ನಗದು ವಹಿವಾಟು ಮಿತಿಯನ್ನು ಬಜೆಟ್‌ನಲ್ಲಿ .3 ಲಕ್ಷ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು .2 ಲಕ್ಷಕ್ಕಿಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ವಿತ್ತೀಯ ಮಸೂದೆಯಲ್ಲಿ ಈ ಅಂಶವಿದೆ.
ನವದೆಹಲಿ(ಮಾ.22): ನಗದು ವಹಿವಾಟು ಮಿತಿಯನ್ನು ಬಜೆಟ್ನಲ್ಲಿ .3 ಲಕ್ಷ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು .2 ಲಕ್ಷಕ್ಕಿಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ವಿತ್ತೀಯ ಮಸೂದೆಯಲ್ಲಿ ಈ ಅಂಶವಿದೆ.
ವಿತ್ತೀಯ ಮಸೂದೆಯಲ್ಲಿ 40 ತಿದ್ದುಪಡಿ ಗಳನ್ನು ಮಂಡಿಸಲಾಗಿದ್ದು, ಇವುಗಳಿಗೆ ವಿಪಕ್ಷಗಳಾದ ಟಿಎಂಸಿ, ಬಿಜೆಡಿ ಹಾಗೂ ಆರ್ಎಸ್ಪಿ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಈ ವಿರೋಧವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ತಳ್ಳಿಹಾಕಿದರು.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿರುವ ವಿತ್ತೀಯ ಮಸೂದೆ ಯಲ್ಲಿ ಈ ಪ್ರಸ್ತಾಪಗಳನ್ನು ಇಡಲಾಗಿದೆ. ಮಸೂದೆ ಅಂಗೀಕಾರವಾದ ಬಳಿಕ ಜುಲೈ 1ರಿಂದ ಈ ನಿಯಮಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದಾಗಿ ಪಾನ್ ಕಾರ್ಡ್ ಗೆ ಆಧಾರ್ ಸಂಯೋಜಿಸದೇ ಹೋದರೆ, ಅದು ಜು.1 ರಿಂದ ಅಮಾನ್ಯ ಎನ್ನಿಸಿಕೊಳ್ಳಲಿದೆ. ವೇತನ ಸೇರಿದಂತೆ ಅನೇಕ ವಿತ್ತೀಯ ವಹಿವಾ ಟಿಗೆ ಪಾನ್ ಸಂಖ್ಯೆ ಕಡ್ಡಾಯವಾಗಿದೆ.
ವರದಿ: ಕನ್ನಡ ಪ್ರಭ
