ಅಮಿತ್ ಶಾ ಹಿಂದುವೋ,ಜೈನರೋ? ಟಾಂಗ್'ಗೆ ಪ್ರತಿ ಟಾಂಗ್
ಸಿದ್ದರಾಮಯ್ಯ ಅಹಿಂದ ಅಲ್ಲ, ಅಹಿಂದು ಎಂದು ಶಾ ಟೀಕಿಸಿದ್ದರು.
ಸಿಎಂ ಸಿದ್ದು ನನ್ನನ್ನು ಅಹಿಂದು ಎಂದು ಕರೆಯುತ್ತಿರುವ ಅಮಿತ್ ಶಾ ಹಿಂದುವೋ ಅಥವಾ ಜೈನರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಅವರಿಗೆ ನನ್ನನ್ನು ಕಂಡರೆ ಭಯ. ಆದ್ದರಿಂದ ನಾನು ಎಲ್ಲಿ ಹೋಗುತ್ತೇನೋ ಅಲ್ಲಿ ಹಿಂಬಾಲಿಸುತ್ತಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ ಎಂದರು. ಸಿದ್ದರಾಮಯ್ಯ ಅಹಿಂದ ಅಲ್ಲ, ಅಹಿಂದು ಎಂದು ಶಾ ಟೀಕಿಸಿದ್ದರು.