ಹೆಚ್ಚಿನ ಚಿಕಿತ್ಸೆಗೆ ವಿದ್ವತ್ ಕೇರಳಕ್ಕೆ ರವಾನೆ ಸಾಧ್ಯತೆ
ನಲಪಾಡ್’ನಿಂದ ಹಲ್ಲೆಗೊಳಗಾಗಿರುವ ವಿದ್ವತ್’ಗೆ ಹೆಚ್ಚಿನ ಚಿಕಿತ್ಸೆಗಾಗಿ ಕೇರಳಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ.
ಬೆಂಗಳೂರು (ಮಾ. 05): ನಲಪಾಡ್’ನಿಂದ ಹಲ್ಲೆಗೊಳಗಾಗಿರುವ ವಿದ್ವತ್’ಗೆ ಹೆಚ್ಚಿನ ಚಿಕಿತ್ಸೆಗಾಗಿ ಕೇರಳಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ.
ಕಣ್ಣಿನ ಇನ್ಫೆಕ್ಷನ್ ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳದಲ್ಲಿ ಆಯುರ್ವೇದಿಕ್ ಟ್ರೀಟ್’ಮೆಂಟ್ ಕೊಡಿಸಲು ಚಿಂತನೆ ನಡೆಸಲಾಗಿದೆ. ಮಲ್ಯ ಆಸ್ಪತ್ರೆಯಲ್ಲಿ ಇನ್ನೊಂದು ಸಲ ಸ್ಕ್ಯಾನಿಂಗ್ ಮಾಡಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಸದ್ಯಕ್ಕೆ ವಿದ್ವತ್’ನನ್ನು ಸಂಬಂಧಿಕರ ಮನೆಯಲ್ಲಿ ಕುಟುಂಬಸ್ಥರು ಇರಿಸಿದ್ದಾರೆ. ವಿದ್ವತ್ ಗೆ ಇನ್ನೂ ಸಹ ವಿಶ್ರಾಂತಿಯ ಅಗತ್ಯವಿದೆ. ಮನೆಗೆ ಕರೆದುಕೊಂಡು ಬಂದ್ರೆ ಸ್ನೇಹಿತರು ವಿದ್ವತ್ ನೋಡಲು ಪದೇ ಪದೇ ಬರ್ತಾರೆ. ಹೀಗಾಗಿ ವಿದ್ವತ್ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಸಂಬಂಧಿಕರ ಮನೆಯಲ್ಲಿ ಇರಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.