಾವು ಸೇವಾ​ಕಾಂಕ್ಷಿ ಎಂದು ಕ್ಷೇತ್ರ​ದಾ​ದ್ಯಂತ ಪ್ರಚಾರ ಕೈಗೊಂಡಿದ್ದ ಕೆ. ಚಂದ್ರ​ಶೇ​ಖರ ನಾಯಕ ಇಡ​ಪ​ನೂರು ಅವ​ರ ಇಂಗಿ​ತ​ವನ್ನು ತಳ್ಳಿ ಹಾಕಿ​ರುವ ಪಕ್ಷ ಕೊನೆಗೆ ಹಾಲಿ ಶಾಸಕ ದದ್ದಲ್‌ ಅವರಿಗೆ ಟಿಕೆಟ್‌ ಘೋಷಿ​ಸಿದೆ.

ಆಯ್ಕೆ ಸವಾ​ಲು:

ಮೊದಲ ಪಟ್ಟಿ​ಯಲ್ಲಿ ಇಬ್ಬ​ರು ಹಾಲಿ ಶಾಸ​ಕ​ರಿಗೆ ಟಿಕೆಟ್‌ ನೀಡಿ​ರುವ ಕಾಂಗ್ರೆಸ್‌ ಪಕ್ಷಕ್ಕೆ ಉಳಿದ ಕ್ಷೇತ್ರ​ಗ​ಳಿಗೆ ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡುವ ಸವಾಲು ಸವಾ​ಲಾ​ಗಿಯೇ ಉಳಿ​ದಿದೆ. ರಾಯ​ಚೂರು ನಗ​ರ​ ಕ್ಷೇತ್ರದಲ್ಲಿ 17 ಜನ ಅಭ್ಯ​ರ್ಥಿ​ಗಳು ಅರ್ಜಿ ಸಲ್ಲಿ​ಸಿ​ದ್ದಾರೆ. ಮಾನ್ವಿ, ​ಲಿಂಗ​ಸು​ಗೂ​ರಿ​ನಲ್ಲಿ ತಲಾ 4 ಜನರು ಟಿಕೆ​ಟ್‌​ಗಾಗಿ ಪೈಪೋಟಿ ನಡೆ​ಸಿ​ದ್ದಾರೆ. ಸಿಂಧ​ನೂ​ರಿ​ನಲ್ಲಿ ಹಂಪ​ನ​ಗೌಡ ಬಾದರ್ಲಿ, ಬಸ​ನ​ಗೌಡ ಬಾದರ್ಲಿ ಹಾಗೂ ಕೆ. ಕ​ರಿ​ಯಪ್ಪ ಅವರ ನಡುವೆ ಟಿಕೆಟ್‌ ಪೈಪೋಟಿ ಸಾಗಿದೆ. ಲಿಂಗ​ಸು​ಗೂ​ರಿ​ನಲ್ಲಿ ಹಾಲಿ ಶಾಸಕ ಡಿ.ಎ​ಸ್‌.​ ಹು​ಲ​ಗೇರಿ ಅವ​ರಿಗೆ ಟಿಕೆಟ್‌ ಅನು​ಮಾನ ಎನ್ನುವ ಕಾರ್ಮೋ​ಡವು ಕವಿ​ದಿದ್ದು, ಈ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉಳಿದ ಐದು ಕ್ಷೇತ್ರ​ಗ​ಳಿಗೆ ಅರ್ಹ ಅಭ್ಯ​ರ್ಥಿ​ಗಳ ಆಯ್ಕೆಯ ಸವಾ​ಲಾಗಿ ಮಾರ್ಪ​ಟ್ಟಿದೆ.

ರಾಯಚೂರಿನ ಸಿಂಧನೂರು ಕ್ಷೇತ್ರದಲ್ಲಿ ಅರ್ಥವಾಗದ ರಾಜಕಾರಣ, ಕೆಆರ್‌ಪಿಪಿ ಟಫ್ ಫೈಟ್!

ಕ್ಷೇತ್ರ​ದಲ್ಲಿ ನನ್ನ ವಿರುದ್ಧ ಅಪ​ಪ್ರ​ಚಾರ ನಡೆಸಿ, ಷಡ್ಯಂತ್ರ ರೂಪಿಸಿ ಟಿಕೆಟ್‌ ಕೈ ತಪ್ಪಿ​ಸಲು ಹಲ​ವಾರು ಪ್ರಯ​ತ್ನ​ಗ​ಳನ್ನು ನಡೆ​ಸಿ​ದರು ಸಹ ಕಾಂಗ್ರೆಸ್‌ ಹೈಕ​ಮಾಂಡ್‌ ಯಾವು​ದಕ್ಕೂ ಸೊಪ್ಪು ಹಾಕ​ದೇ ನನ್ನ ಕೆಲಸ, ಸಂಘ​ಟ​ನೆ​ಯನ್ನು ಗುರು​ತಿಸಿ ಟಿಕೆಟ್‌ ಘೋಷಿ​ಸಿ​ದೆ. ಅದೇ ವಿಶ್ವಾ​ಸ​ದೊಂದಿಗೆ ಚುನಾ​ವ​ಣೆ​ಯನ್ನು ಎದು​ರಿ​ಸ​ಲಾ​ಗು​ವು​ದು

-ಬಸ​ನ​ಗೌಡ ದದ್ದಲ್‌, ಗ್ರಾಮೀಣ ಶಾಸ​ಕರು ರಾ​ಯ​ಚೂರು

ಸೇವಾ​ಕಾಂಕ್ಷಿ​ಯಾಗಿ ಕ್ಷೇತ್ರ​ದಲ್ಲಿ ಸಂಘ​ಟನೆ ನಡೆಸಿ, ಟಿಕೆ​ಟ್‌ಗೆ ಅರ್ಜಿ ಸಲ್ಲಿ​ಸಿದ್ದೆ, ಆದರೆ ಪಕ್ಷ ಹಾಲಿ ಶಾಸ​ಕ​ರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇಷ್ಟ​ರ​ಲ್ಲಿಯೇ ಕಾರ್ಯ​ಕ​ರ್ತರು, ಬೆಂಬ​ಲಿ​ಗ​ರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾ​ರ​ವನ್ನು ಕೈಗೊ​ಳ್ಳ​ಲಾ​ಗು​ವುದು

-ಕೆ. ಚಂದ್ರ​ಶೇ​ಖರ ನಾಯಕ ಇಡ​ಪ​ನೂರು, ಕಾಂಗ್ರೆಸ್‌ ಮುಖಂಡ

Follow Us:
Download App:
  • android
  • ios