ಕರ್ನಾಟಕದಲ್ಲಿ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ತಲೆ ಎತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಮಿಷನರಿಗಳು ಕರ್ನಾಟಕದಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಿದ್ದಾರೆ. ಮಿಷನರಿಗಳು ಹಣದ ಆಮಿಷ ಒಡ್ಡಿ ಅಮಾಯಕ ಹಿಂದುಗಳನ್ನು ಮೂರ್ಖರನ್ನಾ ಗಿಸಿದ್ದಾರೆ’ ಎಂದು ಹೇಳಲಾಗಿದೆ. 

ಬೆಂಗಳೂರು (ಮೇ 18) : ಕರ್ನಾಟಕದಲ್ಲಿ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ತಲೆ ಎತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಮಿಷನರಿಗಳು ಕರ್ನಾಟಕದಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಿದ್ದಾರೆ. ಮಿಷನರಿಗಳು ಹಣದ ಆಮಿಷ ಒಡ್ಡಿ ಅಮಾಯಕ ಹಿಂದುಗಳನ್ನು ಮೂರ್ಖರನ್ನಾ ಗಿಸಿದ್ದಾರೆ’ ಎಂದು ಹೇಳಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಬರೆಯಲಾಗಿರುವ ಚಿತ್ರದ ಕೆಳಗೆ ‘ಇಎಸ್‌ಟಿಡಿ: ಏ. 16, 2018 ಬೆಂಗಳೂರು, ಕರ್ನಾಟಕ’ ಎಂದು ಬರೆಯಲಾಗಿದೆ. ‘5 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಸೋನಿಯಾ ಗಾಂಧಿ ರಾಜ್ಯದಲ್ಲಿ ಕ್ರೈಸ್ತ ಧರ್ಮ ಬೆಳೆಸಲು ವ್ಯಾಟಿಕನ್ ಸಿಟಿ ಮಿಷನರಿಗಳೊಂದಿಗೆ ಕೈಜೋಡಿಸಿದ್ದಾರೆ. 

ಅದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಲಾಗಿತ್ತು. ಈಗ ಯಾರು ಬೇಕಾದರೂ ಅರ್ಥೈಸಿ ಕೊಳ್ಳಬಹುದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಏಕೆ ಅಧಿಕಾರಕ್ಕೆ ಬರಬೇಕು ಎಂದು’ ಎಂಬ ಒಕ್ಕಣೆಯನ್ನೂ ಬರೆದು ಕೆಲವರು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. 

ವಾಸ್ತವವಾಗಿ ಈ ಚರ್ಚ್‌ನ ಹೆಸರು, ‘ಅವರ್ ಲೇಡಿ ಡೊಲೋರಸ್ ಚರ್ಚ್’. ಇದು ಇರುವುದು, ಮಹಾರಾಷ್ಟ್ರದ ಥಾಣೆಯಲ್ಲಿ. ಅದರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ.