ಹಿಂದೂ ರಾಷ್ಟ್ರೀಯ ಮೋದಿ ಸರ್ಕಾರ ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸುತ್ತಿದೆ: ಝಾಕಿರ್ ನಾಯ್ಕ್
ಹಿಂದೂ ರಾಷ್ಟ್ರೀಯವಾದಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿದೆ. ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ ತಮ್ಮ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಾರದೆಂದು ಇಂಟರ್’ಪೋಲ್’ಗೆ ಇಸ್ಲಾಮಿಕ್ ಭೋಧಕ ಝಾಕಿರ್ ನಾಯ್ಕ್ ಕೇಳಿಕೊಂಡಿದ್ದಾರೆ.
ನವದೆಹಲಿ (ಆ.31): ಹಿಂದೂ ರಾಷ್ಟ್ರೀಯವಾದಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿದೆ. ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ ತಮ್ಮ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಾರದೆಂದು ಇಂಟರ್’ಪೋಲ್’ಗೆ ಇಸ್ಲಾಮಿಕ್ ಭೋಧಕ ಝಾಕಿರ್ ನಾಯ್ಕ್ ಕೇಳಿಕೊಂಡಿದ್ದಾರೆ.
ಝಾಕಿರ್ ನಾಯ್ಕ್ ಪರ ವಕೀಲ ಫ್ರಾನ್ಸ್’ನಲ್ಲಿರುವ ಇಂಟರ್’ಪೋಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ರೆಡ್ ಕಾರ್ನರ್ ನೋಟಿಸನ್ನು ರದ್ದುಗೊಳಿಸುವಂತೆ ಕೋರಿಕೊಂಡಿದ್ದಾರೆ. ಹಿಂದೂ ರಾಷ್ಟ್ರೀಯ ಸರ್ಕಾರ ಮುಸಲ್ಮಾನರನ್ನು ಗುರಿಯಾಗಿಸುತ್ತಿದೆ. ಹಾಗಾಗಿ ನನ್ನ ಮೇಲೆ ರೆಡ್ ಕಾರ್ನಲ್ ನೋಟಿಸ್ ಹೊರಡಿಸಿದೆ. ಇದನ್ನು ರದ್ದುಗೊಳಿಸಿ ಎಂದು ಝಾಕಿರ್ ನಾಯ್ಕ್ ಪತ್ರದಲ್ಲಿ ಹೇಳಿದ್ದಾರೆ.