ಪೊಲೀಸರಿಗೇ ಧಮ್ಕಿ ಹಾಕಿದ ಭಾಗ್ಯಲಕ್ಷ್ಮಿ; ಧಮ್ ಇದ್ರೆ ಟಚ್ ಮಾಡು ಎಂದ ಮಹಿಳಾ ಅಧಿಕಾರಿ
ಬೆಂಗಳೂರಿನ ಕೃಷ್ಣಪ್ಪ ಎಂಬುವವರಿಗೆ ನೀಡಿದ್ದ 1.60 ಲಕ್ಷ ರುಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ 20ನೇ ಎಸಿಎಂಎಂ ಕೋರ್ಟ್ ಬಂಧನ ಆದೇಶ ನೀಡಿತ್ತು.
ಬೆಂಗಳೂರು(ನ.23): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಟ್ ವಾರೆಂಟ್'ನೊಂದಿಗೆ ಬಂದ ಪೊಲೀಸರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನಾಧಿಕಾರಿ ಭಾಗ್ಯಲಕ್ಷ್ಮಿ ಧಮ್ಕಿ ಹಾಕಿದ ಘಟನೆ ನಡೆದಿದೆ.
ಬೆಂಗಳೂರಿನ ಕೃಷ್ಣಪ್ಪ ಎಂಬುವವರಿಗೆ ನೀಡಿದ್ದ 1.60 ಲಕ್ಷ ರುಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ 20ನೇ ಎಸಿಎಂಎಂ ಕೋರ್ಟ್ ಬಂಧನ ಆದೇಶ ನೀಡಿತ್ತು.
ಆರೆಸ್ಟ್ ವಾರೆಂಟ್'ನೊಂದಿಗೆ ಬಂದ ಹೈಗ್ರೌಂಡ್ ಪೊಲೀಸರಿಗೆ ಭಾಗ್ಯಲಕ್ಷ್ಮಿ, 'ನಾನು ಕಮಿಷನರ್. ನನ್ನನ್ನು ನೀವು ಹೇಗೆ ಬಂಧಿಸುತ್ತೀರಿ?, ಧಮ್ ಇದ್ರೆ ನಂಗೆ ಟಚ್ ಮಾಡು ನೋಡ್ತೀನಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.