ನೋಟ್ ಬ್ಯಾನ್ ಅಲ್ಲ ಬದಲಿಗೆ ದೊಡ್ಡ ಸ್ಕ್ಯಾಮ್ : ಕೇಜ್ರಿ ಟಾಂಗ್
ಹಣಕಾಸು ಅಡಚಣೆಯಿಂದಾಗಿ ದಿನ ನಿತ್ಯದ ಅಗತ್ಯ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ಇದೊಂದು ದೊಡ್ಡ ಹಗರಣ ಎಂದು ಆಜಾದ್ಪುರ ಮಂಡಿಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿ (ನ.17): ಹಣಕಾಸು ಅಡಚಣೆಯಿಂದಾಗಿ ದಿನ ನಿತ್ಯದ ಅಗತ್ಯ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ಇದೊಂದು ದೊಡ್ಡ ಹಗರಣ ಎಂದು ಆಜಾದ್ಪುರ ಮಂಡಿಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಲ್ಯರಂಥ ಉದ್ಯಮಿಗಳ ರಕ್ಷಣೆಗೆ ನಿಂತಿದೆ. ಕಪ್ಪುಹಣ ಇರುವವರ ಹೆಸರುಗಳನ್ನು ಸರ್ಕಾರ ಮೊದಲು ಬಹಿರಂಗಗೊಳಿಸಲಿ. ಕಪ್ಪುಹಣ ತಡೆಯುವ ನೆಪದಲ್ಲಿ ಜನರಿಗೆ ಮೋದಿ ವಂಚಿಸಿದ್ದಾರೆ. ಇದು 8 ಲಕ್ಷ ಕೋಟಿ ಮೌಲ್ಯದ ಭಾರಿ ಹಗರಣ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಜನಾರ್ದನರೆಡ್ಡಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ದುಬಾರಿ ವೆಚ್ಚದಲ್ಲಿ ತಮ್ಮ ಪುತ್ರಿಯ ಮದುವೆ ಮಾಡಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಹೇಳಲಿ.
ದೇಶದ ಜನಸಾಮಾನ್ಯರು ನಿತ್ಯ ಹಣಕ್ಕಾಗಿ ಬ್ಯಾಂಕ್ಗಳ ಮುಂದೆ ನಿಂತು ಪರದಾಡುತ್ತಿದ್ದಾರೆ. ಜನರು ತಮ್ಮ ಮಕ್ಕಳ ಮದುವೆಗೆ ಹಣ ಪಡೆಯಲು ಕಷ್ಟಪಡುತ್ತಿದ್ದಾರೆ.
ಆದರೆ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ ಕೇಜ್ರಿ ಪ್ರಶ್ನಿಸಿದ್ದಾರೆ.