Asianet Suvarna News Asianet Suvarna News

ಚಿಲ್ಲರೆ ವಿವಾದ-ಆತ್ಮಹತ್ಯೆ: ಕಂಡಕ್ಟರ್ ಶವ ಪತ್ತೆ; ಸಾರಿಗೆ ನೌಕರರಿಂದ ಪ್ರತಿಭಟನೆ

Suicide Over Change Conductors Body Found KSRTC Employees protest

ಮಂಗಳೂರು (ಸೆ.27): ಕಳೆದ ಭಾನುವಾರ  ಕುಕ್ಕೆಸುಬ್ರಮಣ್ಯದ  ಕುಮಾರಧಾರ ನದಿಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ದೇವದಾಸ್​ ಶೆಟ್ಟಿ ಪಂಜ ಸಮೀಪ ಪತ್ತೆಯಾಗಿದೆ.

ದೇವದಾಸ್​ ಶೆಟ್ಟಿ ದೇಹ ಪತ್ತೆಹಚ್ಚಲು ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ  ಭಾನುವಾರದಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ​ಶೆಟ್ಟಿ  ಶವ ಪಂಜ ಸಮೀಪ ಪತ್ತೆಯಾಗಿದೆ.

ಚಿಲ್ಲರೆ ವಿಚಾರವಾಗಿ ಮಹಿಳಾ ಪ್ರಯಾಣಿಕಳೊಬ್ಬಳ ಜತೆ ನಡೆದ ವಿವಾದದಿಂದ ಬೇಸತ್ತು ಮಂಗಳೂರಲ್ಲಿ  ಕಂಡಕ್ಟರ್​ ನದಿಗೆ ಹಾರಿ ಸಾವನ್ನಪ್ಪಿದ್ದರು.

ಪ್ರತಿಭಟನೆ:

ದೇವದಾಸ್ ಶೆಟ್ಟಿ ಆತ್ಮಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಮಿಕ ‌ವಿಭಾಗ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೆಎಸ್ಆರ್‌ಟಿಸಿ ಬಸ್ಸು  ನಿಲ್ದಾಣ ಮುಂಬಾಗದಲ್ಲಿ  ನೂರಾರು ಕಂಡಕ್ಟರ್’ಗಳು​ ಸೇರಿ ಪ್ರತಿಭಟನೆ ನಡೆಸಿದರು.

ಆತ್ಮಹತ್ಯೆಗೆ‌ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ನೌಕರರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios