ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತಂತೆ ದಿನೇ ದಿನೇ ಸಾಕಷ್ಟು ಅನುಮಾನಗಳು ಹೆಚ್ಚಾಗ್ತೀವೆ. ಕರ್ನಾಟಕ ರಾಜ್ಯ ಸರ್ಕಾರದ ಭಾರೀ ಹಗರಣವೊಂದನ್ನು ಬಯಲಿಗೆಳೆಯೋ ಸಾಹಸದಲ್ಲಿ ತಿವಾರಿ ಕೊಲೆಯಾಗಿದ್ದಾರಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಹೀಗಾಗಿ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದೆ.

ಬೆಂಗಳೂರು(ಮೇ.23): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಲು ನಿರ್ಧಾರ ಮಾಡಿದೆ. ಈ ಬೆಳವಣಿಗೆ ನಡೆಯುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕಟ ಶುರುವಾದಂತಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತಂತೆ ದಿನೇ ದಿನೇ ಸಾಕಷ್ಟು ಅನುಮಾನಗಳು ಹೆಚ್ಚಾಗ್ತೀವೆ. ಕರ್ನಾಟಕ ರಾಜ್ಯ ಸರ್ಕಾರದ ಭಾರೀ ಹಗರಣವೊಂದನ್ನು ಬಯಲಿಗೆಳೆಯೋ ಸಾಹಸದಲ್ಲಿ ತಿವಾರಿ ಕೊಲೆಯಾಗಿದ್ದಾರಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಹೀಗಾಗಿ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದೆ.

ಅನುರಾಗ್ ತಿವಾರಿ ಕೇಸನ್ನು ಯುಪಿ ಸರ್ಕಾರ ಸಿಬಿಐ ಗೆ ವಹಿಸಲು ನಿರ್ಧಾರ ಮಾಡ್ತಿದ್ದಂತೆ ಸಿದ್ದು ಸರ್ಕಾರಕ್ಕೆ ನಡುಕ ಶುರುವಾಗಿದೆ. ಬಿಪಿಎಲ್ ಫಲಾನುಭವಿಗಳ ಆಯ್ಕೆಯಲ್ಲಿ ನಡೆದ 150 ಕೋಟಿ ಗೋಲ್ಮಾಲ್ ಹಗರಣವನ್ನ ಬಯಲಿಗೆಳೆಯಲು ಅನುರಾಗ್ ತಿವಾರಿ ಸಜ್ಜಾಗಿದ್ರಂತೆ. ಆಕ್ರಮದ ಕುರಿತು ವಿಧಾನಸಭೆ ಅರ್ಜಿಗಳ ಸಮಿತಿಗೆ ವರದಿ ಸಲ್ಲಿಸಲು ಕೂಡ ಅನುರಾಗ್ ತಿವಾರಿ ತಯಾರಾಗಿದ್ರು ಅನ್ನೋ ಮಾಹಿತಿ ದಾಖಲೆಗಳಿಂದ ತಿಳಿದುಬಂದಿದೆ. ಹಗರಣ ಬಯಲಿಗೆಳೆದ್ರೆ ನಮ್ಮ ಬಣ್ಣ ಬಯಲಾಗುತ್ತೇ ಅಂಥ ಅನುರಾಗ್ ತಿವಾರಿಯನ್ನ ಕೋಲೆ ಮಾಡಿಲಾಗಿದೆ ಎಂಬ ಅನುಮಾನ ದಟ್ಟವಾಗಿ ಕೇಳಿ ಬರುತ್ತಿದೆ.

ಇನ್ನು ತಿವಾರಿ ನಿಗೂಢ ಸಾವಿನ ಸಂಬಂಧ ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ಉತ್ತರಪ್ರದೇಶದ ಮುಖ್ಯಕಾರ್ಯದರ್ಶಿಗೆ 8 ಪುಟಗಳ ಪತ್ರ ಬರೆದಿದ್ದಾರೆ. ಅನುರಾಗ್ ತಿವಾರಿಯ ನಿಗೂಢ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ. ಸಿಬಿಐಗೆ ವಹಿಸಿದ ಮಾತ್ರಕ್ಕೆ ಅನುರಾಗ್ ತಿವಾರಿಯ ಸಾವಿಗೆ ನ್ಯಾಯ ಸಿಗೋದು ಅನುಮಾನವಾಗಿದೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಒಟ್ಟಿನಲ್ಲಿ ಅನುರಾಗ್ ತಿವಾರಿಯ ಕೇಸ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ. ತಿವಾರಿಯ ನಿಗೂಢ ಸಾವಿನ ರಹಸ್ಯ ತಿಳಿಯಲು ಸಿಬಿಐ ತನಿಖೆ ಮುಗಿಯುವವರೆಗೂ ಕಾಯಲೇಬೇಕು.