ಕರಮಾಧ್ ಹಾಗೂ ಚಿಪ್ಪಂದೂರ್ ಅರಣ್ಯದಲ್ಲಿ ಸಿಆರ್'ಪಿಎಫ್'ನ ಕೋಬ್ರಾ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ರಾಂಚಿ(ನ.23): ಮವೋವಾದಿಗಳಿಂದ ತತ್ತರಿಸಿ ಹೋಗಿರುವ ಲಾಥೂರ್ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಕಮಾಂಡೋಗಳು ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ಕರಮಾಧ್ ಹಾಗೂ ಚಿಪ್ಪಂದೂರ್ ಅರಣ್ಯದಲ್ಲಿ ಸಿಆರ್'ಪಿಎಫ್'ನ ಕೋಬ್ರಾ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್ ಸಮವಸ್ತ್ರ ಧರಿಸಿಸಿರುವ ಆರು ಮೃತದೇಹಗಳು ಪತ್ತೆಯಾಗಿದ್ದು, ಐಎನ್ಎಸ್ಎಎಸ್, ಎಸ್ಎಲ್ಆರ್ ಬಂಧೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.