Asianet Suvarna News Asianet Suvarna News

ಸಾಲುಮರದ ತಿಮ್ಮಕ್ಕ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ

ಕೇಂದ್ರ ಸರ್ಕಾರ 2019ನೇ ಸಾಲಿನ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ಕರ್ನಾಟಕಕ್ಕೆ ಕೇವಲ  5 ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ.

Union Government announces 4 Padma Vibhushan, 14 Padma Bhushan and 94 Padma Shri awards
Author
Bengaluru, First Published Jan 25, 2019, 10:11 PM IST

ಬೆಂಗಳೂರು, [ಜ.25]:  2019ನೇ ಸಾಲಿನ 4 ಪದ್ಮವಿಭೂಷಣ, 14 ಪದ್ಮಭೂಷಣ ಹಾಗೂ 94 ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಪೈಕಿ ಪದ್ಮಶ್ರೀ ಪ್ರಶಸ್ತಿಗೆ ಕರ್ನಾಟಕದ ಐವರು ಸಾಧಕರು ಪಾತ್ರರಾಗಿದ್ದಾರೆ.

ಕರ್ನಾಟಕ ಪೊಲೀಸರಿಗೆ ಈ ಬಾರಿ ಇಲ್ಲ ರಾಷ್ಟ್ರಪತಿ ಪದಕ..ಕಾರಣ ನಮ್ಮವರೆ!

ಸಾಮಾಜಿಕ ಕ್ಷೇತ್ರ ಸಾಧಕಿ ಸಾಲುಮರದ ತಿಮ್ಮಕ್ಕ[ಪರಿಸರ] , ಪುರಾತತ್ವ ಕ್ಷೇತ್ರ ಸಾಧಕಿ ಶಾರದಾ ಶ್ರೀನಿವಾಸನ್ [ಪ್ರಾಚ್ಯ ವಸ್ತು ಅಧ್ಯಯನ],  ಡ್ಯಾನ್ಸರ್ ಹಾಗೂ ಖ್ಯಾತ ನಟ ಪ್ರಭುದೇವ ಹಾಗೂ ಸರೋದ್ ವಾದಕ ರಾಜೀವ್ ತಾರಾನಾಥ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಭಾರತ ರತ್ನ

ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ:
ರಾಜ್ಯದ ಸಾಧಕರಿಗೆ ಪದ್ಮವಿಭೂಷಣ ಇಲ್ಲ.. ಪದ್ಮಭೂಷಣವೂ ಸಿಗಲಿಲ್ಲ. ಅಷ್ಟೇ ಅಲ್ಲದೇ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಗೌರವ ಸಿಗಲಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios