ಕಂಪನಿಗಳಲ್ಲಿ ನೌಕರರಿಗೆ ನಿರ್ದಿಷ್ಟ ಗುರಿ ನೀಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ದೆಹಲಿಯಲ್ಲಿ ಕೆಲ ಕ್ರಿಮಿನಲ್‌ಗಳು ಬಾಲಾಪರಾಧಿಗಳನ್ನು ಬಳಸಿಕೊಂಡು, ಮೊಬೈಲ್‌ ಕಳ್ಳತನ ಜಾಲದಲ್ಲಿ ತೊಡಗಿದ್ದು, ವಾರದಲ್ಲಿ ಇಂತಿಷ್ಟು ಮೊಬೈಲ್‌ಗಳ ಕಳ್ಳತನ ನಡೆಸಬೇಕೆಂಬ ಗುರಿ ನಿಗದಿ ಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.
ಕಂಪನಿಗಳಲ್ಲಿ ನೌಕರರಿಗೆ ನಿರ್ದಿಷ್ಟ ಗುರಿ ನೀಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ದೆಹಲಿಯಲ್ಲಿ ಕೆಲ ಕ್ರಿಮಿನಲ್ಗಳು ಬಾಲಾಪರಾಧಿಗಳನ್ನು ಬಳಸಿಕೊಂಡು, ಮೊಬೈಲ್ ಕಳ್ಳತನ ಜಾಲದಲ್ಲಿ ತೊಡಗಿದ್ದು, ವಾರದಲ್ಲಿ ಇಂತಿಷ್ಟು ಮೊಬೈಲ್ಗಳ ಕಳ್ಳತನ ನಡೆಸಬೇಕೆಂಬ ಗುರಿ ನಿಗದಿ ಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.
ಸ್ಲಮ್ ಬಾಲಕರನ್ನು ಬಳಸಿಕೊಂಡು, ಹೊಸ ಕಾರ್ಯ ವಿಧಾನದ ಮೂಲಕ ಈ ಅಪರಾಧ ಎಸಗಲಾಗುತ್ತಿದೆ. ಈ ಸಂಬಂಧ ಇಬ್ಬರು ಬಾಲಪರಾಧಿ ಆರೋಪಿಗಳನ್ನು ಬಂಧಿಸಿದ ಬಳಿಕ ಪೊಲೀಸರಿಗೆ ಈ ವಿಷಯ ಗೊತ್ತಾಗಿದೆ. ಕಳವು ಮಾಡಿದ ಮೊಬೈಲ್ಗಳನ್ನು ನೇಪಾಳ, ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ.
