ಉತ್ತರ ಪ್ರದೇಶದ ‘ಹಜ್ ಭವನ’ದ ಗೋಡೆಗಳಿಗೆ ಕೇಸರಿ ಬಣ್ಣ
- ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆ
- ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ
ಲಕ್ನೋ: ಉತ್ತರ ಪ್ರದೇಶದ ಹಜ್ ಭವನ ಆವರಣ ಗೋಡೆಗಳಿಗೆ ಶುಕ್ರವಾರ ‘ಕೇಸರಿ’ ಬಣ್ಣವನ್ನು ಬಳಿಯಲಾಗಿದೆ. ಕೇಸರಿ ಬಣ್ಣವು ಹಿಂದೂಗಳಿಗೆ ಪವಿತ್ರವಾಗಿದೆ.
ಆದರೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಯುಪಿ ಸಚಿವ ಮೊಹ್ಸಿನ್ ರಝಾ, ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆಯೆಂದು ಹೇಳಿದ್ದಾರೆ.
ಇದರಲ್ಲೇನು ವಿವಾದಾತ್ಮಕ ವಿಷಯವಿಲ್ಲ; ಕೇಸರಿ ಬಣ್ಣವು ಶಕ್ತಿಯುತ ಹಾಗೂ ಹೊಳೆಯುವ ಬಣ್ಣ, ಅದರಿಂದ ಕಟ್ಟಡವು ಸುಂದರವಾಗಿ ಕಾಣಿಸುತ್ತದೆ, ಎಂದು ಅವರು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ‘ಕೇಸರಿಕರಣ’ ನಡೆಸುತ್ತಿದೆಯೆಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಹಿಂದೆ, ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ ಬಳಿಯಲಾಗಿದೆ.
(ಏಎನ್ಐ ಚಿತ್ರ)