Asianet Suvarna News Asianet Suvarna News

ಡಿಕೆಶಿ, ಸಿದ್ದುಗೆ ಚೆಂಡುಹೂವು ಚೆಂದ ಕಾಣುತ್ತದೆ: ಸಿ.ಟಿ.ರವಿ

ಬಸವರಾಜ ಬೊಮ್ಮಾಯಿ ಸರ್ವವ್ಯಾಪಿ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಿಂದ ಕಾಂಗ್ರೆಸ್ಸಿನವರು ನಿಶಸ್ತ್ರಿಗಳಾಗಿ ಕಿವಿ ಮೇಲೆ ಚೆಂಡು ಹೂವು ಇಟ್ಟು​ಕೊ​ಳ್ಳುವ ಸ್ಥಿತಿಗೆ ಬಂದಿದ್ದಾರೆ. ಅವರು ಜನರಿಗೆ ಚೆಂಡು ಹೂವು ಮುಡಿಸಲು ಪ್ರಯತ್ನಿಸಿದ್ದರು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡದ ಕಾರಣ ಈಗ ಅವರೇ ಚೆಂಡು ಹೂವು ಇಟ್ಟುಕೊಂಡಿದ್ದಾರೆ ಎಂದ ಸಿ.ಟಿ.ರವಿ 

BJP National General Secretary CT Ravi Slams DK Shivakumar and Siddaramaiah grg
Author
First Published Feb 20, 2023, 6:38 AM IST | Last Updated Feb 20, 2023, 6:38 AM IST

ಕಾರವಾರ(ಫೆ.20): ಮುಂದಿನ ವಿಧಾನಸಭಾ ಚುನಾವಣೆ ಯುದ್ಧದಲ್ಲಿ ಹಲವು ಶಸ್ತ್ರ ಪ್ರಯೋಗ ಮಾಡಲು ಕಾಂಗ್ರೆಸಿಗರು ಸಿದ್ಧರಾಗಿದ್ದರು. ಆದರೆ ಎಲ್ಲ ಶಸ್ತ್ರಗಳನ್ನು ಬಿಜೆಪಿ ತನ್ನ ಬತ್ತಳಿಕೆಯೊಳಗೆ ಸೇರಿಸಿಕೊಂಡು ಬಿಟ್ಟಿವೆ. ಚುನಾವಣೆ ಬಳಿಕ ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿಶಸ್ತ್ರಿಗಳಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಲೇವಡಿ ಮಾಡಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿ, ಬಸವರಾಜ ಬೊಮ್ಮಾಯಿ ಸರ್ವವ್ಯಾಪಿ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಿಂದ ಕಾಂಗ್ರೆಸ್ಸಿನವರು ನಿಶಸ್ತ್ರಿಗಳಾಗಿ ಕಿವಿ ಮೇಲೆ ಚೆಂಡು ಹೂವು ಇಟ್ಟು​ಕೊ​ಳ್ಳುವ ಸ್ಥಿತಿಗೆ ಬಂದಿದ್ದಾರೆ. ಅವರು ಜನರಿಗೆ ಚೆಂಡು ಹೂವು ಮುಡಿಸಲು ಪ್ರಯತ್ನಿಸಿದ್ದರು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡದ ಕಾರಣ ಈಗ ಅವರೇ ಚೆಂಡು ಹೂವು ಇಟ್ಟುಕೊಂಡಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಜಿಗಿಜಿಗಿತ: ಪಕ್ಷಾಂತರ ಪರ್ವ ಜೋರು

ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಚೆಂಡು ಹೂವು ಚಂದ ಕಾಣುತ್ತದೆ. ಕಿವಿಗೆ ಹಾಗೆಯೇ ಇಟ್ಟುಕೊಂಡಿದ್ದರೆ ಇನ್ನಷ್ಟುಚಂದ ಕಾಣಿಸುತ್ತೀರಿ. ಜನರಿಗೆ ಚೆಂಡು ಹೂವು ಮುಡಿಸುತ್ತಿದ್ದ ಕಾಂಗ್ರೆಸ್ಸಿಗರು ಈಗ ಅವರೇ ಮುಡಿದುಕೊಳ್ಳುವಂಥ ವಾತಾವರಣ ಬಿಜೆಪಿ ಮಾಡಿದೆ ಎಂದರು.

Latest Videos
Follow Us:
Download App:
  • android
  • ios