Asianet Suvarna News Asianet Suvarna News

ಬೆಳಗಾವಿಯ 18 ಕ್ಷೇತ್ರಗಳಲ್ಲಿ 6 ರಿಂದ 8 ಸ್ಥಾನ ಜೆಡಿಎಸ್‌ಗೆ: ಕುಮಾರಸ್ವಾಮಿ

ರೈತರಿಗೆ ಶಾಸ್ವತ ಪರಿಹಾರವನ್ನು ನೀಡುವ ಯೋಜನೆಗಳನ್ನು ಜೆಡಿಎಸ್‌ ಪಕ್ಷದಿಂದ ಜಾರಿಗೆ ತರಲಾಗುತ್ತಿದ್ದು, ಪಂಚರತ್ನ ಯೋಜನೆಯಲ್ಲಿ ಹಲವಾರು ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಭಾಗದಲ್ಲಿ ಅವಶ್ಯಕವಾಗಿರುವ ಶಿಕ್ಷಣ, ನೀರಾವರಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಕುಮಾರಸ್ವಾಮಿ 

6 to 8 Seats of 18 Constituencies of Belagavi for JDS Says HD Kumaraswamy grg
Author
First Published Apr 18, 2023, 8:09 PM IST | Last Updated Apr 18, 2023, 8:09 PM IST

ಸವದತ್ತಿ(ಏ.18):  ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ ಬೆಳಗಾವಿ ಜಿಲ್ಲೆಯಿಂದ ಸಾಕಷ್ಟುಪ್ರಮುಖ ಮುಖಂಡರು ಸೇರ್ಪಡೆಗೊಳ್ಳುತ್ತಿದ್ದು, ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ 6 ರಿಂದ 8 ಸ್ಥಾನಗಳನ್ನು ಜೆಡಿಎಸ್‌ ಪಕ್ಷ ಪಡೆದುಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೌರವ ಚೋಪ್ರಾರವರ ನೇತೃತ್ವದಲ್ಲಿ ಹಮ್ಮಿಕೊಂಡ ಜೆಡಿಎಸ್‌ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನವಲಗುಂದದ ಮಾಜಿ ಶಾಸಕ ಕೆ.ಎನ್‌.ಗಡ್ಡಿ ಕಾಂಗ್ರೆಸ್‌ ಪಕ್ಷದಿಂದ, ಯಮಕನಮರಡಿಯ ಮಾರುತಿ ಅಷ್ಟಗಿ ಬಿಜೆಪಿಯಿಂದ, ಪಂಚನಗೌಡ ದ್ಯಾಮನಗೌಡರ ಕಾಂಗ್ರೆಸ್‌ನಿಂದ ಹಾಗೂ ಅಥಣಿಯ ಶಶಿಕಾಂತ ಪಡಸಲಗಿಯವರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗುತ್ತಿದೆ. ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅ​ಧಿಕಾರಕ್ಕೆ ಬರುವುದು ಶತ ಸಿದ್ಧ ಎಂದರು.

ನನ್ನ, ಶೆಟ್ಟರ್‌ ಬಗ್ಗೆ ಮಾತಾಡುವ ನೈತಿಕತೆ ಬಿಎಸ್‌ವೈಗಿಲ್ಲ: ಲಕ್ಷ್ಮಣ ಸವದಿ

ಈ ಹಿಂದೆ ಆನಂದ ಚೋಪ್ರಾರವನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಾಕಷ್ಟುಸಲ ಪ್ರಮುಖರಿಗೆ ತಿಳಿಸಲಾಗಿತ್ತು. ಆದರೆ, ಇಂದು ಆ ಕಾಲ ಕೂಡಿ ಬಂದಿದ್ದು, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸೌರವ ಚೋಪ್ರಾರನ್ನು ಆಯ್ಕೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ. ಈ ಕ್ಷೇತ್ರದಿಂದ ಜೆಡಿಎಸ್‌ ಶಾಸಕನನ್ನು ಆಯ್ಕೆ ಮಾಡಿದ್ದಲ್ಲಿ ಈ ಬಾರಿ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವುದು ನಿಶ್ಚಿತ. ಸವದತ್ತಿಯನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಈ ಭಾಗದಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದರು.

ರೈತರಿಗೆ ಶಾಸ್ವತ ಪರಿಹಾರವನ್ನು ನೀಡುವ ಯೋಜನೆಗಳನ್ನು ಜೆಡಿಎಸ್‌ ಪಕ್ಷದಿಂದ ಜಾರಿಗೆ ತರಲಾಗುತ್ತಿದ್ದು, ಪಂಚರತ್ನ ಯೋಜನೆಯಲ್ಲಿ ಹಲವಾರು ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಭಾಗದಲ್ಲಿ ಅವಶ್ಯಕವಾಗಿರುವ ಶಿಕ್ಷಣ, ನೀರಾವರಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡು ನಿರ್ಧಾರದಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಸುವರ್ಣ ಸೌಧ ತಲೆ ಎತ್ತಿ ನಿಂತಿದ್ದು, ಅದನ್ನು ನಿಷ್ಕಿೃೕಯಗೊಳಿಸುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ರಾಜ್ಯದಲ್ಲಿನ 53 ಉಪನದಿಗಳ ನೀರನ್ನು ನಾಡಿನ ರೈತರಿಗೆ ಒದಗಿಸುವ ಕಾರ್ಯವನ್ನು ಮಾಡುವುದರ ಜೊತೆಗೆ ಜಲಧಾರೆ ಯೋಜನೆಯಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸೌರವ ಚೋಪ್ರಾ ಮಾತನಾಡಿ, ನಮ್ಮ ತಂದೆ ಆನಂದ ಚೋಪ್ರಾರವರ ಕಾಲದಿಂದಲೂ ಜನರ ಸೇವೆಯನ್ನು ನಿರಂತರವಾಗಿ ನಾವು ಮಾಡಿಕೊಂಡು ಬರಲಾಗುತ್ತಿದ್ದು, ಜನರ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ ಪಕ್ಷದಿಂದ ನಮಗೆ ಬಹಳ ಅನ್ಯಾಯವಾಗಿದ್ದು, ನಮ್ಮ ಎಲ್ಲ ಬೆಂಬಲಿಗರ ಅಭಿಪ್ರಾಯದಂತೆ ಜೆಡಿಎಸ್‌ ಪಕ್ಷಕ್ಕೆ ಸೇರಿ ಜನಸೇವೆಗೆ ಸಿದ್ದನಾಗಿದ್ದೇನೆ ಎಂದರು. ಬಡವರು ದೀನ ದಲಿತರ ಅಭಿವೃದ್ದಿಗೆ ಕಂಕಣಬದ್ದನಾಗಿ ನಿಂತಿದ್ದು, ನಮ್ಮ ತಂದೆಯ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ನನಗೂ ನೀಡಿ ಈ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಪಂಚನಗೌಡ ದ್ಯಾಮನಗೌಡರ, ಗಂಗಯ್ಯ ಅಮೋಘಿಮಠ ಮಾತನಾಡಿದರು. ಪ್ರತಾಪರಾವ್‌ ಪಾಟೀಲ, ಕೆ.ಕೆ.ಪುಣೇದ, ಅಲ್ಲಿಸಾಬ್‌ ನದಾಫ, ಗಂಗಯ್ಯ ಅಮೋಘಿಮಠ, ಅನೀಲ ಸುಣಗಾರ, ಉಮೇಶ ಗೌಡರ, ಅಮೀರ ಗೋರಿನಾಯ್ಕ, ಆಸೀಫ್‌ ಬಾಗೋಜಿಕೊಪ್ಪ ಹಾಗೂ ಜೆಡಿಎಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios