ಕಾಂಗ್ರೆಸ್​ನಲ್ಲಿದ್ದಾಗ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಈಗ ಬಿಜೆಪಿಗೆ ಸೇರಿ ಶಾ ಎದುರು ಕೈಕಟ್ಟಿ ನಿಲ್ಲುವ ಅವಶ್ಯಕತೆ ಇರಲಿಲ್ಲ

ಬೆಂಗಳೂರು(ಮಾ.24): ಕೃಷ್ಣಗೆ ರಾಜಕೀಯ ಅನುಭವ ಇರುವಷ್ಟು ಅಮಿತ್​ ಶಾಗೆ ವಯಸ್ಸಾಗಿಲ್ಲ, ಹೀಗಿರುವಾಗ ಸ್ವಾಭಿಮಾನ ಮರೆತು ಅಮಿತ್​ ಶಾ ಎದುರು ಕೈ ಕಟ್ಟಿ ನಿಲ್ಲುವ ಸ್ಥಿತಿ ಬರಬಾರದಿತ್ತು ಅಂತಾ ಖರ್ಗೆ ಕುಟುಕಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್​ ತೊರೆದು ಎಸ್​ ಎಂ ಕೃಷ್ಣ ಬಿಜೆಪಿ ಸೇರಿದ್ದರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಇಂತಹದೊಂದು ಹೇಳಿಕೆ ನೀಡಿದ್ದರು. ಕಾಂಗ್ರೆಸ್​ನಲ್ಲಿದ್ದಾಗ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಈಗ ಬಿಜೆಪಿಗೆ ಸೇರಿ ಶಾ ಎದುರು ಕೈಕಟ್ಟಿ ನಿಲ್ಲುವ ಅವಶ್ಯಕತೆ ಇರಲಿಲ್ಲ ಅಂತಾ ಹೇಳಿದ್ದರು. ಖರ್ಗೆ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್​ ಕುಮಾರ್​ ತಿರುಗೇಟು ನೀಡಿದ್ದಾರೆ.

ಖರ್ಗೆ ರಾಜಕೀಯಕ್ಕೆ ಬಂದಿದ್ದು ಯಾವಾಗ? ರಾಹುಲ್​ ಗಾಂಧಿ ವಯಸ್ಸು ಎಷ್ಟು? ಈಗ ಖರ್ಗೆ ರಾಹುಲ್​ ಮುಂದೆ ಕೈ ಕಟ್ಟಿ ನಿಲ್ಲುತ್ತಿಲ್ಲವೇ ಅಂತಾ ಸುರೇಶ್​ ಕುಮಾರ್​ ಖರ್ಗೆಗೆ ಟ್ವೀಟರ್ ಮೂಲಕ ಟಾಂಗ್​ ಕೊಟ್ಟಿದ್ದಾರೆ..