ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕರ್ನಾಟಕದ ಮನಸ್ಥಿತಿಯನ್ನು ಕಾಣಬಹುದಾಗಿದೆ. ಕಾಂಗ್ರೆಸ್‌ನ ಕಳಪೆ ಆಡಳಿತದಿಂದ ಜನರು ಈಗಾಗಲೇ ಹತಾಶರಾಗಿದ್ದಾರೆ: ಪ್ರಧಾನಿ ನರೇಂದ್ರ ಮೋದಿ 

ನವದೆಹಲಿ(ಮಾ.19): ಸೋಮವಾರ ಕರ್ನಾಟಕದ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಇಲ್ಲಿ ನಾನು ಕರ್ನಾಟಕದ ಮನಸ್ಥಿತಿಯನ್ನು ಕಂಡೆ’ ಎಂದು ಹೇಳಿದ್ದಾರೆ ಹಾಗೂ ಸಮಾವೇಶದ ಫೋಟೋಗಳನ್ನು ಟ್ವೀಟ್‌ ಮಾಡಿದ್ದಾರೆ

Add Asianetnews Kannada as a Preferred SourcegooglePreferred

‘ಭವ್ಯವಾದ ಶಿವಮೊಗ್ಗ! ಸಾರ್ವಜನಿಕ ಸಭೆಗೆ ತೆರಳುವಾಗ ನನ್ನನ್ನು ಆಶೀರ್ವದಿಸಲು ಆಗಮಿಸಿದ ಅಪಾರ ಸಂಖ್ಯೆಯ ಯುವಜನರು ಮತ್ತು ಮಹಿಳೆಯರಿಗೆ ಕೃತಜ್ಞತೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. 

Lok Sabha Election 2024: ಈ ಚುನಾವಣೆ ಶಕ್ತಿ ಸಂಹಾರಕ, ಆರಾಧಕರ ನಡುವಿನ ಯುದ್ಧ, ಮೋದಿ

ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕರ್ನಾಟಕದ ಮನಸ್ಥಿತಿಯನ್ನು ಕಾಣಬಹುದಾಗಿದೆ. ಕಾಂಗ್ರೆಸ್‌ನ ಕಳಪೆ ಆಡಳಿತದಿಂದ ಜನರು ಈಗಾಗಲೇ ಹತಾಶರಾಗಿದ್ದಾರೆ’ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.