Asianet Suvarna News Asianet Suvarna News

ಮಡಿಕೇರಿ ಚಲೋ ಹಿಂತೆಗೆದುಕೊಳ್ಳಿ: ಸಿದ್ದರಾಮಯ್ಯಗೆ ಮಾಜಿ ಕುಚುಕು ಮನವಿ, ಸಲಹೆ

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ಕೊಟ್ಟಿದೆ. ಆದ್ರೆ, ಇದನ್ನು ಇಲ್ಲಿಗೆ ಕೈಬಿಡಿ ಎಂದು ಸಿದ್ದರಾಮಯ್ಯನವರಿಗೆ ಅವರ ಮಾಜಿ ಗೆಳೆಯ ಮನವಿ ಮಾಡಿದ್ದಾರೆ.

BJP MLC H Vishwanath Requests To siddaramaiah  withdraw Madikeri Chalo On August 26th
Author
Bengaluru, First Published Aug 22, 2022, 7:08 PM IST

ಮೈಸೂರು, (ಆಗಸ್ಟ್.22): ಕೊಡಗು ಪ್ರವಾದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಇದೇ ಆಗಸ್ಟ್ 26ರಂದು ಮೊಟ್ಟೆ ದಾಳಿ ಖಂಡಿಸಿ ಕಾಂಗ್ರೆಸ್ ಮಡಿಕೇರಿ ಚಲೋ ಹಮ್ಮಿಕೊಂಡಿದೆ. ಇನ್ನು ಇದಕ್ಕೆ ಸಿದ್ದರಾಮಯ್ಯನವರಿಗೆ ಮಾಜಿ ಕುಚುಕು ಬಿಜೆಪಿ ನಾಯಕ ಎಚ್‌ ವಿಶ್ವನಾಥ್ ಅವರು ಒಂದು ಸಲಹೆ ಕೊಟ್ಟಿದ್ದಾರೆ.

'ಟಿಪ್ಪು ​ ಬಂದಾಗಲೇ ಕೊಡವರು ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ'

ಈ ಬಗ್ಗೆ ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿಶ್ವನಾಥ್, ನಾಡಿನ ಹಿತ, ರಾಜಕಾರಣದ ಗೌರವರದ ಪರವಾಗಿ ಮಡಿಕೇರಿ ಮುತ್ತಿಗೆ ಕಾರ್ಯಕ್ರಮ ಹಿಂದೆ ತಗೆದುಕೊಳ್ಳಿ.ಚುನಾವಣೆ ಹತ್ತಿರ ಬರುತ್ತಿದೆ, ಎನಾದರು ಅನಾಹುತ ಆದರೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದೆ ವಿಚಾರ ಬಹಳ ದೊಡ್ಡದಾಗಿದೆ.ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಕೊಡಗಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಜೋರಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ಮುತ್ಸದ್ದಿ,ರಾಜಕೀಯ ಏಳು ಬೀಳು ಕಂಡವರು. ಮೊಟ್ಟೆ ಎಸೆಯೋದು ಸರಿ ಅಂತಾ ನಾವ್ಯಾರೂ ಹೇಳುತ್ತಿಲ್ಲ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ,ಯಡಿಯೂರಪ್ಪ ಕೂಡ ಘಟನೆಯನ್ನು ಖಂಡಿಸಿದ್ದಾರೆ.ಇಷ್ಟಾದರೂ ಸಿದ್ದರಾಮಯ್ಯ ಕೊಡಗು ಚಲೋ ಮಾಡುತ್ತೇವೆ ಅಂತಾರೆ. ದಯಮಾಡಿ ಸಿದ್ದರಾಮಯ್ಯ ಅವರೇ ಮತ್ತೆ ಪರಿಶೀಲನೆ ಮಾಡಲಿ. ಇಂದಿರಾಗಾಂಧಿ ಮೇಲೆ ಸಾಕಷ್ಟು ಅಟ್ಯಾಕ್ ಆಗಿತ್ತು.ಮೂಗು ಒಡೆದಿತ್ತು, ಹಾಸನದಲ್ಲಿ ಸಭೆಯಲ್ಲಿದ್ದ ವೇಳೆ ಹಾವುಗಳನ್ನ ಬಿಟ್ಟಿದ್ದರು. ಚಿದಂಬರಂಗೆ ಪ್ರೆಸ್ ಕಾನ್ಫರೆನ್ಸ್ ಮಾಡುವಾಗ ಒಬ್ಬ ಶೂ ತೋರಿಸಿದ್ದ.ಇವೆಲ್ಲವೂ ಜನತಂತ್ರವ್ಯವಸ್ಥೆಯ ಜನಾಕ್ರೋಶದ ಉದಾಹರಣೆ.ರಾಜೀವ್ ಗಾಂಧಿ, ಇಂದಿರಾಗಾಂಧಿಯನ್ನೇ ಕೊಂದರು.ಮೊಟ್ಟೆ ಒಡೆದದ್ದು ಖಂಡನೀಯ ಎಂದು ಹೇಳಿದರು.

ಮೊಟ್ಟೆ ಗಲಾಟೆ: 26ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಬಿಜೆಪಿ ಕೌಂಟರ್

ಮೊಟ್ಟೆ ವಿಚಾರ ನ್ಯಾಶನಲ್ ವಿಚಾರ ಆಗಿದೆ. ಪ್ರವಾಹದಲ್ಲಿ ಜನ ಸಮಸ್ಯೆ ಸಿಲುಕಿದ್ದಾರೆ.ಮೊಟ್ಟೆ ಎಸೆದದ್ದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಮಡಿಕೇರಿ ಚಲೋ ಹೋಗೋದು ನಿಮ್ಮಂತ ನಾಯಕರಿಗೆ ಶೋಭಾಯಮಾನವಲ್ಲ.ರಾಜ್ಯದ ಸಮಸ್ಯೆಗಳನ್ನ ಪ್ರತಿಷ್ಠೆಯಾಗಿ ತಗೆದುಕೊಳ್ಳಿ.ಈ ಬಗ್ಗೆ ಸದನದಲ್ಲಿ ಮಾತನಾಡಿ. ಪುಂಡ ಪೋಕರಿ ಮೊಟ್ಟೆ ಎಸೆದದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ.ಕೂಡಲೇ ಮಡಿಕೇರಿ ಚಲೋ ಕೈಬಿಡಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳು ಯಡಿಯೂರಪ್ಪ, ಎಸ್. ಎಂ. ಕೃಷ್ಣ ಮಧ್ಯಸ್ಥಿಕೆ ವಹಿಸಿ ಎರಡು ಕಡೆಯವರನ್ನೂ ಕೂರಿಸಿ ಮಾತನಾಡಿ.ನಾಡಿನಲ್ಲಿ ಶಾಂತಿ ನೆಲೆಸಲು ನಾಡಿನ ಪರವಾಗಿ ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ. ದಂಡೆತ್ತಿ ಹೋಗಿ ಮಡಿಕೇರಿ ಚಲೋ ಮಾಡುವ ಬದಲು.ಕೊಡಗು ಅಭಿವೃದ್ಧಿ, ರಾಜಕೀಯ ಸ್ಥಾನಮಾನ ,ಇನ್ನೂ ಹಲವು ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಲಿ‌.ಎಡರೂ ಪಕ್ಷದ ನಾಯಕರು, ಜೆಡಿಎಸ್ ನಾಯಕರು, ನಾಡಿನ ಪ್ರಮುಖ ಪಕ್ಷಗಳ ನಾಯಕರು ಒಂದು ಕಡೆ ಕುಳಿತು ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

ಯಾರು ಯಾರಿಗೂ ದೊಡ್ಡವರಲ್ಲ. ಸಿದ್ದರಾಮಯ್ಯ ಹಿರಿಯರ ಮಾತನ್ನು ಕೇಳಬೇಕು.ಸಿದ್ದರಾಮಯ್ಯ ಸಹ ಒಪ್ಪಿಕೊಳ್ಳಬೇಕು. ಅಂದೇ ಬಿಜೆಪಿ ಜನೋತ್ಸವ ಮಾಡುತ್ತಿದ್ದು, ಸವಾಲಿಗೆ ಸವಾಲು ಸರಿಯಲ್ಲ. ಇದನ್ನು ಅನುಭವಿಸುವವರು ಯಾರು? ಕೊಡಗಿನ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕೊಡವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಕಾಂಗ್ರೆಸ್ ನವರು ಅದನ್ನು ಮಾಡಿಲ್ಲ.ಕೊಡಗಿನಲ್ಲಿ ಹಲವು ಸಮಸ್ಯೆಗಳಿವೆ. ಶಾಂತಿಯನ್ನು ಯಾರೂ ಕದಡಬಾರದು. ಕೊಡಗಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪ್ರತ್ಯೇಕ ಪಾರ್ಲಿಮೆಂಟ್ ವ್ಯವಸ್ಥೆ ಮಾಡಬೇಕು. ಮೊಟ್ಟೆ, ಕೋಳಿ ಮಾಂಸ, ದೇವರು ಆಮೇಲೆ ಮಾತನಾಡೋಣ ಎಂದು ಅಭಿಪ್ರಾಯ ತಿಳಿಸಿದರು.

Follow Us:
Download App:
  • android
  • ios