. ರಂಜಾನ್​ ಹಬ್ಬದ ಅಂಗವಾಗಿ ಸೈಯ್ಯದ್​ ಆಸೀಫ್​​ ಎಂಬುವರು ಉಚಿತ ಕೂಪನ್​ ನೀಡುತ್ತಿದ್ದರು. ಈ ಸಂದರ್ಭದಲ್ಲಿ  ಏಕಾಏಕಿ ಜನಮುಗಿಬಿದ್ದಿದ್ದರಿಂದ  ಕಾಲ್ತುಳಿತ ಸಂಭವಿಸಿದೆ.

ಬೆಂಗಳೂರು(ಸೆ.28): ನಗರದಲ್ಲಿ ಉಚಿತ ರೇಷನ್ ಕೂಪನ್'ಗಾಗಿ ಜನರು ಮುಗಿಬಿದ್ದ ಕಾರಣದಿಂದಾಗಿ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ ಇಬ್ಬರು ವೃದ್ಧರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಮಿಟ್ಟಗಾನಹಳ್ಳಿಯಲ್ಲಿ ನಡೆದಿದೆ.

ಆಂಧ್ರದ ಚಿತ್ತೂರು ಮೂಲದ ರೆಹಮತ್​ ಉನ್ನೀಸ್ (75)​, ಅನ್ವರ್​ ಪಾಷಾ(65) ಮೃತರು. ರಂಜಾನ್​ ಹಬ್ಬದ ಅಂಗವಾಗಿ ಸೈಯ್ಯದ್​ ಆಸೀಫ್​​ ಎಂಬುವರು ಉಚಿತ ಕೂಪನ್​ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಜನಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಯ್ಯದ್​ ಆಸೀಫ್​​ ಬಂಧಿಸಿದ್ದಾರೆ.