ಬಾಲಕ ಶಿವು ಅನ್ನ-ಆಹಾರದ ಮಹತ್ವ ಸಾರಿ ಹೇಳಿರುವುದನ್ನು ಪ್ರತಿಯೊಬ್ಬರು ಅನುಸರಿಸಲೇಬೇಕಾಗಿದೆ. ಈ ನಡುವೆ ಮೂಕ ಪ್ರಾಣಿಯೊಂದ ಜೀವ ಜಲದ ಮಹತ್ವ ಸಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೀದರ್[ಜ.23] ಸಿದ್ಧಗಂಗಾ ಮಠದಲ್ಲಿ ಅನ್ನದ ಮಹತ್ವ ಸಾರಿದ ಬಾಲಕ ಶಿವು ಒಬ್ಬ ದಾರ್ಶನಿಕನಂತೆ ಕಾಣುತ್ತಿದ್ದರೆ ಈ ಗೋಮಾತೆ ಕುಡಿಯುವ ನೀರು ಈ ಜಗಕ್ಕೆ ಎಷ್ಟು ಅಗತ್ಯ ಎಂಬುದನ್ನು ಸಾರಿ ಸಾರಿ ಹೇಳಿದೆ.
ಬೀದಿ ಪಕ್ಕದ ನಲ್ಲಿಯನ್ನು ತಿರುಗಿಸುವ ಹಸು ತನಗೆ ಬೇಕಾದಷ್ಟು ನೀರು ಕುಡಿದು ನಂತರ ನಲ್ಲಿಯನ್ನು ತಾನೇ ಬಂದ್ ಮಾಡುತ್ತದೆ.
ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ
ಬೀದರ್ನ ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ಆಕಳು ನೀರು ಕುಡಿದು ದಣಿವಾರಿಸಿಕೊಂಡ ನಂತರ ಬಾಯಿಂದ ನಲ್ಲಿಯನ್ನು ಬಂದ್ ಮಾಡುವುದನ್ನು ಕಾಣಬಹುದು. ಬಾಯಾರಿಕೆಯಾದಾಗ ಪ್ರತಿ ಸಾರಿಯೂ ಈ ಆಕಳು ಹೀಗೆ ಮಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಮಾತು ಬಾರದ ಪಶುಗಳಿಂದಲೂ ಮಾನವ ಕಲಿಯಬೇಕಾದದ್ದು ಬಹಳ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 23, 2019, 6:17 PM IST