Asianet Suvarna News Asianet Suvarna News

ಉಪ ಚುನಾವಣೆಗೆ ಡೇಟ್‌ ಫಿಕ್ಸ್?: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ಬೆಳಗಾವಿ ಲೋಕಸಭಾ, ಮಸ್ಕಿ, ಬಸವಕಲ್ಯಾಣ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ| ನಾಲ್ಕೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಕೂಡ ಇಂದೇ ಪ್ರಕಟವಾಗುವ ಸಾಧ್ಯತೆ| ಬಜೆಟ್ ಅಧಿವೇಶನ ಮೊಟಕು ಸಾಧ್ಯತೆ| ಟಿಕೆಟ್‌ ಆಕಾಂಕ್ಷಿಗಳ ವಲಯದಲ್ಲಿಯೂ ಹೆಚ್ಚಿದ ಕುತೂಹಲ| 

Election Commission to Likely Announce Karnataka Byelection Dates grg
Author
Bengaluru, First Published Feb 26, 2021, 12:53 PM IST

ಬೆಂಗಳೂರು(ಫೆ.26):  ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಚ ರಾಜ್ಯಗಳ ಚುನಾವಣಾ ದಿನಾಂಕ ಇಂದು(ಶುಕ್ರವಾರ) ಘೋಷಣೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ರಾಜ್ಯದಲ್ಲೂ ಕೂಡ ಬೆಳಗಾವಿ ಲೋಕಸಭಾ, ರಾಯಚೂರು ಜಿಲ್ಲೆಯ ಮಸ್ಕಿ, ಬೀದರ್‌ ಜಿಲ್ಲೆಯ ಬಸವಕಲ್ಯಾಣ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೂ ಕೂಡ ಉಪಚುನಾವಣೆ ನಡೆಯಲಿದೆ. ಈ ನಾಲ್ಕೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಕೂಡ ಇಂದೇ ಪ್ರಕಟವಾಗುವ ಸಾಧ್ಯತೆ ಇದೆ. 

ರಾಜ್ಯದ ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಇರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ತೀವ್ರ ಸಂಚಲನ ಮೂಡಿಸಿದೆ. ಟಿಕೆಟ್‌ ಆಕಾಂಕ್ಷಿಗಳ ವಲಯದಲ್ಲಿಯೂ ಕೂಡ ಕುತೂಹಲ ಹೆಚ್ಚಾಗಿದೆ. ಟಿಕೆಟ್ ಬಯಸಿರುವ ಆಕಾಂಕ್ಷಿಗಳು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ರಾಜ್ಯ ನಾಯಕರ ಮೂಲಕ ಲಾಭಿ ಶುರುವಾಗಿದೆ.

ಬಜೆಟ್ ಅಧಿವೇಶನ ಮೊಟಕು ಸಾಧ್ಯತೆ

ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆ ಇದೆ. ಮಾರ್ಚ್ ಅಂತ್ಯದವರೆಗೂ ಅಧಿವೇಶನ ನಿಗದಿಯಾಗಿದೆ. ಹೀಗಾಗಿ ಅಧಿವೇಶನ ಎರಡೇ ವಾರಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಬೆನ್ನಲ್ಲೇ ಅಧಿವೇಶನದ ಮೊಟಕಿನ ಬಗ್ಗೆ ಸಮಾಲೋಚನೆ ನಡೆಯಲಿದೆ. ಈ ಸಂಬಂಧ ಮಾ.4 ರಂದು ಸ್ಪಷ್ಟ ತಿರ್ಮಾನವಾಗುವ ಸಾಧ್ಯತೆ ಇದೆ. 

ಕೇರಳ, ಪ. ಬಂಗಾಳ ಸೇರಿ ಪಂಚ ರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ!

ನಾಲ್ಕೂ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ 

ಬೆಳಗಾವಿ

- ಶೆಟ್ಟರ್ ಸೊಸೆ ಶ್ರದ್ಧಾ
- ರಮೇಶ್ ಕತ್ತಿ
- ಭಾರತಿ ಮುಗ್ಧಂ
- ಪ್ರಮೋದ್ ಮುತಾಲಿಕ್
- ಪ್ರಭಾಕರ್ ಕೋರೆ
- ಮಹಾಂತೇಶ ಕವಟಗಿಮಠ

ಕಾಂಗ್ರೆಸ್ ಆಕಾಂಕ್ಷಿಗಳು: 

ಸತೀಶ್ ಜಾರಕಿಹೊಳಿ‌,
ಲಕ್ಷ್ಮೀ ಹೆಬ್ಬಾಳಕರ್.
ಚನ್ನರಾಜ್ ಹಟ್ಟಿಹೊಳಿ(ಲಕ್ಷ್ಮೀ ಹೆಬ್ಬಾಳಕರ್ ಸಹೋದರ)

ಮಸ್ಕಿ

- ಪ್ರತಾಪ್ ಗೌಡ ಪಾಟೀಲ್
ಕಾಂಗ್ರೆಸ್ ಆಕಾಂಕ್ಷಿ.
ಬಸವರಾಜ್ ತುರವಿಹಾಳ್

ಬಸವಕಲ್ಯಾಣ: 

- ಎಂ ಜಿ ಮೂಳ್ಹೆ
- ಶರಣು ಸಲಗಾರ್
- ಭಗವಂತ ಖೂಬಾ

ಕಾಂಗ್ರೆಸ್  ಆಕಾಂಕ್ಷಿಗಳು:

- ಮಲ್ಲಮ್ಮ ನಾರಾಯಣ ರಾವ್.
- ವಿಜಯ ಸಿಂಗ್..

ಸಿಂದಗಿ

- ಲಕ್ಷ್ಮಣ ಸವದಿ
- ರಮೇಶ್ ಭೂಸನೂರ

ಕಾಂಗ್ರೆಸ್ ಆಕಾಂಕ್ಷಿಗಳು: 

ರವಿಕಾಂತ ಪಾಟೀಲ್
ಅಶೋಕ್ ಮನಗೂಳಿ
 

Follow Us:
Download App:
  • android
  • ios